Home / ಲೇಖನ / ಇತರೆ / ಬಲಿಕತೆ

ಬಲಿಕತೆ

ಭವ್ಯ ಭಾರತ ಇನ್ನು ಓಬಿರಾಯನ ಕಾಲದಲ್ಲಿದೆಯೆನಿಸುವುದು. ಇನ್ನೂ ಹಳ್ಳಿಗಳಲ್ಲಿ ಕುಗ್ರಾಮಗಳಲ್ಲಿ ಜಾತಿ, ಮತ, ಕುಲ, ಭೇದಗಳ ಜೊತೆಗೆ ಕಂದಾಚಾರ ಮೂಢನಂಬಿಕೆಗಳ ಆಚರಣೆಗಳನ್ನು ಗಮನಿಸಿದರೆ ಇನ್ನೂ ತೀರಾ ಹಿಂದುಳಿದ ದೇಶವೆಂದು ಅನಿಸುವುದು.

ದಿನಾಂಕ ೨೭-೭-೨೦೧೫ರಲ್ಲಿ ಕಲಬುರ್ಗಿ ತಾಲ್ಲೂಕಿನ ಸೋಮನಾಥ ಹಳ್ಳಿಯಲ್ಲಿ ನಿಧಿಯ ದುರಾಸೆಗಾಗಿ ಐದು ವರ್ಷದ ಜ್ಯೋತಿ ಎಂಬ ಬಾಲಕಿಯನ್ನು ಬಲಿಕೊಡಲು ಯತ್ನಿಸಿದ ಆತಂಕಕಾರಿ ಭಯಂಕರ ಘಟನೆಯೊಂದು ಜರುಗಿದೆ. ಇಡೀ ಜಿಲ್ಲೆಯೇನು ಕನ್ನಡ ನಾಡೇ ತಲ್ಲಣಗೊಂಡಿದೆ.

ಸೋಮನಾಥ ಹಳ್ಳಿಯಲ್ಲಿ ಮಹಾ ಮಾಟಗಾರ ಬಸಣ್ಣ ಸಾಯಿಬಣ್ಣ ಡೆಂಬ್ರಿಯು ವಯಸ್ಸು ೭೨ ಆಗಿದ್ದು ಈತ ಈ ಹಿಂದೆ ದಿನಾಂಕ ೨೬-೧೧-೨೦೧೪ರಂದು ಫರಹತಾಬಾದ್ ಠಾಣೆಯ ವ್ಯಾಪ್ತಿಯಲ್ಲಿ ಈಗಾಗಲೇ ರೇಣುಕಾ ಎಂಬ ಪುಟ್ಟ ಬಾಲಕಿಯನ್ನು ಇದೇ ಬಸಣ್ಣ ಸಾಯಿಬಣ್ಣ ಡೆಂಗ್ರಿಯು ನಿಧಿಯ ದುರಾಸೆಗಾಗಿ ಬಲಿ ಕೊಟ್ಟಿದ್ದರಿಂದ ಈತನ ವಿರುದ್ಧ ಕೇವಲ ಕೊಲೆಯ ಕೇಸು ದಾಖಲಾಗಿತ್ತು ! ಈಗ ಕೊಲೆಯ ಯತ್ನದ ಪ್ರಕರಣ ದಾಖಲಾಗಿದೆ.

ಕೊಲೆ ಮಾಡಿದವನ್ನು ಬಿಟ್ಟಿದ್ದರಿಂದಲ್ಲವೇ ಇನ್ನೊಂದು ಮತ್ತೊಂದು ಮಗದೊಂದು ಕೊಲೆಗೆ ಯತ್ನ ನಡೆಸಿರುವುದೆಂದು ಇಡೀ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವರು.

ದಿನಾಂಕ ೨೭-೦೭-೨೦೧೫ರಂದು ಮಂಗಳವಾರದ ದಿನದಂದು ಜ್ಯೋತಿ ಎಂಬ ಬಾಲಕಿಗೆ “ನನ್ನ ಮನೆಯ ಬಳಿ ನಿಧಿ ಇದೆ. ನಿನ್ನನ್ನು ಬಲಿ ಕೊಟ್ಟರೆ ನನಗೆ ನಿಧಿಯು ಸಿಗುವುದು. ನಿನಗೆ ಸ್ವರ್ಗ ಲಭಿಸುವುದು” ಎಂದು ಏನೇನೋ ಆಮಿಷವೊಡ್ಡಿ ಬಾಲಕಿಯನ್ನು ಉಪಾಯವಾಗಿ ತನ್ನ ಮನೆಗೆ ಈ ಮಾಟಗಾರ ಕರೆದುಕೊಂಡು ಹೋಗಿದ್ದ! ಅಂದು ಮಾಟದ ವಿಧಿ ವಿಧಾನ ಯಂತ್ರ, ಮಂತ್ರ, ತಂತ್ರ ಎಲ್ಲಾ ವಿದ್ಯೆ ಪೂರೈಸಿ ಇನ್ನೇನು ಬಲಿ ನೀಡಬೇಕು.

ಅಷ್ಟರಲ್ಲಿ- ಈ ಸುದ್ದಿ ಮಹಿಳೆಯೊಬ್ಬರಿಗೆ ಈ ವಿಷಯ ತಿಳಿದಿದೆ ಆಕೆ ಜನರಿಗೆ ತಿಳಿಸಿದ್ದಾಳೆ ಅವರೆಲ್ಲಾ ಆತನ ಮನೆಗೆ ನುಗ್ಗಿ ದಾಂಧಲೆ ನಡೆಸಿದಾಗ ಬಾಲಕಿ ಅವನಿಂದ ತಪ್ಪಿಸಿಕೊಂಡಳು. ಜನರು ಕುಪಿತಗೊಂಡು ಅವನನ್ನು ಹಿಗ್ಗಾಮುಗ್ಗಾ ಬಡಿದಿದ್ದಾರೆ! ಪೊಲೀಸ್‌ನವರಿಗೆ ಬಾಲಕಿಯ ತಂದೆ ದೇವೇಂದ್ರ ಅವರು ದೂರು ಸಲ್ಲಿಸಿರುವರು ಮಾಟಗಾರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈಗ ಈ ಹಳ್ಳಿಯಲ್ಲಿ ಏನು? ಸುತ್ತ ೧೮ ಹಳ್ಳಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ! ಚಿಕ್ಕಚಿಕ್ಕ ಹೆಣ್ಣು ಮಕ್ಕಳನ್ನು ಬಲಿಕೊಡುವರೆಂದು… ಇದರ ನಿವಾರಣೆ ಹೆಣ್ಣುಮಕ್ಕಳ ರಕ್ಷಣೆ ಎಲ್ಲರ ಕೆಲಸವಲ್ಲವೇ??
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...