Home / ಕವನ / ಅನುವಾದ / ಸ್ನೇಹ-ಶಪಥ

ಸ್ನೇಹ-ಶಪಥ

ಮಿತ್ರನಾಗಲಿ ಶತ್ರುವಾಗಲಿ
ಗುರುತಿನವನಾಗಲಿ, ಗುರುತಿಲ್ಲದವನಾಗಲಿ
ದೊಡ್ಡವನೆಂದು ತಿಳಿದವನ
ಬಡವನೆಂದು ಒಪ್ಪಿದವನ
ಮೇಲೆ
ಯಾವದೇ ಕಾರಣದಿಂದ
ಅಪಯಶದ ಧೂಳು ಹಾರಿದರೆ
ನೀನು
ಕಟುವಚನದಿಂದ ಅವನನ್ನು
ದೂರುವ ತಪ್ಪು ಮಾಡದಿರು.
ಇವನು ಹಾಗೇ ಇದ್ದನೆಂದು
ನೂರಾರು ಪುರಾವೆಗಳ ಹಿಡಿದು
ಸಾಧಿಸದಿರು,
ಅವನು ನಿಜವಾಗಿಯೂ ಎಡವಿ
ತಪ್ಪುದಾರಿ ಹಿಡಿದರೆ
ಕಟು ಮಾತಿನಿಂದಲ್ಲ
ಸ್ನೇಹದಿಂದ ಮಾತಾಡಿ ನೋಡು.
ದೋಷ ಎಷ್ಟು ಆಳವಾದರು
ಸ್ನೇಹ ಅಲ್ಲಿ ಇಳಿಯುವುದು
ಲೋಕ ಎಷ್ಟು ಭ್ರಷ್ಟವಾದರು
ಸ್ನೇಹ ಎಲ್ಲರಿಗೆ ಹಿಡಿಸುವುದು
ಬಿದ್ದವರನ್ನು ಎಬ್ಬಿಸುವಷ್ಟು
ಪ್ರಿಯ ಕಾರ್ಯವಿಲ್ಲ
ಎತ್ತಿ ಸ್ನೇಹ ಹಂಚದ
ಕೀಳ್ತನದಷ್ಟು ಪತನ ಬೇರಿಲ್ಲ.
ಸ್ನೇಹಲ ದೃಷ್ಟಿಯಿಂದ
ನೋಡಿದರೆ, ಕಣ್ಣಿನ ದುಸ್ಸಾಹಸ
ಮರೆಯಾಗುವುದು
ಪ್ರತಿಯೊಂದು ದುಷ್ಟತನ
ಕಂಬನಿಯಾಗಿ
ಕಪೋಲದಿಂದ ಹರಿಯುವುದು.
ಆಣೆಯ ಮೇಲೆ ನಿನಗೆ
ಹೆಚ್ಚು ಮೋಹ
ಆಣೆ ಹಾಕುವ ಚಟ ಒಳಿತಲ್ಲ
ಶಪಥ ಜೊತೆಗೆ ತೊಂದರೆಯನ್ನು ತರುವುದು
ನಿನ್ನ ಮೇಲೆ ಹಾವಿಯಾಗುವುದು.
ಹೊರೆಸುವೆನು ಆಣೆ ನಿನ್ನ ಮೇಲೆ ನಾನು
ಇಳಿಸಿ ಹಾಡಿ ಹರಡು
ಸ್ನೇಹದಿ ನೀನು,
ಆಣೆ ನಿನಗೆ ಆ ಕರುಣಾಕರನ,
ಬೆತ್ತಲೆಯಾಗಿ ಸ್ನೇಹದ
ಭಿಕ್ಷೆ ಬೇಡುವ ಭಿಕ್ಷುಕನ
ಕಟುವಾಗಿ ಒರೆಯದೆ, ಹೊರಡು
ಅಂತರಮನದ ನೇಹದಿ ಹೇಳು
ಕೊನರುವುದು ಕೊರಡು.
*****
ಮೂಲ: ಭವಾನಿ ಪ್ರಸಾದ ಮಿಶ್ರ
(ಹಿಂದಿ)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...