Home / ಕವನ / ನೀಳ್ಗವಿತೆ / ರುಗ್ಣ ಯಾಕುಬ

ರುಗ್ಣ ಯಾಕುಬ

ಸುಡಾನವನಾಳಿದ ಅತ್ಯಂತ ಕ್ರೂರಿ ದೊರೆ
ಯಾರೆಂದು ಕೇಳಿದರೆ ಎಲ್ಲರೂ ಹೇಳುವರು-
ಅವನೇ ಯಾಕುಬ
ರುಗ್ಣ ಯಾಕುಬ
ಅವನ ಕತೆ ಕೇಳುವುದು
ನಾಕು ಜನ ಇರುವ ಕಡೆ-ಪ್ರಜಾ
ಜನರೆ ಅವನ ವಿರುದ್ಧ
ದಂಗೆಯೆದ್ದರು ಸಹಾ-ಆ
ದಂಗೆಯನು ಸದೆಬಡಿದು
ಅನೇಕರನು ಹಿಡಿದು
ಕೆಲವರನು ಕೂಡಲೇ
ಕೆಲವರನು ಆಮೇಲೆ

ಅಂಥವರ ನಡುವೊಬ್ಬ
ಮಾಂತ್ರಿಕನೂ ಇದ್ದ
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಒಂದು ದಿನ ಅಂಥವನ
ಸರದಿಯೂ ಬರಲಾಗಿ :
“ಯಾಕೆ ಸುಮ್ಮನೆ ನನ್ನ
ಕೊಲಿಸುವಿರಿ ? ಕೊಲಿಸಿದರೆ
ನಾ ಕಲಿತ ವಿದ್ಯೆಯೂ
ನನ್ನ ಜತೆ ಹೋಗಿ-
ಇಲ್ಲದಿದ್ದರೆ ನಿಮಗೆ
ಕುಳಿತಲ್ಲೆ ತೋರಿಸುವೆ
ಲೋಕದದ್ಭುತಗಳ
ಅಂಗೈಗೆ ತರಿಸುವೆ!”

ಆಗ ಯಾಕುಬನು
ರುಗ್ಣ ಯಾಕುಬನು :
“ಮಾತುಗಳು ಹಾಗಿರಲಿ
ತಂದು ತೋರಿಸು ನನಗೆ
ಲೋಕದಲೆ ಅತ್ಯಂತ
ಚೆಲುವಾದ ಕುದುರೆಗಳ
ಅಂಥ ದೃಶ್ಯಗಳ !”

ಬರೀ ಒಂದು ಹಿಡಿ ಕೊತ್ತಂಬರಿ
ಒಂದು ಮಣ್ಣಿನ ಪಾತ್ರೆ
ಬೆಂಕಿ, ಇದ್ದಿಲು, ಒಂದು
ಮಸಿಯ ಬುರುಡಿಯೂ
ಬರೆವ ಲೆಕ್ಕಣಿಕೆ
ಪ್ರತ್ಯೇಕ ಮರದ ಪತ್ರೆ

ಆಮೇಲೆ ಯಾಕುಬನ
ರುಗ್ಣ ಯಾಕುಬನ
ಅಂಗೈಲಿ ಮಸಿ ಬಿಂದು
ದುಂಡನೇ ನಿಂದು
“ಅಲ್ಲಾನ ಸೇವಕ”
ಅಬ್ದುರಹಮಾನ್
ಅಲ್ ಮಸ್‌ಮುದಿ
ಮಂತ್ರಗಳ ಹೇಳುವನು
ಕುದುರೆಗಳ ಕರೆಯುವನು

ಕರೆದರೆ ಮೊದಲು
ವಿಶಾಲ ಬಯಲು
ಬಹುಶಃ ಏಶಿಯಾ
ಬಹುಶಃ ಆಫ್ರಿಕಾ
ಆಮೇಲೆ ಅದರ
ಅಂಚಿನಿಂದೆದ್ದು
ಬಂದಂತೆ ಮೋಡ
ಒಂದು ಸಾವಿರ ಘೋಡ
ಓಟದಲಿ ಮೈ-ಮಾಟದಲಿ
ಒಂದನ್ನೊಂದು ಮೀರಿ
ಈ ಕಡೆಗೇ ಸಾರಿ

ಆಮೇಲೆ ಮರುದಿನವು
ಪ್ರತಿದಿನವು ಹೀಗೆಯೇ
ಅದ್ಭುತ ನಗರಿಗಳು
ರಾಜ್ಯಗಳು ಕೋಶಗಳು
ವಿಶಾಲ ಸಮುದ್ರಗಳು
ಮರುಭೂಮಿಗಳು, ಇದೀಗ
ಅರಳಿದ ಗುಲಾಬಿಗಳು
ದೂರದ ಗ್ರಹಗಳೂ

ಪಿರಮಿಡಿನ ರಹಸ್ಯಗಳು
ದಾರಿತಪ್ಪಿದ ನೌಕೆಗಳು
ಯಾರೂ ಬಿಡಿಸದ ಒಗಟುಗಳು
ಸುಂದರ ಹೌರಿಗಳು
ಚರಿತ್ರೆಯ ಪ್ರಸಿದ್ಧ
ಹಾದರಗಳೂ, ಯುದ್ಧಗಳೂ

ವಿಚಿತ್ರ ಜಂತುಗಳು
ವಜ್ರ ವೈಡೂರ್ಯಗಳು
ಮಾತಾಡುವ ಮೀನುಗಳು
ಜನವಿರದ ಸಂತೆಗಳು
ವೇಶ್ಯೆಯರ ಪಡಖಾನೆಗಳು
ಅವರ ವಿನೋದಗಳೂ
ಹುಟ್ಟಿದಾಗಲೆ ನಗುವ ಶಿಶುಗಳೂ
ಕಡಲ ತಳ ಕಾದಿಟ್ಟ
ನಿಧಿಗಳೂ, ಎಷ್ಟೋ ಜನರ
ವಿಧಿಗಳೂ.

ಹೀಗಿತ್ತು. ಇರಲು
ದಿನದಿನದ ಮಾಯಾಬಜಾರ-
ದೊಳಗೆ ಬಯಸಲಿ ಬಯಸದೆ ಇರಲಿ
ಆಗಾಗ
ಬರುವ ಅಪರಿಚಿತ ವ್ಯಕ್ತಿ
ಮುಖವಾಡದಿಂದ ಮುಖ
ಪೂರ್ತಿ ಮುಚ್ಚಿ

ಉತ್ತರದಾತ, ತುಸು ಬಾಗಿರುವಾತ
ದಿರಿಸು ನೋಡಿದರೆ ಅರಬ
ಅಥವ ಅಂಥದೇ ಇನ್ನೊಬ್ಬ
ಯಾಕ ಈ ವೇಷ ?
ಯಾಕೆ ಮುಖವಾಡ ?
“ತೆಗೆದು ಬಿಸಾಕಲು ಹೇಳು !”
ಎಂದು ಯಾಕುಬ
ರುಗ್ಣ ಯಾಕುಬ

“ದುಡುಕಬಾರದು ನಾವು
ಯಾರೀತ, ಹೆಸರೇನು
ಯಾವ ದೇಶದವ- ಯಾರಿಗೂ
ತಿಳಿಯದೆ ಇರುವಾಗ
ತಿಳಿಯದಿರಲೆಂದೆ ಅಲ್ಲಾ ಅವನ
ಮುಖವ ಮುಚ್ಚಿರುವಾಗ”

ಬಾರಿ ಬಾರಿಗೂ ಯಾವುದೋ ಬದಿಯಿಂದ
ಮೂಡುತ್ತಿದ್ದ ವಿಚಿತ್ರ
ಕೆಲವೊಮ್ಮೆ ಕುದುರೆಯ ಮೇಲೆ ಆರೋಹಿ
ಕೆಲವೊಮ್ಮೆ ಹೇಸರಗತ್ತೆಯನೂ ಏರಿ
ಮರುಭೂಮಿಗಳ ಸಂಚಾರಿ
ದಾರಿ ಮರೆತಂತೆಯೂ ತೋರಿ
ಆದರೂ

ಅಂಗೈಯ ಕ್ರೌರ್ಯ
ಒಂದನ್ನೊಂದು ಮೀರಿ
ಮೂಡುತ್ತಿದ್ದುವು
ಯಾಕುಬನ
ರುಗ್ಣ ಯಾಕುಬನ-ಮರುಳು
ಮಾಡುತಿದ್ದವು

ದಿನ ದಿನದ ಕೊಲೆ, ಹಾದರ, ಬಲಾತ್ಕಾರ ಸಂಭೋಗ
ದಿನ ದಿನದ ಶಿಕ್ಷೆ. ಅಂಗಾಂಗ ಛೇದ
ದಿನ ದಿನದ ಅನುಭವದ ಕ್ರೂರ
ಸಾಕ್ಷಾತ್ಕಾರಕ್ಕೆ ಪೂರ್ತಿ ವಶವಾದ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...