ಗಾಳಿ ಪಟ

ಇದು ಆಷಾಢ ಮಾಸದ ಕಾಲ
ಕೂಗಿ ಕರೆದನು ಮಿತ್ರರ ಬಾಲು
ಓಡಿ ಬಂದರು ಕಾಳ ರಘು ಮಾಲ
ಕುಳಿತರು ಗಾಳಿಪಟವನು ಮಾಡಲು

ಹುಡುಕಿ ತಂದರು ಹಳೆಯ ಬಿದಿರು
ಕುಡುಗೋಲಿನಲ್ಲಿ ಸೀಳಿದರು
ಕಾಡಿಗೆ ಓಡಿ ಹುಡುಕಿದರು
ಬಿಲ್ವದ ಹಣ್ಣನು ತಂದರು

ಹಾಳೆಯನೊಂದನು ಹರಡಿದರು
ಅಳತೆಗೆ ಸರಿಸಮ ಕತ್ತರಿಸಿದರು
ಬಿದಿರಿಗೆ ಅಂಟನು ಸವರಿದರು
ಅಡ್ಡಡ್ಡ ಉದ್ದುದ್ದ ಹಚ್ಚಿದರು

ಹೊಸೆದರು ನೂರಡಿ ಹಗ್ಗವನು
ಕಟ್ಟಲು ಸೂತ್ರದ ದಾರವನು
ಧೋತ್ರದ ದಡಿಯಾಯ್ತು ಫರಫರಿ
ಬಾಲಂಗೋಸಿಯನು ಇಳಿಯಬಿಟ್ಟರು

ತಮ್ಮೆತ್ತರದ ಗಾಳಿಪಟವನು
ಬಯಲಲಿ ಕಾಳ ಹಿಡಿದು ನಿಂತನು
ದೂರದಿ ದಾರವ ಹಿಡಿದನು ಬಾಲನು
ರಘು ಬಾಲಂಗೋಸಿ ಹಿಡಿದು ನಿಂತನು

ಕೈಬಿಡೋ ಕಾಳ ಕೂಗಿದ ಬಾಲನು
ಮೇಲಕೆ ತೂರಿದ ಪಟವ ಕಾಳನು
ಬಾಲನು ಹಿಡಿದ ದಾರವನೆಳೆದನು
ಮೇಲಕೆ ಹಾರಿತು ಮಾಡುವ ಸದ್ದನು

ಫರಫರಿ ಮಾಡಿತು ಗುಂಯ್‌ನೋ ಸದ್ದು
ಹರಡಿತು ಊರಿನ ತುಂಬೆಲ್ಲ
ನೆರೆದರು ಮೈದಾನದಲಿ ಜನರು
ಮಕ್ಕಳ ಜಾಣ್ಮೆಯ ಹೊಗಳಿದರು

ಸಂಜೆಯ ತನಕ ಆಡಿಸಲವನು
ಬಳಲಿ ಅಸ್ತಮಿಸಿದ ಸೂರ್ಯನು
ಇಬ್ಬರು ಸೇರಿ ಎಳೆದರು ಹಗ್ಗವನು
ಒಬ್ಬನು ದುಂಡಗೆ ಸುತ್ತಿದನು

ಏರಿದ ಪಟವನು ಇಳಿಸಿಬಿಟ್ಟರು
ಚುಂಬಿಸಿ ಅದನು ಮನೆಗೆ ಒಯ್ದರು
ಕತ್ತಲು ಕವಿಯಲು ಚದುರಿದರು
ಮನೆಯಲಿ ಕಥೆಯನು ಹೇಳಿದರು

ತಿಂಗಳು ಪೂರ್ತಿ ಆಡಿದರು
ಶ್ರಾವಣ ಬರಲು ಮುದುರಿದರು
ಪಟ ದಾರಗಳನ್ನು ಜೋಪಾನದಲಿ
ಇಟ್ಟನು ಬಾಲ ಮೇಲಟ್ಟದಲಿ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...