ಜೀವಗಾಳಿ


ಭೂಮಿ ಬಿರುಕು ಬಿಟ್ಟಿತು
ನಾಡಿನ ನರಗುಂದದಲ್ಲಿ ನಾಡಿ ಮಿಡಿತ ಕೇಳಿ
ಹೂತು ಹೋದ ಹೆಣಗಳೆಲ್ಲ
ಬರಡು ನೆಲದ ಕಣಗಳೆಲ್ಲ
ಪುಟಪುಟಿದು ಸೆಟೆದವು, ಬೀಸಿ ಜೀವಗಾಳಿ.

ನೆಲದೊಳಗೆ ಭೋರ್ಗರೆತ, ಸುಳಿಸುತ್ತುವ ಸೆಳೆತ
ಸಿಟ್ಟಿನ ಸುಳಿ ಸಿಂಬೆ ಸುತ್ತಿ
ಕುದಿ ಕುದಿಯುವ ರಕ್ತವೆಲ್ಲ
ಕೈಯಾಗಿ ಕಿಡಿಯಿತು ಬಿಗಿದ ಮುಷ್ಟಿ ಎದ್ದಿತು
ನೋವೆ ನೆರೆದು ನಿಂತಂತೆ
ನೆಲದ ಒಡಲು ಗುಡುಗು ಸಿಡಿಲು
ಸೀಳಿ ಸೃಷ್ಟಿಯಾಗುತ್ತಿರುವ ಸಾಲು ಸಾಲು ಕೈಗಳು
ಬುಸುಗುಟ್ಟುವ ಹೆಡೆಗಳು
ಜೊತೆ ಜೊತೆಯಲ್ಲಿ ಸೆಟೆದು ನಿಂತ
ಅರೆಬೆತ್ತಲ ನಡುಗತ್ತಲ
ಭಯ ಬದುಕಿನ ಮೈಗಳು
ಹುಟ್ಟಿಕೊಂಡವೆಲ್ಲೆಲ್ಲೂ ಕಾದ ಕೆಂಡ ಕಿಡಿಗಳು
ಮೂಳೆಯೊಳಗೆ ಮನಸ ಹರಿಸಿ
ಕಾಲಿನಲ್ಲಿ ಕನಸು ನೆಲೆಸಿ
ಶೋಷಣೆಯ ಸಜ್ಜೆ ಮೇಲೆ ಹೆಜ್ಜೆಯಿಟ್ಟು ರೈತರು


ಕೆದರಿದ ಕಿಡಿ ಕೂದಲು, ಉಬ್ಬಿ ಹೋದ ಕಾಲು
ಗರಬಡಿದ ಬಾಗಿಲಿಗೆ ಝಾಡಿಸಿ ಒದ್ದು
ನಗರವೆಲ್ಲ ಮೈ ಕೊಡವಿ ನಿಟ್ಟು ಬಿದ್ದು ಎದ್ದು
ಹೃದಯವಾಗಿ ನಿಂತಿತು, ಹಾರವಾಗಿ ಹರಿಯಿತು
ತೇಗುತ್ತಿದ್ದ ಟಾರು ರಸ್ತೆ ತೆಪ್ಪಗಾಯಿತು
“ಸೌಧ”ದತ್ತ ಸಾಗಲು ತೆಪ್ಪವಾಯಿತು.


“ನಿಧಿ” ನೆಲೆಯೂರಿದ ವಿಧಾನ ಸೌಧ
ಸರ್ಪಕಾವಲಿನ ಶ್ರೀ ಕುರುಡ
ನೆಲದ ಒಡೆಯರು ನಮ್ಮ ರೈತರು
ಕೊಚ್ಚಿ ಬಂದರು ರೊಚ್ಚೆದ್ದವರು

ವಿಧಾನ ಸೌಧದ ಹೊಟ್ಟೆಯ ಒದ್ದು
ಕಲ್ಲು ಕಲ್ಲಿಗೂ ಕ್ರಾಂತಿಯ ಸದ್ದು
ಎದೆಯುಬ್ಬಿಸಿ ಒಳ ನುಗ್ಗಿದರು

ಅತ್ತಿಂದಿತ್ತ ಹಾರುವ ಬಾವಲಿ
ಕಣ್ಣಿಗೆ ಬಡಿಯುವ ಕಳ್ಳಾಟ
ದಿಗಿಲು ಹುಟ್ಟಿಸುವ ದುರ್ನಾತ

ಕಿಡಿಕಾರುವ ಕಣ್ ಬೆಳಕನು ಬಿಟ್ಟು
ಎದೆ ಮನೆ ಬಾಗಿಲು ಭೇದಿಸಿ ಹೊಕ್ಕು
ಒಳಗೆಲ್ಲಾ ಹುಡುಕಾಡಿದರು
ಹೃದಯವ ಕಾಣಲು ಹುಡುಕಿದರು
ಮೂಲೆ ಮೂಲೆಯ ತಡಕಿದರು

ಕತ್ತಲು ಕವಿದರು ಸಿಗಲಿಲ್ಲ.
ಹೃದಯವೆ ಅಲ್ಲಿ ಇರಲಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವಿಷ್ಯದ ಚಿಂತೆ
Next post ಸಾಯಿ ರಾಮ್

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…