ಆರು ಗತಿಯೆನಗೆ

ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ
ವಿಕೃತಿಯನೆ ನೋಡಿದೆನು ಅದು ಸತ್ಯವೆಂದು
ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು
ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ.

ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ
ಮಾನಾಪಮಾನಮಂ ಲೆಕ್ಕಿಸದೆ ನಡೆದು
ಎನ್ನ ಹಿರಿತನಕಾಗಿ ಗರ್ವದಲಿ ದರ್ಪದಲಿ
ಜನರ ಹಿಂಸಿಸಿ ಮೆರೆದೆ ಸಂತೋಷದಿಂದ.

ಪರಹಿತಕೆ ಮನಗೊಡದೆ ಎನ್ನ ನುಡಿ ಎನ್ನ ನಡೆ
ಸರುವವೆಂದರಿಯುತಲಿ ತೆಗಳಿದೆನು ಜನರ
ಪರಹಿಂಸೆ ಮರೆ ಮೋಸ ಸುಳ್ಳು ಮದ ಲೋಭದಿಂ
ಪರ ಮರೆತು ಸ್ವಾರ್ಥದಿಂ ಮೆರೆದಾಯ್ತು ಇನ್ನು.

ಒಂದು ನುಡಿ ಒಂದು ನಡೆ ಒಂದು ಮನ ಒಂದು ಕ್ರಿಯೆ
ನಿಂದೆನ್ನ ಹೃದಯವನು ನಿರ್ಮಲಂಗೆಯ್ದು
ತಂದೆ ನಿನ್ನಡಿಗಳಲಿ ಮನವೂರಿ ನೆನೆವಂತೆ
ಬಂದೆನ್ನ ಕಾಪಿಡೈ ಕೈ ಬಿಡದೆ ನಿತ್ಯ.

ನಿನ್ನ ಹೊರತಿನ್ನಾರು ಗತಿಯೆನಗೆ ಜಗದಲ್ಲಿ
ಎನ್ನಂತರಂಗದಲಿ ನೆಲಸಯ್ಯ ಶ್ರೀಶ
ಹೊನ್ನು ಮಣ್ಣುಗಳಿಂದ ಭ್ರಾಂತನಾಗುತ ತೊಳಲಿ
ಅನ್ಯರಿ೦ಗಾಳಾಗಿ ಬಾಳ್ಗೆಡಿಸಿಕೊಂಡೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಳ್ಳು ಗುಲಾಬಿಯ ಮಧ್ಯೆ
Next post ಇವರಾರೆಂದು ಹೇಳಮ್ಮ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…