ಗಾಳಿ ಪಟ

ಇದು ಆಷಾಢ ಮಾಸದ ಕಾಲ
ಕೂಗಿ ಕರೆದನು ಮಿತ್ರರ ಬಾಲು
ಓಡಿ ಬಂದರು ಕಾಳ ರಘು ಮಾಲ
ಕುಳಿತರು ಗಾಳಿಪಟವನು ಮಾಡಲು

ಹುಡುಕಿ ತಂದರು ಹಳೆಯ ಬಿದಿರು
ಕುಡುಗೋಲಿನಲ್ಲಿ ಸೀಳಿದರು
ಕಾಡಿಗೆ ಓಡಿ ಹುಡುಕಿದರು
ಬಿಲ್ವದ ಹಣ್ಣನು ತಂದರು

ಹಾಳೆಯನೊಂದನು ಹರಡಿದರು
ಅಳತೆಗೆ ಸರಿಸಮ ಕತ್ತರಿಸಿದರು
ಬಿದಿರಿಗೆ ಅಂಟನು ಸವರಿದರು
ಅಡ್ಡಡ್ಡ ಉದ್ದುದ್ದ ಹಚ್ಚಿದರು

ಹೊಸೆದರು ನೂರಡಿ ಹಗ್ಗವನು
ಕಟ್ಟಲು ಸೂತ್ರದ ದಾರವನು
ಧೋತ್ರದ ದಡಿಯಾಯ್ತು ಫರಫರಿ
ಬಾಲಂಗೋಸಿಯನು ಇಳಿಯಬಿಟ್ಟರು

ತಮ್ಮೆತ್ತರದ ಗಾಳಿಪಟವನು
ಬಯಲಲಿ ಕಾಳ ಹಿಡಿದು ನಿಂತನು
ದೂರದಿ ದಾರವ ಹಿಡಿದನು ಬಾಲನು
ರಘು ಬಾಲಂಗೋಸಿ ಹಿಡಿದು ನಿಂತನು

ಕೈಬಿಡೋ ಕಾಳ ಕೂಗಿದ ಬಾಲನು
ಮೇಲಕೆ ತೂರಿದ ಪಟವ ಕಾಳನು
ಬಾಲನು ಹಿಡಿದ ದಾರವನೆಳೆದನು
ಮೇಲಕೆ ಹಾರಿತು ಮಾಡುವ ಸದ್ದನು

ಫರಫರಿ ಮಾಡಿತು ಗುಂಯ್‌ನೋ ಸದ್ದು
ಹರಡಿತು ಊರಿನ ತುಂಬೆಲ್ಲ
ನೆರೆದರು ಮೈದಾನದಲಿ ಜನರು
ಮಕ್ಕಳ ಜಾಣ್ಮೆಯ ಹೊಗಳಿದರು

ಸಂಜೆಯ ತನಕ ಆಡಿಸಲವನು
ಬಳಲಿ ಅಸ್ತಮಿಸಿದ ಸೂರ್ಯನು
ಇಬ್ಬರು ಸೇರಿ ಎಳೆದರು ಹಗ್ಗವನು
ಒಬ್ಬನು ದುಂಡಗೆ ಸುತ್ತಿದನು

ಏರಿದ ಪಟವನು ಇಳಿಸಿಬಿಟ್ಟರು
ಚುಂಬಿಸಿ ಅದನು ಮನೆಗೆ ಒಯ್ದರು
ಕತ್ತಲು ಕವಿಯಲು ಚದುರಿದರು
ಮನೆಯಲಿ ಕಥೆಯನು ಹೇಳಿದರು

ತಿಂಗಳು ಪೂರ್ತಿ ಆಡಿದರು
ಶ್ರಾವಣ ಬರಲು ಮುದುರಿದರು
ಪಟ ದಾರಗಳನ್ನು ಜೋಪಾನದಲಿ
ಇಟ್ಟನು ಬಾಲ ಮೇಲಟ್ಟದಲಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...