Home / ಕವನ / ಕವಿತೆ / ಅಡವಿಟ್ಟ ಸ್ವಾತಂತ್ರ್ಯ

ಅಡವಿಟ್ಟ ಸ್ವಾತಂತ್ರ್ಯ

ಒಣಗಿದ ನನ್ನವ್ವನ ಎದೆಯಿಂದ
ಝಲ್ಲೆಂಬ ಜೀವರಸ ಬತ್ತಿ
ಎಂದಿಗೂ ಬಾಯಿ ತುಂಬಾ ಗುಟುಕು
ಎಟುಕಲಿಲ್ಲ ನನ್ನ ಬಾಯಿಗೆ.
ಏಕೆಂದರೆ ನನ್ನಪ್ಪನ ಕಷ್ಟಗಳು
ಅವಳಿಗೆ ಹೊಟ್ಟೆ ತುಂಬಿಸಲಿಲ್ಲ.
ಬಡತನದ ಬೇಗೆಯಿಂದ ಬೇಸತ್ತು
ನನ್ನಪ್ಪ – ನನ್ನವ್ವನಿಗೆ ಅಡವಿಟ್ಟ ಒಂದು ದಿನ
ತಾಯಿ – ಕಂದನ ಬೇರೆ ಮಾಡಿದ್ದನು.
ನನ್ನವ್ವನಿಗೆ ಬಿಗಿದಿರುವ
ಗುಲಾಮಗಿರಿಯ ಸಂಕೋಲೆ
ಪ್ರಶ್ನೆ ಮಾಡಿದ್ದಕ್ಕೆ ನಾನು
ದೇಶದ್ರೋಹಿ ಎನಿಸಿಕೊಂಡೆ
ಈ ತಾಯಿ, ಮಾತೃಭೂಮಿ
ಸರಹದ್ದುಗಳಲ್ಲಿ ಸೈನಿಕರು
ತಾಯ್ ಸೆರೆಯ ಬಿಡಿಸಲು
ಪ್ರಾಣಗಳ ಬಲಿಗಳು
ಹೋರಾಟದ ಆರ್ಭಟದಲಿ
ಮಾರಾಟದ ಒಪ್ಪಂದಗಳನ್ನು
ಕುದುರಿಸಿದವರು ನೀವು
ಸಾಮ್ರಾಜ್ಯಶಾಹಿಗಳಿಗೆ ಕುರ್ಚಿ
ಆಸನಗಳ ಒದಗಿಸಿದ ಕುತಂತ್ರಿಗಳೇ
ಎಚ್ಚರ!
ನನ್ನವ್ವನ ಒಡಲ ಕಿಚ್ಚಿನಿಂದ
ಹೊರಬಿದ್ದ ಅವಳ ನಿಟ್ಟುಸಿರಿನಿಂದ
ನಿಮ್ಮ ಒಪ್ಪಂದಗಳು ಸದ್ದಿಲ್ಲದೆ
ಸುಟ್ಟು ಬೂದಿಯಾದಾವು.
ಹಸಿದ ಅವಳ ಕಂದಮ್ಮಗಳ
ಸಿಟ್ಟು ತಿರುಗಿ ಬಿದ್ದರೆ ನಿಮ್ಮ
ಒಪ್ಪಂದಗಳು ಹರಿದು ಚಿಂದಿಯಾದಾವು.
ನನ್ನ ಹಡೆದವ್ವನ ನೋವುಗಳು,
ಅವಳ ಕಣ್ಣೀರಿನಲಿ ತೋಯ್ದು,
ಶೃಂಖಲೆಯ ಗುಲಾಮಿ ಚರಿತ್ರೆಯನು
ಅಳಿಸಿ ಹಾಕಿ – ಹೊಸ ಚರಿತ್ರೆ
ರಚಿಸಿಯಾಳು ಅವಳ ರಕ್ತದಿಂದ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...