Home / ಲೇಖನ / ವಿಜ್ಞಾನ / ಬಾಹ್ಯಾಕಾಶದ ಕಥೆ

ಬಾಹ್ಯಾಕಾಶದ ಕಥೆ

ಬಾಹ್ಯಾಕಾಶಕ್ಕೆ ತೆರಳುವ ವಿಜ್ಞಾನಿಗಳು ವಾರ ಎರಡು ವಾರ ತಿಂಗಳುಗಟ್ಟಲೆ ಹೇಗೆ ಜೀವಿಸುವರೆಂಬುದೇ ನಿಗೂಢ ಪವಾಡ, ಇದೊಂದು ಸಾಹಸದ ಕತೆ.

ಅಲ್ಲಿ- ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪ್ಯಾಕೆಟ್ ಮಾಡಲಾದ ಆಹಾರ ಇಲ್ಲವೇ ಮಾತ್ರೆಗಳು ತಿಂದು ಮೂತ್ರ ಕುಡಿದು ಸಂಶೋಧನೆ ಮಾಡುವರು.

ಈಗೀಗ ಅಮೆರಿಕದ ನಾಸಾದ ಪ್ರಯೋಗ ಸಿದ್ಧಿಸಿದೆ. ಅಲ್ಲಿ ತರಕಾರಿ ಬೆಳೆಯುವ ಹಚ್ಚನೆ ತರಕಾರಿ ತಿನ್ನಬಹುದು. ಬಿಸಿಬಿಸಿ ಅಡಿಗೆ ತಯಾರಿಸಬಹುದೆಂದು ಈಗಾಗಲೇ ವಿಜ್ಞಾನಿಗಳು ಘೋಷಿಸಿದ್ದಾರೆ.

ಹೌದು! ಅಲ್ಲಿ ಗುರುತ್ವವೇ ಇಲ್ಲದೆ ಆ ಜಾಗದಲ್ಲಿ ಮಣ್ಣಲ್ಲಿ ಬೀಜಗಳೇ ನಿಲ್ಲುವುದಿಲ್ಲ ಹೇಗೋ ನಿಲ್ಲಿಸಿದರೂ ಬೀಜಕ್ಕೆ ಯಾವ ದಿಕ್ಕಿಗೆ ಮೊಳಕೆಯಾಗಬೇಕೋ ತಿಳಿಯಲಾರದ ಸ್ಥಳದಲ್ಲಿ ತರಕಾರಿ ಬೆಳೆಯುವುದು ಭಗೀರಥ ಪ್ರಯತ್ನವೆಂದು ನಾಸಾದ ಐಯಾನ್ ಕ್ರಾಫೋರ್ಡ್ ಎಂಬ ವಿಜ್ಞಾನಿ ತಿಳಿಸಿದ್ದಾರೆ.

ಬಾಹ್ಯಾಕಾಶದಲ್ಲೇ ಆಹಾರ ಬೆಳೆಯುವ ನಾಸಾದ ಯೋಜನೆಯ ಹೆಸರು ವೆಜ್-೦೧ ಎಂದು! ಇದಕ್ಕೆಂದೇ ಕಳೆದ ತಿಂಗಳು ಜುಲೈ ೨೦೧೫ರಲ್ಲಿ ಸ್ಪೇಸ್‌ಎಕ್ಸ್ ಎನ್ನುವ ಖಾಸಗಿ ಉಪಗ್ರಹವನ್ನು ಕಳುಹಿಸಿ ಸ್ಪೇಸ್ ಸ್ಟೇಷನ್‌ಗೆ ಜೋಡಿಸಲಾಗಿದೆ. ಇದರಲ್ಲಿ ವಿಜ್ಞಾನಿಗಳಿಗೆ ಬೇಕಾದ ಆಹಾರ ಪದಾರ್ಥಗಳ ಜತೆಗೆ ಇದರೊಳಗೆ ತರಕಾರಿ ತೋಟವನ್ನೇ ಬೆಳೆಸಲು ಬೇಕಾದ ವ್ಯವಸ್ಥೆ ರೂಪಿಸಲಾಗಿದೆಯೆಂದು ನಾಸಾದ ವಿಜ್ಞಾನಿಗಳು ಅರುಹಿದ್ದಾರೆ.

ಈಗೀಗ ಇಂಟರ್‌ನ್ಯಾಷನಲ್ ಸ್ಟೇಸ್ ಸ್ಟೇಷನ್‌ನಲ್ಲಿ ಫ್ರೆಶ್ ತರಕಾರಿ ಬೆಳೆದಿರುವರು. ಇದರ ಹೆಸರು- ಲೆಟ್ಯೂಸ್. ಇದು ಒಂದು ರೀತಿಯ ಎಲೆಕೋಸನ್ನು ಹೋಲುವ ಒಂದು ತರಕಾರಿ ಎಂದು ನಾಸಾದ ವಿಜ್ಞಾನಿಗಳು ಖಚಿತ ಪಡಿಸಿರುವರು.

ಈಗಾಗಲೇ ೩೩ ದಿನಗಳ ಕಾಲ ಸ್ಪೇಸ್ ಸ್ಟೇಷನ್‌ನಲ್ಲಿರುವ ಲ್ಯಾಬ್‌ನಲ್ಲಿ ಬೆಳೆಯಲಾಗಿರುವ ಈ ತರಕಾರಿಯನ್ನು ಆಗಸ್ಟ್ ೨೦೧೫ರ ಸೋಮವಾರ ಮೊದಲ ವಾರದಂದು ಕಟಾವು ಮಾಡಿರುವರು. ಇದನ್ನು ಅಲ್ಲಿದ್ದ ಆರು ಜನ ವಿಜ್ಞಾನಿಗಳು ಪ್ರೀತಿಯಿಂದ ಖುಷಿಖುಷಿಯಲಿ ಸೇವಿಸಿದ್ದಾರೆ! ಇದು ಮೊತ್ತ ಮೊದಲಾಗಿದೆ!

ಅಲ್ಲಿ ಸಿಟ್ರಿಕ್ ಆಮ್ಲದಿಂದ ಸ್ವಚ್ಛಗೊಳಿಸಿ ಲೆಟ್ಯೂಸ್‌ನ್ನು ನಾಸಾ ವಿಜ್ಞಾನಿಗಳು ಬಳಸಿರುವರು. ಇವರು ಅರ್ಧ ತಿಂದು ಉಳಿದರ್ಧವನ್ನು ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿಟ್ಟು ಭೂಮಿಗೆ ವಾಪಾಸ್ಸು ತಂದಿರುವರು! ಇಲ್ಲಿ ಅದನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲಾಗುವುದೆಂದು ವಿಜ್ಞಾನಿಗಳು ಖಚಿತ ಪಡಿಸಿರುವರು.

– ಹೀಗೆ ನಾಸಾದ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಮಾಡಿರುವ ಸಾಧನೆಯನ್ನು ಎಲ್ಲರ ಅರಿವಿಗೆ ತಂದಿದ್ದು ಇನ್ನೂ ಹೆಚ್ಚಿನ ಸಂಶೋಧನೆಗಿಲ್ಲಿ ವಿಫುಲವಾದ ಅವಕಾಶವಿದೆ. ಇನ್ನು ಏನೇನು ಹೊಸಹೊಸ ಸಂಶೋಧನೆಗಳು ಜರುಗುತ್ತವೆಂಬುದನ್ನು ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...