Home / ಲೇಖನ / ಇತರೆ / ವಚನ ವಿಚಾರ – ಸುಖ ದುಃಖದ ನಕ್ಷತ್ರ

ವಚನ ವಿಚಾರ – ಸುಖ ದುಃಖದ ನಕ್ಷತ್ರ

ಆಕಾಶದಲ್ಲಿ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ
ಸೂರ್ಯೋದಯಕ್ಕಯ್ಯಾ
ಆಕಾಶದಲ್ಲಿ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ
ಸೂರ್ಯಾಸ್ತಮಾನಕ್ಕಯ್ಯಾ
ಕಾಣಬಾರದು ಕಾಣಬಾರದು ಜ್ಞಾನದಲ್ಲಿ ಆನಂದ ಅನಾನಂದವ
ಕಾಣಬಹುದು ಕಾಣಬಹುದು ಅಜ್ಞಾನದಲ್ಲಿ
ಸುಖದುಃಖೋಭಯದ್ವಂದ್ವವ
ಭೋ ಭೋ ಕಪಿಲಸಿದ್ಧಮಲ್ಲಿಕಾರ್ಜುನಾ ಭೋ

ಸಿದ್ಧರಾಮನ ವಚನ. ಇದು ನಿತ್ಯಾನುಭವದ ರೂಪಕವೊಂದನ್ನು ಬಳಸಿಕೊಂಡು ಜ್ಞಾನದ ಸ್ವರೂಪವನ್ನು ಹೇಳುತ್ತದೆ.

ನಕ್ಷತ್ರಗಳು ಕಾಣಬಾರದು ಎಂದಿದ್ದರೆ ಸೂರ್ಯ ಹುಟ್ಟುವವರೆಗೆ ಕಾದಿರಬೇಕು, ನಕ್ಷತ್ರಗಳು ಕಾಣಬೇಕೆಂದಿದ್ದರೆ ಸೂರ್ಯಮುಳುಗುವವರೆಗೆ ಕಾದಿರಬೇಕು. ನಕ್ಷತ್ರ ಕಾಣದೆ ಇರುವುದು ಸುಖ, ಕಾಣುವುದು ಕಷ್ಟ ಎಂದು ಬೇಕಾದರೂ ಅರ್ಥಮಾಡಿಕೊಳ್ಳಬಹುದು ಅಥವಾ ಪಲ್ಲಟಗೊಳಿಸಿಯೂ ತಿಳಿಯಬಹುದು. ಏನೇ ಇದ್ದರೂ ಒಂದು ಸುಖ, ಇನ್ನೊಂದು ದುಃಖದ ಸೂಚಕ.

ಒಂದು ಬೇಕು ಇನ್ನೊಂದು ಬೇಡ ಎನ್ನುವುದಾದರೆ ಅದು ಬರುವವರೆಗೆ, ಅಥವ ಹೋಗುವವರೆಗೆ ಕಾದಿರಬೇಕು. ಜ್ಞಾನವೆನ್ನುವುದು ಸುಖವೂ ಅಲ್ಲ ಸುಖವಲ್ಲದ್ದೂ ಅಲ್ಲ. ಅಜ್ಞಾನವಿದ್ದಾಗ ಮಾತ್ರ ಇವೆರಡೂ ಬೇರೆ ಎಂಬ ದ್ವಂದ್ವವಿರುತ್ತದೆ ಎನ್ನುತ್ತದೆ ವಚನ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...