ಏನ ಬೇಡಲಿ

ಏನ ಬೇಡಲಿ ನಿನ್ನ ಪ್ರಾಣದಾತನೆ ತಂದೆ
ಮೂಜಗವನಾಡಿಸುವ ವಿಶ್ವದಾ ತಂದೆ || ಪ ||

ಈ ಜಗದಿ ಜೀವಿಸುವ ಸೌಭಾಗ್ಯ ಮೊದಲಾಗಿ
ಸಾಜದಲಿ ನನಗಿತ್ತೆ ಮನುಜತೆಯ ದೇವಾ
ಉತ್ತುಂಗ ಬೆಟ್ಟ ಇದೆ ನಗುತಿರುವ ಸೃಷ್ಟಿ ಇದೆ
ನರ್ತಿಸುತ ಹರಿಯುತಿದೆ ಆನಂದ ಭಾವ || ೧ ||

ನಿನ್ನ ಕರುಣೆಯ ರೂಪ ತಳೆದಂತೆ ಮಳೆ ಬಹುದು
ಬರಡಾದ ಭೂದೇವಿ ಹಿಗ್ಗುವಳು ನಲಿದು
ಸೂರ್‍ಯ ಚಂದ್ರರ ಬಿಸುಪು ತಂಪುಗಳ ಕಣ್ಣೋಟ
ನಮ್ಮನ್ನು ಕಾಯುತಿರೆ ಬೇಡಲೇನೆಂದು || ೨ ||

ಕಣ್ಣು ಕಾಣಿಸದಂತೆ ಮಾಡುವ ಸಿರಿ ಬೇಡ
ನಿನ್ನ ನೆನೆಯುವ ಭಕುತಿ ಸಿರಿಯೊಂದೆ ಸಾಕು
ಎಂಥ ಕಷ್ಟವೆ ಬರಲಿ ಎಂಥ ಸುಖವೇ ಇರಲಿ
ನನ್ನನ್ನು ಮಗುವಂತೆ ನೀ ಕಾಯುತಿರಲು || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲಿಸು ನನಗೆ ಕಲಿಸು
Next post ಕಲಾವಿದನ ಬದುಕಿನ ಕಪ್ಪು ಬಿಳಿ ಬಣ್ಣಗಳು- ರಾಬರ್ಟ ಬ್ರೌನಿಂಗ್‌ನ “Andrea del Sarto”

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…