Home / ಬಾಲ ಚಿಲುಮೆ / ಕವಿತೆ / ಮರಿ ಇಲಿ ಸಾಹಸ

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು
ಅವರ ಮನೆಯಲಿ ಇಲಿಗಳು ನೂರು
ಎಲ್ಲೆಂದರಲ್ಲಿ ಅವುಗಳ ವಾಸ
ಬೇಡ ರಾಯರಿಗಿದು ತರಲೆ ಸಹವಾಸ

ಮಗಳ ಬೂಟು ರಾಯರ ಹ್ಯಾಟು
ಹೆಂಡತಿ ಸೀರೆ ಮಗನ ಸೂಟು
ಸೋಪು ಬ್ರೆಷ್ ಕಿಟಕಿಯ ಕರ್ಟನ್
ಎಲ್ಲವು ಆದವು ರೂಪದಿ ಮಾಡ್ರನ್

ಇಲಿಗಳ ಓಡಿಸೆ ಅವರ ಪ್ರಯತ್ನ
ಆದವು ಎಲ್ಲಾ ವಿಫಲಯತ್ನ
ರೋಸಿದ ರಾಯರು ತಂದರು ಬೆಕ್ಕು
ಅಡಗಿಸಲೋಸುಗ ಇಲಿಗಳ ಸೊಕ್ಕು

ಬೆಕ್ಕನು ಕಂಡು ಇಲಿಗಳು ನೊಂದು
ಕರೆದವು ಕೂಡಲೆ ಸಭೆಯನ್ನೊಂದು
ಬೆಕ್ಕಿನ ಕಾಟವು ಸಾಕೇಸಾಕು
ತಪ್ಪಿಸಿಕೊಳ್ಳಲು ಪರಿಹಾರವು ಬೇಕು

ಕೂಡಲೆ ಒಂದು ಹಿರಿ ಇಲಿಬಂದು
ಗಣಗಣ ಗಂಟೆಯ ತಂದಿತು ಒಂದು
ಕಟ್ಟಿರಿ ಶತ್ರುಗೆ ಕೊರಳಿಗೆ ಎಂದು
ಆಡಲೆ ಇಲ್ಲ ಮಾತನು ಒಂದೂ

ಶತಶತಮಾನದ ಈ ಸಮಸ್ಯೆ
ಪರಿಹಾರಕ್ಕೆ ಮಾಡಿದ್ದವು ತಪಸ್ಸೇ
ಆದರು ಸಾಧ್ಯವು ಆಗದು ಎಂದು
ಗೋಣನು ಕೆಳಗೆ ಹಾಕಿದವಂದು

ಕೈಚೆಲ್ಲಿ ಕುಳಿತ ಇಲಿಗಳ ಗುಂಪು
ಬೆಕ್ಕಿಗೆ ಸಿಕ್ಕವು ಭೋಜನ ಸೊಂಪು
ಮರಿ ಇಲಿಯೊಂದು ಹಾಕಿತು ಲೆಕ್ಕ
ಹುಡುಕಲೆ ಬೇಕು ಉಪಾಯವು ಪಕ್ಕ

ಮರಿಇಲಿ ರಾಯರ ಕೋಣೆಯಲಿ
ಶತಪಥ ಹೆಜ್ಜೆಯ ಹಾಕುತಲಿ
ನೆನೆಯಿತು ಗಣಪನ ಮನದಲ್ಲಿ
ಹೊಳೆಯಿತು ಸಂಚು ತಲೆಯಲ್ಲಿ

ರಾಯರು ನಿತ್ಯ ಗುಳಿಗೆಯ ನುಂಗಿ
ನಿದ್ರಿಸುವರು ನೆಮ್ಮದಿಯಲಿ ಮಲಗಿ
ಮರಿಇಲಿ ತಂದು ನಿದ್ರೆಯ ಗುಳಿಗೆ
ಹಾಕಿತು ಬೆಕ್ಕಿನ ತಟ್ಟೆಯ ಒಳಗೆ

ಒಡತಿಯು ತಂದಳು ಹಾಲನ್ನು
ಮುದದಲಿ ಕರೆದಳು ಬೆಕ್ಕನ್ನು
ಕಣ್ಮುಚ್ಚಿ ಕುಡಿಯಿತು ಹಾಲನ್ನು
ನಿದ್ರೆಗೆ ಅಪ್ಪಿತು ಧರೆಯನ್ನು

ಮರಿಇಲಿ ಆಗಲೆ ಗಂಟೆಯನು
ಬಿಗಿಯಿತು ಬೆಕ್ಕಿನ ಕೊರಳನ್ನು
ಮರಿಇಲಿ ಸಾಹಸ ಕೊಂಡಾಡಿದವು
ಸಂತಸದೀ ಕುಣಿಕುಣಿದಾಡಿದವು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...