Home / ಲೇಖನ / ಹಾಸ್ಯ / ಮೂರನೇ ಮದಿವಿ ಮಹಾಸಂಕಟ

ಮೂರನೇ ಮದಿವಿ ಮಹಾಸಂಕಟ

(ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ ಮಾತನಾಡುವನು.)

….ನೀವೀಗೇನ್‌ ಮಾತಾಡಿದಿರ ರಾಯರಽ ಬರಾಬ್ಬರೀ ನೋಡಿರಿ…! ನಾನೂ ನಿಮ್ಮ ಮತದಂವನಽ ಏನ್ರೆಪಾ! ಇಷ್ಟು ವಯಸ್ಸಾದ ಮ್ಯಾಲ ಲಗ್ನ ಆಗೂದಂದರ ನಗ್ಗೇಡ ಕೆಲಸಽ! ಅದಕ್ಕಂತ ನಾನೂ-ಹೆಂಡತಿ ಸತ್ತು ಎರಡು ತಿಂಗಳಾಗಿ ಹೋದರೂ ಇನ್ನೂ ಲಗ್ನದ ಮಾತು ತಗದಿದ್ದೇ ಇಲ್ಲ…! ನನಗೂ-ದೇವರ ದಯದಿಂದ ಭಂಗಾರದಂಥ ಐದು ಹುಡುಗೋರು ಅವಽ! ದೇವರು ಹೊಟ್ಟೀ ಪೂರ್‌ತೆ ನಾಕು ಕೂರಿಗಿ ಭೂಮಿನೂ ಕೊಟ್ಟಾನ! ಎಲ್ಲಾ ನೆಟ್ಟಗಽ ಅದಽ ಆನ್ರಿ….! ಆದರ ನೋಡ್ರಿ, ಹೊರಗಿಂದ ಬಂದು ಮನಿವಳಗ ಕಾಲಿಟ್ಟ ಕೂಡಲೇ ಎದಿ ‘ಧಸ್’ ಅಂತ್ಽದ!! ಮನಿ ಭಣಾಭಣಾ ಸುರೀತಽದ! ಎದ್ದ ಬಡೀಲಿಕ್ಕೆ ಬಂದ್ಹಾಂಗ ಆಗತಽದ…! ಮನಿವೊಳಗ ಯಾರಾದರೂ ಬಂದರ ಎದ್ದು ಒಂದು ತಂಬಿಗಿ ನೀರು ಕೊಡಲಿಕ್ಕೆ ಸುದ್ದಾ ಯಾರೂ ಇಲ್ಲದ್ಹಾಂಗ ಆತಲಾ ಅಂತ ಅನಸತಽದ….

“ಹುಡುಗೂರಾರೆ ದೊಡ್ಡ್ವ ಆಗ್ಯಾವ ಅಂತೀರೇನು! ಹಾಂಗೂ ಇಲ್ಲ… ಕಚೇರಿಂದಽ ಬರೂದರೊಳಗ ಒಂದು ಮಣಕಾಲ ಒಡದಕೊಂಡಿರತದಽ ಒಂದು ತಲೀಗೇ ಪೆಟ್ಟು ಹಚ್ಚಿಕೊಂಡಿರತಽದ… ನೋಡ್ರಿ ಮನೀಗೆ ಬರೂದರೊಳಗ ಸರ್‍ಯೊಮರ್‍ಯೊ ನಡದಿರತಽದ ಹಾಂಗಽ ದಿನಾ! ಪಾಪ ಅಕ್ಕ ಮುದಿಕಿ; ಆಕಿ ಕಡಿಂದಽ ಈ ಹುಡಗರನ್ನ ಸಂಭಾಳಸೂದು ಆಗೂದಿಲ್ಲ. ಈ ಹುಡಗೋರಕಿಂತಾ ಆಕೀ ತಾಪಽ ನನಗ ಹೆಚ್ಚಾಗೇದ. ಈ ಹುಡಗೋರ ತಾಪಕ್ಕಾಗಿ ಬ್ಯಾಸತ್ತು ತಮ್ಮ ಊರಿಗ್ಹೋಗತೀನಂತ ದಿನಕ್ಕೊಮ್ಮೆ ಹೊಂಟ ನಿಂದರತಾಳ! ಪರದೇಶಿ ಹುಡಗೋರು, ಬಿಟ್ಟು ಹೋಗಬ್ಯಾಡ…’ ಅಂತ ಮತ್ತ ಆಕಿ ಕೈಕಾಲು ಹಿಡಕೊಂಡು, ಸಮಾಧಾನ ಮಾಡಿ ಇರಿಸಿಕೂಳ್ಳೂಪ್ರಸಂಗ ಬರತಽದ ನನಗ! ಮತ್ತ ನಮ್ಮ ಅಕ್ಕನ ಬಾಯಂದ್ರ ನಿಮಗ ಗೊತ್ತಿಲ್ಲೇನು! ಒಮ್ಮೆ ಸುರು ಮಾಡಿದಳಂದರ ಮುಗಸೂ ಮಾತಽ ಇಲ್ಲ!

“ನಮ್ಮಕ್ಕ ಏನಂಶಾಳ ಗೊತ್ತದಽ ಏನು? ’ಅಲ್ಲಪಾ, ಮದಿವಿ ಬಿಡಲಿಕ್ಕೆ ನೀಯೇನು ಮುದಕಽ ತದಕಽ… ಒಳ್ಳೇ ನನಕಿಂತ ಮೂರು ವರ್ಷಕ್ಕ’ ಸಣ್ಣಾವಾ! ಐವತ್ತು ವರ್ಷಕ್ಕ ಯಾರೂ ಲಗ್ನಾನ, ಮಾಡಿಕೊಳ್ಳೂಽದಿಲ್ಲ? ದೊಡ್ಡ ಕಾಕಾ ಅವರ ನಾಕನೇ ಮದಿವಿ ಐವತ್ತುಮೂರು ವರ್ಷಕ್ಕ ಆಗಿತ್ತು. ಮುಂದ ನಾಕು ಮಕ್ಕಳನ್ನ ಹಡೆದು ಕಕ್ಕೀನ ಮೊದಲು ತೀರಿಕೂಂಡರು. ಈಗಂತೂ ಹೆಣ್ಣು ಬೇಕಾದಷ್ಟು ದೊಡ್ಡ್ವೂ ಸಿಗತಾವ… ಆಗಿನ್ಹಾಂಗೇನು ಎಂಟು ಹತ್ತು ವರ್ಷದ ಕನ್ಯಾಽ ಇರತಾವಽ? ಈಽಗ ನಿ ಮದಿವೀ ಮಾಡಿ ಕೊಳ್ಳಲಿಕ್ಕೆ ತಯಾರಾಗು ಹೆಣ್ಣಿಗೇನು ಕಡಿಮಿ! ವರದಕ್ಷಿಣೀ ಕೊಟ್ಟು ಹೆಣ್ಣು ಕೊಡತಾರ ಬೇಕ್ಕಾದವರು-! ನಾ ಮುದುಕಿ ದುಡದು ದುಡದು ಸಾಯಬೇಕಂತೀನಿ… ಅದೇನಿಲ್ಲ… ನೀ ಲಗ್ನಾ ಮಾಡಿಕೂಂಡರ ಇಲ್ಲಿ ಇರತೀನಿ; ಇಲ್ಲದಿದ್ದರೆ ನಾ ಹೋಗತೀನಿ!’ ಅಂತ ನೋಟೀಸ ಕೊಟ್ಟಾಂಗ ಮಾಡ್ಯಾಳ ಅಕ್ಕ.

“ನನಗೂ ಪಂಚೇತೇ ಬಿದ್ದಽದ ಏನ್ರೆಪಾ! ಲಗ್ನ ಬ್ಯಾಡಽ ಬ್ಯಾಡಾ- ಅಂತ ನಿಶ್ಚಯ ಮಾಡಿದ್ದೆ; ಅದರ ಅಕ್ಕನ ಕಿರಿ ಕಿರ ತಾಳಲಾರದಷ್ಟು-ಆಗೇದ. ವರದಕ್ಷಿಣೀ ಅಂತೂ ತಗೊಳ್ಳೂ ಹಾಂಗಿಲ್ಲಾ ಅಗ; ಅಕ್ಕಗ ಹೇಳಿ-ಬಿಟ್ಟೇನಿ! ಯಾರಾದಾದರೂ ಬಡವರದು ಹೆಣ್ಣು ಮಾಡಿಕೊಂಡರ ಅವರಿಗೂ ಒಂದು ರೀತಿಂದಽ ಸಹಾಯ ಮಾಡಿದ್ಹಾಂಗ ಆಗತದ; ಅಕ್ಕನ ಕಿಟಿ ಕಿಟೀನೂ ತಪ್ಪತಽದ; ಹುಡಗೂರ ತಾಪಾದರೂ ಕಡಿಮಿ ಆದೀತು, ಅಂತ ಆಶಾ! ಮುಂದ ದೇವರು ಏನ ಮಾಡಸತಾನ ನೋಡಬೇಕು! ವಯಸ್ಸೂ ಹೆಚ್ಚೂ ಕಡಿಮೆ ಆಗ್ತಾವಾಽ ಈ ಮಾತೇನೋ ಖರೆ ಅನ್ರಿ! ದೊಡ್ಡ ಕನ್ಯಾನಽ ನೋಡಿ ಮಾಡಿಕೊಬೇಕು! ಆದರ ನಮ್ಮ ಎರಡನೇ ಕುಟುಂಬ ಮುತ್ತಯಿದಿ ತನದಿಂದಽನಽ ತೀರಿಕೊಳ್ಳಲಿಲ್ಲೇನು? ಅದೆಲ್ಲಾ ದೇವರ ಕೈಯಾಗಿನ ಮಾತೇನ್ರೆಪಾ; ನಾವು ಎಷ್ಟರವರು? ಹರೀ! ನಮ್ಮಪ್ಪಾ, ಎಲ್ಲಾ ನಿನ್ನ ಇಚ್ಛಾ! ಹೌದಲ್ಲೋ ರಾಯರಽ ನಿವಽ ಹೇಳ್ರಿ!

(ರಾಯರ ಬಾಯಿ ಒಣಗಿ ಹೋಗಿದ್ದಿತು. ನಾಲಗೆಯೆ ಏಳದಂತಾಗಿದ್ದಿತು. ಮದುವಣಿಗನನ್ನು ಬರೀ ಗುರುಗುಟ್ಟಿ ನೋಡತೊಡಗಿದ್ದರು.)
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...