Home / ಲೇಖನ / ವಿಜ್ಞಾನ / ಬಾಹ್ಯಾಕಾಶದ ಕಥೆ

ಬಾಹ್ಯಾಕಾಶದ ಕಥೆ

ಬಾಹ್ಯಾಕಾಶಕ್ಕೆ ತೆರಳುವ ವಿಜ್ಞಾನಿಗಳು ವಾರ ಎರಡು ವಾರ ತಿಂಗಳುಗಟ್ಟಲೆ ಹೇಗೆ ಜೀವಿಸುವರೆಂಬುದೇ ನಿಗೂಢ ಪವಾಡ, ಇದೊಂದು ಸಾಹಸದ ಕತೆ.

ಅಲ್ಲಿ- ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪ್ಯಾಕೆಟ್ ಮಾಡಲಾದ ಆಹಾರ ಇಲ್ಲವೇ ಮಾತ್ರೆಗಳು ತಿಂದು ಮೂತ್ರ ಕುಡಿದು ಸಂಶೋಧನೆ ಮಾಡುವರು.

ಈಗೀಗ ಅಮೆರಿಕದ ನಾಸಾದ ಪ್ರಯೋಗ ಸಿದ್ಧಿಸಿದೆ. ಅಲ್ಲಿ ತರಕಾರಿ ಬೆಳೆಯುವ ಹಚ್ಚನೆ ತರಕಾರಿ ತಿನ್ನಬಹುದು. ಬಿಸಿಬಿಸಿ ಅಡಿಗೆ ತಯಾರಿಸಬಹುದೆಂದು ಈಗಾಗಲೇ ವಿಜ್ಞಾನಿಗಳು ಘೋಷಿಸಿದ್ದಾರೆ.

ಹೌದು! ಅಲ್ಲಿ ಗುರುತ್ವವೇ ಇಲ್ಲದೆ ಆ ಜಾಗದಲ್ಲಿ ಮಣ್ಣಲ್ಲಿ ಬೀಜಗಳೇ ನಿಲ್ಲುವುದಿಲ್ಲ ಹೇಗೋ ನಿಲ್ಲಿಸಿದರೂ ಬೀಜಕ್ಕೆ ಯಾವ ದಿಕ್ಕಿಗೆ ಮೊಳಕೆಯಾಗಬೇಕೋ ತಿಳಿಯಲಾರದ ಸ್ಥಳದಲ್ಲಿ ತರಕಾರಿ ಬೆಳೆಯುವುದು ಭಗೀರಥ ಪ್ರಯತ್ನವೆಂದು ನಾಸಾದ ಐಯಾನ್ ಕ್ರಾಫೋರ್ಡ್ ಎಂಬ ವಿಜ್ಞಾನಿ ತಿಳಿಸಿದ್ದಾರೆ.

ಬಾಹ್ಯಾಕಾಶದಲ್ಲೇ ಆಹಾರ ಬೆಳೆಯುವ ನಾಸಾದ ಯೋಜನೆಯ ಹೆಸರು ವೆಜ್-೦೧ ಎಂದು! ಇದಕ್ಕೆಂದೇ ಕಳೆದ ತಿಂಗಳು ಜುಲೈ ೨೦೧೫ರಲ್ಲಿ ಸ್ಪೇಸ್‌ಎಕ್ಸ್ ಎನ್ನುವ ಖಾಸಗಿ ಉಪಗ್ರಹವನ್ನು ಕಳುಹಿಸಿ ಸ್ಪೇಸ್ ಸ್ಟೇಷನ್‌ಗೆ ಜೋಡಿಸಲಾಗಿದೆ. ಇದರಲ್ಲಿ ವಿಜ್ಞಾನಿಗಳಿಗೆ ಬೇಕಾದ ಆಹಾರ ಪದಾರ್ಥಗಳ ಜತೆಗೆ ಇದರೊಳಗೆ ತರಕಾರಿ ತೋಟವನ್ನೇ ಬೆಳೆಸಲು ಬೇಕಾದ ವ್ಯವಸ್ಥೆ ರೂಪಿಸಲಾಗಿದೆಯೆಂದು ನಾಸಾದ ವಿಜ್ಞಾನಿಗಳು ಅರುಹಿದ್ದಾರೆ.

ಈಗೀಗ ಇಂಟರ್‌ನ್ಯಾಷನಲ್ ಸ್ಟೇಸ್ ಸ್ಟೇಷನ್‌ನಲ್ಲಿ ಫ್ರೆಶ್ ತರಕಾರಿ ಬೆಳೆದಿರುವರು. ಇದರ ಹೆಸರು- ಲೆಟ್ಯೂಸ್. ಇದು ಒಂದು ರೀತಿಯ ಎಲೆಕೋಸನ್ನು ಹೋಲುವ ಒಂದು ತರಕಾರಿ ಎಂದು ನಾಸಾದ ವಿಜ್ಞಾನಿಗಳು ಖಚಿತ ಪಡಿಸಿರುವರು.

ಈಗಾಗಲೇ ೩೩ ದಿನಗಳ ಕಾಲ ಸ್ಪೇಸ್ ಸ್ಟೇಷನ್‌ನಲ್ಲಿರುವ ಲ್ಯಾಬ್‌ನಲ್ಲಿ ಬೆಳೆಯಲಾಗಿರುವ ಈ ತರಕಾರಿಯನ್ನು ಆಗಸ್ಟ್ ೨೦೧೫ರ ಸೋಮವಾರ ಮೊದಲ ವಾರದಂದು ಕಟಾವು ಮಾಡಿರುವರು. ಇದನ್ನು ಅಲ್ಲಿದ್ದ ಆರು ಜನ ವಿಜ್ಞಾನಿಗಳು ಪ್ರೀತಿಯಿಂದ ಖುಷಿಖುಷಿಯಲಿ ಸೇವಿಸಿದ್ದಾರೆ! ಇದು ಮೊತ್ತ ಮೊದಲಾಗಿದೆ!

ಅಲ್ಲಿ ಸಿಟ್ರಿಕ್ ಆಮ್ಲದಿಂದ ಸ್ವಚ್ಛಗೊಳಿಸಿ ಲೆಟ್ಯೂಸ್‌ನ್ನು ನಾಸಾ ವಿಜ್ಞಾನಿಗಳು ಬಳಸಿರುವರು. ಇವರು ಅರ್ಧ ತಿಂದು ಉಳಿದರ್ಧವನ್ನು ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿಟ್ಟು ಭೂಮಿಗೆ ವಾಪಾಸ್ಸು ತಂದಿರುವರು! ಇಲ್ಲಿ ಅದನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲಾಗುವುದೆಂದು ವಿಜ್ಞಾನಿಗಳು ಖಚಿತ ಪಡಿಸಿರುವರು.

– ಹೀಗೆ ನಾಸಾದ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಮಾಡಿರುವ ಸಾಧನೆಯನ್ನು ಎಲ್ಲರ ಅರಿವಿಗೆ ತಂದಿದ್ದು ಇನ್ನೂ ಹೆಚ್ಚಿನ ಸಂಶೋಧನೆಗಿಲ್ಲಿ ವಿಫುಲವಾದ ಅವಕಾಶವಿದೆ. ಇನ್ನು ಏನೇನು ಹೊಸಹೊಸ ಸಂಶೋಧನೆಗಳು ಜರುಗುತ್ತವೆಂಬುದನ್ನು ಕಾದು ನೋಡೋಣವಲ್ಲವೇ??
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...