ಮಣ್ಣೆತ್ತಿನ ಹಬ್ಬ

ಮಣ್ಣೆತ್ತಿನ ಅಮವಾಸೆ ಬಂತು
ಮಕ್ಕಳಿಗೆ ಸಂತೋಷ ತಂತು
ಶಾಲೆಗೆ ಸೂಟಿಯು ಅಂದು
ಕೂಡಿತು ಮಕ್ಕಳ ದಂಡು

ಹೊರಟರು ಎಲ್ಲರೂ ಊರಿನ ಹೊರಗೆ
ಜೊತೆಗೊಯ್ದರು ಬುಟ್ಟಿ ಕುರ್ಚಿಗೆ
ಹುಡುಕುತ ಹೊರಟರು ’ಹುತ್ತ’
ಕೊನೆಗೂ ಕಣ್ಣಿಗೆ ಬಿತ್ತು

ತಂದರು ಹುತ್ತಿನ ಮಣ್ಣ
ಕುಟ್ಟಿ ಮಾಡಿದರು ಪುಡಿಯನ್ನ
ಕಲಸಲು ಮೆತ್ತಗೆ ಅದನು
ಕುಳಿತರು ಮಾಡಲು ಎತ್ತನು

ತಿದ್ದುತ ತೀಡುತ ಮಾಡಿದರು
ಎತ್ತು ದೋಣಿಯ ಎಲ್ಲರೂ
ಕೊಂಬಿಗೆ ಒಣ ಮೆಣಸಿನಕಾಯಿ
ಇಟ್ಟರು ಕಣ್ಣಿಗೆ ಗುಲಗುಂಜಿ

ಕೊರಳಲಿ ಹಣೆಯಲಿ ಸೊಂಕಿನ ಸರ
ಹಾಕಿ ಮಾಡಿದರು ಸಿಂಗಾರ
ಧರಿಸಲು ಗೆಜ್ಜೆ ಗುಂಬ್ರಿ ಸರ
ಅವಸರದಿಂದ ಭಿಕ್ಷೆಗೆ ಹೊರಟರು

ಮಣ್ಣೆತ್ತಿನ ಒಂದು ಕಾಲನು ಮುರಿದು
‘ಎಂಟೆತ್ತಿನಲ್ಲಿ ಕುಂಟೆತ್ತು ಬಂದಿದೆ
ಜ್ವಾಳ ನೀಡ್ರಮ್ಮೋ’…ಎನ್ನುತರಿವರು
ಹಗಲಿಡೀ ಊರನು ಆಡಿದರು

ಭಿಕ್ಷೆಯ ಕಾಳನು ಅಂಗಡಿಗೆ ಹಾಕಿ
ಕೊಂಡರು ಬೆಲ್ಲ ಮಂಡಾಳು ಪುಠಾಣಿ
ನಡೆದರು ಊರ ಹೊರಗಿನ ಹಳ್ಳಕೆ
ಬಿಟ್ಟರು ಮಣ್ಣೆತ್ತುಗಳನು ನೀರಿಗೆ

ಮರಳಲಿ ದುಂಡಗೆ ಕುಳಿತರು
ತಿನಿಸನು ಟವೆಲಲಿ ಸುರುವಿದರು
ಜಾತಿ ಭೇದ ಮರೆತು ತಿಂದರು
ನೀರನು ಕುಡಿದು ಮೇಲೆದ್ದರು

ಹಾಡುತ ಆಡುತ ಮನೆಯ ಕಡೆಗೆ
ಓಡುತ ಹಬ್ಬವ ಮುಗಿಸಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಮಹಂಸರಿಗೆ
Next post ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…