Home / ಲೇಖನ / ಇತರೆ / ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು

ವಚನ ವಿಚಾರ – ಶರಣಾದವರಿಗೆ ಮಾತ್ರ ಗೊತ್ತು

ಅರಿಯಬಹುದು ಕುರುಹಿಡಬಾರದು
ಭಾವಿಸಬಹುದು ಬೆರೆಸಬಾರದು
ಕಾಣಬಹುದು ಕೈಗೆ ಸಿಲುಕದು
ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ
ನಿಮ್ಮ ಶರಣರು ಬಲ್ಲರು

[ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ]

ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-ಇಡಿಯಾದವನು. ಅವನು ನಿರಾಳ, ಅವನನ್ನು ಅರಿಯಬಹುದು, ಆದರೆ ಅರಿತದದ್ದನ್ನು ಒಂದು ಕುರುಹು, ಗುರುತು ಎಂದು ಇತರರಿಗೆ ಅರ್ಥವಾಗುವ ಕುರುಹಿನ ವ್ಯವಸ್ಥೆಗೆ ಒಳಪಡಿಸಲು ಆಗದು. ಅವನನ್ನು ಭಾವಿಸಿಕೊಳ್ಳಬಹುದು. ಆದರೆ ಅವನೊಡನೆ ಬೆರೆಯುವುದು ಆಗದು. ಅವನು ಕಾಣಬಹುದು, ಆದರೆ ಕೈಗೆ ಸಿಗುವುದು ಅಸಾಧ್ಯ.

ಮಾತು ಎಂಬ ಕುರುಹಿಗೆ ದಕ್ಕದ, ಭಾವನೆ ಮಾತ್ರವಾಗಿ ಉಳಿದು ಒಂದಾಗಲು ಅಸಾಧ್ಯವಾದ, ಕಾಣುವ ಆದರೆ ಕೈಗೆ ಸಿಗದ ದೇವರನ್ನು ಕುರುಹಿಗೆ, ಒಗ್ಗೂಡಿಕೆಗೆ, ಕೈಗೆಟುಕಿಸಿಕೊಳ್ಳುವುದಕ್ಕೆ ವ್ಯರ್ಥವಾಗಿ ಹಂಬಲಿಸದೆ ದೇವರು ಇದ್ದಂತೆಯೇ ಅವನಿಗೆ ಶರಣಾಗುವವರು ಮಾತ್ರ ಅವನನ್ನು ಬಲ್ಲರು.

ನಮಗೆ ಆಗುವ ಯಾವುದೇ ಅನುಭವವಾದರೂ ಅಷ್ಟೆ. ಅದಕ್ಕೆ ಸಂಪೂರ್ಣ ಶರಣಾಗದೆ ಅದು ನಮ್ಮದಾಗದು. ದುರಂತವೆಂದರೆ ನಮಗೆ ಅನುಭವವಾಗುತ್ತಿರುವ ಕ್ಷಣದಲ್ಲೇ ಅದಕ್ಕೆ ಇತರರಿಗೆ ಅರ್ಥವಾಗಬಲ್ಲ, ನಮ್ಮ ಕೈಗೆ ವಶವಾಗಬಲ್ಲ ರೂಪ ಕೊಡುವುದರಲ್ಲಿ ತೊಡಗಿರುತ್ತೇವೆ. ಇದು ಶರಣಗುಣವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ ನಮ್ಮವನಾಗಲಾರ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...