Home / ಲೇಖನ / ಇತರೆ / ಕೆ ಕೃಷ್ಣಪ್ಪನವರು

ಕೆ ಕೃಷ್ಣಪ್ಪನವರು

ಅಂದು ಶಾಲೆಗೆ ಲೇಟ್ ಕೆಂಚಪ್ಪ ಅವರ ಮಗ ಕೆ. ಕೃಷ್ಣಪ್ಪ ಅವರು ಇತ್ತೀಚೆಗೆ ವಿದೇಶದಿಂದ ಬಂದಿದ್ದರು.

ಕೆ. ಕೃಷ್ಣಪ್ಪನವರು- ಸಾರಿಗೆ ಸಂಸ್ಥೆಯ ಮುದ್ರಣಾಲಯದಲ್ಲಿ ಹಿರಿಯ ಮ್ಯಾಕ್ಯಾನಿಕ್ ಇಂಜಿನಿಯರ್ ಆಗಿ ದಕ್ಷತೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಶಾಲಾ ಶಿಕ್ಷಕರೆಲ್ಲ ಮಕ್ಕಳೆಲ್ಲ ಸೇರಿ ಏನನ್ನಾದರೂ ವಿದೇಶದ ಸುದ್ದಿಯೊಂದನ್ನು ಹೇಳಬೇಕೆಂದು ವಿನಂತಿಸಿದರು. ಅಪಾರ ಅನುಭವ ಸೇವಾ ಹಿರಿತನದ ಹಿರಿಯ ವಿಶ್ವಚೇತನವೆಂದೇ ಖ್ಯಾತರಾದ ಶ್ರೀಯುತ ಕೆ. ಕೃಷ್ಣಪ್ಪನವರು ಎದ್ದು ನಿಂತು- ತಾವು ವಿದೇಶದಿಂದ ತಂದಿದ್ದ “ವೈರ್‌ಲೆಸ್ ಪೋಡೊ…”ವನ್ನು ಎಲ್ಲರಿಗೆ ಕುತೂಹಲದಿಂದ ತೋರಿಸುತ್ತಾ ಹೋದರು. ಹೊಚ್ಚ ಹೊಸ ಸೆಟ್ ಅದು! ತಂತ್ರಜ್ಞಾನದ ಉತ್ಕೃಷ್ಟ ಕೊಡುಗೆಯದು ಕೆ. ಕೃಷ್ಣಪ್ಪನವರು ಮಾತಿಗಾರಂಭಿಸಿದರು…

ಓ ನನ್ನ… ಮುದ್ದು ಮಕ್ಕಳೆ… ನೀವೆಲ್ಲ ವೈರ್‌ಲೆಸ್ ಪೋಡೊವನ್ನು ಈಗ ನೋಡಿದಿರಲ್ಲಾ…?! ಇನ್ನು ಮುಂದೆ ಸೆಲ್‌ಫೋನ್ ಕೈಲಿಡಿದು ಸೆಲ್ಫಿಗೆ ಲುಕ್ ಕೊಡುವುದೂ ತುಸು ಇಬ್ಬಂದಿನೇ… ಅಪಾಯನೇ ಎಷ್ಟೋ ಜನರು ಪ್ರಾಣ ಕಳೆದುಕೊಂಡಿರುವರೂ… ಕೂಡಾ. ಅದೂ ನಿಖರವಾಗಿ ಬರುವುದೆಂದೂ ಖಾತ್ರಿ ಇಲ್ಲ! ಇಂಥಾ ಪುಟ್ಟ ಸಮಸ್ಯೆಯನ್ನು ದೂರ ಮಾಡಲು ಬಂದ ‘ಸೆಲ್ಫಿಸ್ಟಿಕ್’ ಕೂಡಾ ತುಂಬಾ ಓಲ್ಡಾಯಿತು..!!

ಈಗೀಗ ದೇಶ ವಿದೇಶಗಳಲ್ಲಿ ತೀರಾ ಸದ್ದುಗದ್ದಲ ಮಾಡುತ್ತಿರುವುದು ವೈರ್‌ಲೆಸ್ ಪೋಡೊ.. ಈಗೋ ನನ್ನ ಕೈಲಿರುವ ವೈರ್‌ಲೆಸ್ ಪೋಡೊ… ಇದು ಬ್ಲೂಟೂತ್ ರೀತಿಯಲ್ಲಿ ಕೆಲಸ ಮಾಡುವುದು. ಈಗೋ ಇದರ ಹಿಂಬದಿಗೆ ಮ್ಯಾಗ್ನೆಟ್ ಇದ್ದು ಎಲ್ಲಿ ಬೇಕಾದಲ್ಲಿ ಸಿಕ್ಕಿಸಲು ಕ್ಲಿಕ್ಕಿಸಲು ಸಾಧ್ಯವಿದೆ. ತದನಂತರ ನಿಮ್ಮ ಸೆಲ್‌ಫೋನ್‌ಗೆ ಕನೆಕ್ಟ್ ಮಾಡಿಕೊಳ್ಳಬಹುದು!

ವಿಡಿಯೋ ಗ್ರೂಪ್ ಫಿ ಕೂಡಾ ಸಾಧ್ಯ! ಹೀಗಾಗಿ ಬೇರೊಬ್ಬರಿಗೆ ಫೋಟೋ ತೆಗೆಯಿರಿ ಎಂದು ದುಂಬಾಲು ಬೀಳುವುದೂ ಇರುವುದಿಲ್ಲ ಎಂದು ಕೆ. ಕೃಷ್ಣಪ್ಪನವರು ಬಾಳ ಚೆಂದಾಗಿ ವಿವರಿಸುತ್ತಾ ನಿಂತರು.

ಅಲ್ಲಿದ್ದವರೆಲ್ಲ ಬಲು ಕುತೂಹಲದಿ ಕೇಳುತ್ತಾ ಕುಳಿತರು. ಇವರ ಮಾತೆಂದರೆ ಹಾಲು ಜೇನು ಸವಿಸವಿ ಕಲ್ಲು ಸಕ್ಕರೆ ಎಲ್ಲರಿಗೆ ಅವರೆಂದರೆ… ಅಕ್ಕರೆ….

ಹೌದು! ಪುಟ್ಟದಾದ ಅಂದಚೆಂದದ ಈ ವೈರ್‌ಲೆಸ್‌ ಪೋಡೊವನ್ನು ನೀವೆಲ್ಲ ಸುಲಭವಾಗಿ ನಿಮ್ಮೊಂದಿಗೆ ಎಲ್ಲಿಗೆ ಬೇಕಾದರೂ ಜೊತೆ ಜೊತೆಯಲ್ಲಿ ತೀರಾ ಸರಳವಾಗಿ ತೆಗೆದುಕೊಂಡು ಹೋಗಬಹುದು. ಏಕೆಂದರೆ ನೀವೂ ಎಲ್ಲಿ ಬೇಕಾದರೂ ನಿಂತು ಕುಂತು ಲುಕ್ ಕೊಟ್ಟರೆ ಸಾಕು ಅದರಷ್ಟಕ್ಕೆ ಅದೇ ಫೋಟೋ ತೆಗೆಯುವುದು! ಹೀಗಿದೆ ಪೋಡೊ.. ಮಹಿಮೆ?! ಕೃಷ್ಣಪ್ಪನವರ ಮಾತಿನ ಮೋಡಿನ ಹಾಗೇ ಮುತ್ತಿನ ಹಾರದಾ ಹಾಗೇ. ಮಾಣಿಕ್ಯದ ದೀಪ್ತಿಯಾ ಹಾಗೇ… ಅಲ್ಲಿದ್ದವರೆಲ್ಲ ಹೌದೌದು ಎಂದರು.

ಎಲ್ಲರ ಕೈಯಲ್ಲಿರುವ ಸೆಲ್ ಫೋನ್‌ಗಳ ದರಗಳಂತೇ ಇದೂ ಕೂಡಾ ಹೆಚ್ಚಿನ ದರವಿಲ್ಲ! ಹೆಚ್ಚಿನ ಉಪಯೋಗವಿದೆಯೆಂದೂ.. ಕೆ.ಕೃಷ್ಣಪ್ಪನವರು ವಿವರಿಸುತ್ತಾ ನಿಂತರು. ಹೊತ್ತು ಹೋಗಿದ್ದು ಗೊತ್ತೇ ಆಗಲಿಲ್ಲ. ಹೊಸ ಹೊಸ ವಿಚಾರ ಹೊಚ್ಚ ಹೊಸತು ಪೋಡೊ….

ಅಲ್ಲಿದ್ದವರೆಲ್ಲ ಹರ್ಷದಿ ಚಪ್ಪಾಳೆ ತಟ್ಟಿದರಲ್ಲದೆ, ಅವರನ್ನು ಸನ್ಮಾನಿಸಿದರು. ಅಲ್ಲಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...