ನಮ್ಮ ಜೀವ ನಮಗೆ ಬಿಡಿ

ಹೊಟ್ಟೆಗಂತೂ ಕೂಳು ಇಲ್ಲ
ಬಟ್ಟೆಯಂತೂ ಸಿಕ್ಕಲಿಲ್ಲ
ಬಾಳಿಗಂತೂ ಬಾಯಿಯಿಲ್ಲ
ನಮ್ಮ ನೋವು ಮೀಟಲಿಲ್ಲ.

ನಮ್ಮ ಜೀವ ನಮಗೆ ಬಿಡಿ
ಬದುಕಲಿಷ್ಟು ಕಾಲ ಕೊಡಿ.

ಮುಖದ ತುಂಬ ಜೇಡ ಬಲೆ
ನಡೆವ ಬೀದಿ ನಮ್ಮ ನೆಲೆ
ಬಯಲ ಜೈಲಿನಲ್ಲಿ ಬಾಳು
ಗೋಳೆ ನಮ್ಮ ದಿನದ ಕೂಳು.

ನಮ್ಮ ಜೀವ ನಮಗೆ ಬಿಡಿ
ಬದುಕಲಿಷ್ಟು ಕಾಲ ಕೊಡಿ.

ಕೂತ ಕುರ್ಚಿ ಕಾಲು ನಾವು
ಕೀರ್ತಿ ಸೌಧ ಕಂಬ ನಾವು
ನಿಮಗೆ ಮೆಟ್ಟಲಾದೆವು
ಬೊಜ್ಜು ಬಿಟ್ಟ ಪೀಠಮದ
ಹೆಜ್ಜೆ ಹೆಜ್ಜೆ ಗೆಜ್ಜೆ ನಾದ
ನಿಮಗೆ ರಂಗವಾದೆವು.

ಬೆನ್ನ ಮೇಲೆ ನಿಮ್ಮ ಬೂಟು
ಎದೆಗೆ ಗುರಿ ನಿಮ್ಮ ಗುಂಡು
ನಮ್ಮ ನೆತ್ತರಿಂದ ನಿಮಗೆ
ಹೊಟ್ಟೆ ತುಂಬಿತು
ನಮ್ಮ ಕಣ್ಣ ನೀರು ನಿಮಗೆ
ಸ್ನಾನವಾಯಿತು.

ಬೇಡ ನಿಮ್ಮ ಮೊಸಳೆ ಮಾತು
ಕೋಟಿ ಕೋಟಿ ಲೆಕ್ಕವು
ಕಾಲ ಕೆಳಗೆ ನಮ್ಮ ಬಾಳು
ನಿಮಗೆ ಕೀರ್ತಿ ಕಳಶವು.

ನಮಗೆ ನೀವು ನೋಯಬೇಡಿ
ನಮಗೆ ಜೀವ ಸವೆಸಬೇಡಿ
ನಮ್ಮ ನೋವು ನಮಗೆ ಕೊಡಿ
ನಮ್ಮ ಜೀವ ನಮಗೆ ಬಿಡಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೇಷ್ಠತೆಯ ಸವಾರಿ
Next post ಪ್ರೀತಿಸುವವರ ಕಂಡು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…