Home / ಕವನ / ಕವಿತೆ / ಕನಸು ಹೊಸೆಯುವಾಸೆ

ಕನಸು ಹೊಸೆಯುವಾಸೆ

ಚೂರಾದ ಕನ್ನಡಿ ಜೋಡಿಸಿ
ಪ್ರತಿಬಿಂಬ ಕಾಣುವ ತವಕ
ಹರಡಿದ ತುಂಡು ಕನಸುಗಳ
ಹರಿದ ಚಿಂದಿಗಳ ಹೊಂದಿಸಿ
ಎಲೆ ಚಂಚಿ ಹೊಲಿಯುವಾಸೆ

ಬಿರಿದ ಹಾಳು ಗೋಡೆಗಳಲ್ಲಿ
ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು
ಬೆಳದಿಂಗಳ ಆ ಬಯಲಿನಲಿ
ಲಾಂದ್ರದ ಮಂದ್ರ ಬೆಳಕು
ಚಂದ್ರನಿಗೆ ನಾಚಿಕೆ ಮೂಡಿಸುವಾಸೆ.

ಮೌನದ ಪರದೆಯಲಿ ಏಕಾಂಗಿ
ಕಮಲದ ಮೇಲಣ ಜಲಬಿಂದು
ಪಾರದರ್ಶಕ ಸ್ಪಟಿಕದ ಬೆಳದಿಂಗಳು
ಕನಸು ಚೆಲ್ಲಿದ ನದಿಯ ಹರವು
ಶಬ್ದ ಮಡುತ್ತ ಹರಿಯುವಾಸೆ.

ಹೊಸೆದ ಕನಸುಗಳ ಪೋಣಿಸಿ
ಸೋರಿ ಹೋಗುವ ವಾಸ್ತವಗಳ
ಕತ್ತಲೆಗೆ ಬೆವರುವ ಶಬ್ದಗಳ
ಉಸುಕಿನೊಳಗಿಂದ ಒಸರುವ ನೀರು
ಜೀವಪೋಷಕವಾಗಿ ಹರಿಸುವಾಸೆ.

ಬೇಡವೆಂದರೂ ಕೂಗುತ್ತಿದ್ದ ಸೈರನ್ನು
ಆಗಸದಿಂದ ಸುರಿದ ಆಲಿಕಲ್ಲಿನ
ಹೆಪ್ಪುಗಟ್ಟಿದ್ದ ಕೆಂಪು ರಕ್ತವಿತ್ತು
ವಿನಾಶದ ಸೂಚನೆಯಿತ್ತು
ಮುಚ್ಚಿಟ್ಟ ಗುಟ್ಟು ಬಿಚ್ಚಿ ತೋರಿಸುವಾಸೆ.

ಪರದೆಯ ಹಿಂದಿನ ಅವಳ ಕಣ್ಣು
ಅಮೂರ್ತದ ನೆರಳಿನ ಭಾರ
ಸ್ಮಶಾನದಲ್ಲಿ ಇಟ್ಟ ಹೆಜ್ಜೆಗಳು
ಸುಟ್ಟ ಬಾಗಿಲಿನ ಚೌಕಟ್ಟುಗಳಾಚೆ
ಕರಕಲಾದ ಅವಳ ಕರಳುಗಳ
ತೆರೆದು ಲೋಕಕೆ ತೋರಿಸುವಾಸೆ.

ಮಣ್ಣಿನ ಕಣಕಣದಲ್ಲಿ ಪ್ರತಿರೂಪ
ಅತಂತ್ರದ ಅಹವಾಲುಗಳ ಅಂಗಳದಲ್ಲಿ
ಮರುಜೀವ ಪಡೆದು ನಳನಳಿಸಿದ
ಆಗಸದ ಚುಕ್ಕಿ ತಾರೆಗಳ ಹುಡುಕುತ್ತ
ಸ್ಥಬ್ದ ವೃತ್ತದಲ್ಲಿ ಶಬ್ದ ಮಡುತ್ತ
ನಾಳಿನ ಕನಸುಗಳ ಹೊಸೆಯುವಾಸೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...