Home / ಕವನ / ಕವಿತೆ / ನನಗೂ ಸ್ವಲ್ಪ

ನನಗೂ ಸ್ವಲ್ಪ

ನನಗೂ ಸ್ವಲ್ಪ ಕಾಲಾವಕಾಶ ಕೊಡು
ನಿನ್ನ ಪರೀಧಿಯಿಂದ|
ಪ್ರೇಮಾನುಬಂಧನದಿಂದ
ಸ್ವಲ್ಪ ಹೊರಗೆ ಹೋಗಿ
ಜಗವ ಸುತ್ತಿ ನೋಡುವೆ|
ಹಾಗೆ ವಿಹರಿಸಿ ಸಲ್ಪ
ಮಜವ ತಂದುಕೊಳ್ಳುವೆ
ನವನಾಗರೀಕರಂತೆ ನಾನು
ನಟಿಸಲು ಪ್ರಯತ್ನಿಸುವೆನು||

ಗೆಳೆಯರೊಡನೆ ಸೇರಿ
ಹರಟೆ ಹೊಡೆದು,
ತರತರದ ಕಾರ್‍ಡು ಆಡಿಬರುವೆನು|
ರಾತ್ರಿ ಪಬ್ಬು ಕ್ಲಬ್ಬುಗಳಿಗೆ ಹೋಗಿ
ಕಣ್ತುಂಬಾ ರಂಗುರಂಗಲಿ ತೇಲಿಬರುವೆನು|
ಇತ್ತ ಬರುವಾಗ ನಿನಗಾಗಿ
ಗೋಭಿಮಂಚೂರಿ, ಐಸ್‌ಕ್ರೀಮ್
ಪಾರ್‌ಸಲ್ ತರುವೆನು||

ಈಗಿನ ನಾಗರೀಕತೆಯ ನಾನು ಕಲಿತು
ನಡೆದು ಕೊಳ್ಳಬಯಸುವೆನು|
ಝೀನ್ಸು ಪ್ಯಾಂಟು, ಟೀ ಶರ್‍ಟು,
ನೈಕ್ ಶ್ಯುಸ್ ಧರಿಸಿ ಪಾಸ್ಟ್ ಟ್ರ್ಯಾಕ್
ವಾಚ್ ಕೈಗೇರಿಸಿ ನಡೆವೆನು|
ಆಪೇಲ್ ಸಿಕ್ಸ್ ಎಸ್ ಮೊಬೈಲ್ ಹಿಡಿದು
ನಿನ್ನೊಡನೆ ವಾಟ್ಸಾಪ್‌ಲೇ
ಚಾಟ್ ಮಾಡುವೆನು|
ಸ್ನೇಹಿತರೊಡನೆ ಸೆಲ್ಪೀ ತೆಗೆದು
ನಿನಗೆ ಪೋಟೋ ಷೇರ್ ಮಾಡುವೆನು||

ಸುಂದರ ಶಾಪಿಂಗ್ ಮಾಲ್‌ಗಳಿಗೆ ಹೋಗಿ
ಪಿ.ವಿ.ಅರ್, ಮಲ್ಟಿಪ್ಲೆಕ್ಸಲಿ
ರಿಲೀಜ್ ಸಿನೆಮಾ ನೋಡಿ ಬರುವೆನು|
ಸಿನೆಮಾ ಚಿನ್ನಾಗಿರೆ ಬಳಿಕ
ನಿನ್ನನೂ ಕರೆದೊಯ್ಯುವೆನು|
ಡಾಮಿನೊಸ್, ಮ್ಯಾಕ್‌ಡೊನಾಲ್ಡ್‌ನಲಿ
ನಿನಗೂ ಫ್ಹೀಜಾ, ಬರ್‌ಗರ್ ಕೊಡಿಸಿ
ನಿನ್ನ ಬಾಯನು ಹಿಗ್ಗಿಸುವೆನು|
ಅಸಿಡಿಟಿ ಹೋಗಲಾಡಿಸೆ
ಸ್ವೀಟ್ ಸೋಡಾ ಕುಡಿಸುವೆನು||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...