Home / ಕವನ / ಕವಿತೆ / ಸ್ವಪ್ನದ ದೋಣಿ

ಸ್ವಪ್ನದ ದೋಣಿ

ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು
ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ
ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು
ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ
ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ
ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮತ್ತೆ
ಮೌನ ಸಂಜೆಯಲಿ ಅವನ ನೆನಪುಗಳು ನೆತ್ತಿಗೆ
ಸವರಿ ಬೆಳ್ಳಕ್ಕಿಗಳು ಹಾರಿ ಹೋಗಿವೆ ತಿಳಿಸಂಜೆ.

ಪುಟ್ಟ ಹಕ್ಕಿಗಳ ಗೂಡು ಹಾಡು, ಕಡಲ
ಅಲೆ ಅಲೆಯ ಪ್ರತಿಬಿಂಬಿಸಿ, ಚಿಪ್ಪಿನಲ್ಲಿ ಅರಳಿತು ಮುತ್ತು.
ತೆಂಗಿನ ಗರಿಯ ಸಂದಿಯಿಂದ ಚೌತಿ ಚಂದ್ರಮ
ಇಣುಕಿ ಸ್ಪರ್ಶಿಸಿದೆ ಪ್ರಣಯ ಜೋಡಿಗಳ, ಹೊಸ
ವಾರ್ತೆ ನಾಳೆಗೆ ಅಚ್ಚಾಗಲು ಸಿದ್ಧವಾಗಿದೆ. ಜಾರಿದೆ
ಕಚಗುಳಿ ಇಟ್ಟ ಸೂರ್ಯ ಕಿರಣಗಳು, ರಾತ್ರಿಯ
ಕಪ್ಪು ಪರದೆಯ ತುಂಬ ಚಲನ ಚಿತ್ರಗಳ ರೀಲು.
ಆಗಸದಲ್ಲಿ ಹರಡಿವೆ ಅವನ ಕಣ್ಣುಗಳ ಮಿನುಗು.

ಹೂಗಳ ಸುವಾಸನೆ ಹೀರಿದ ಹಕ್ಕಿಗಳು ಹಾಡು
ತೊಟ್ಟಿಲು ತೂಗುತ್ತಿದ್ದಾಳೆ ತಾಯಿ. ತೊನೆ ಹಾಲು ತುಂಬಿ
ಎದೆಯ ಭಾವಕೆ ಬೇರುಗಳಲಿ ಇಳಿದ ತಂಪು ಲಾಲಿ.
ಕತ್ತಲೆಯ ರಾತ್ರಿಯಲ್ಲಿ ಹೊಸ ಬೆಳಕಿನ ಜಾಡು,
ಹಿಡಿದು ಕಾಲ ಮೈಲುಗಳು ಬಳಸಿ, ಪಯಣ
ಹೊರಟಿದೆ. ಹೆದ್ದಾರಿ ತುಂಬ ಕಪ್ಪು ನೆರಳುಗಳಾಟ.
ಜಗದ ಬೆಳಕಿಗೆ ಸೂರ್ಯ ಕಣ್ಣು ಮುಚ್ಚಿದ್ದಾನೆ.
ಪುಟ್ಟ ಮಗುವಿನ ಕೈಗಳು ಕೊರಳುಗಳ ತಬ್ಬಿವೆ.
ಏಕಾಂತ ಮೌನದಲಿ ಸುವಾಸನೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...