Home / ಕವನ / ಕವಿತೆ / ಹಟಮೆಂಟ್ ಜೀವನ

ಹಟಮೆಂಟ್ ಜೀವನ

ಕೋಟಿ ಜನ ಒರಲುವರು
ನರಳುವರು, ತೆರಳುವರು
ಅವರ ಬದುಕಿನ ತಾಣ
ಅರೆಸತ್ತು ಉಳಿದ ಪ್ರಾಣ
ನಮ್ಮ ಭಾಷೆಯಲಿ ಹಟಮೆಂಟು
ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು….
ಹುಟ್ಟು-ಸಾವು
ಯೌವನದ ಕಾವು
ಮುದಿಯಾದ ನೋವು
ಗಳ ಸೆಳತ….ಅಲೆತಕದು ಠಾವು…..
ಅಲ್ಲಿಹುದು ಜನನ-ಮರಣದ ನಂಟು
ನಮ್ಮ ಭಾಷೆಯಲದು ಹಟಮೆಂಟು
* * * *

ಒಂದು ದಿನ ಬಂತು ಮಳೆ
ಅದರ ಹಿಂದೆ ಹೊಳೆ
ಮಳೆ ಒಳಗು-ಹೊರಗೂ
ಹೊಳೆಗೆಲ್ಲ ಕೊಚ್ಚಿ ಹೋಗುವವರೆಗೂ
ಗುಡುಗು ಮಿಂಚಿನ ಸೆಳೆತ
ಗಾಳಿ-ಗೋಳಿನ ಹೊಡೆತ
ಬಿದಿರು ಮಳೆ ದೀಪದಲೆ ಎಲ್ಲುಂಟು?
ನಮ್ಮ ಭಾಷೆಯಲದು ಹಟಮೆಂಟು
* * * *

ಚಳಿ ಬಂತು…. ಚಳಿ
ಇಲ್ಲ ಕಂಬಳಿ
ಒಲೆ ಇಹುದು ಬಳಿ
ಅದಕ್ಕಿಲ್ಲ ಎಲಿ
ನಡುಕ……ಕಂಪನ
ಹೃದಯ ಸ್ಥಂಬನ
ಎಳೆಜೀವ ಒಣ…….ಒಣ…
ಬಾಳೆಲ್ಲ ಬಣ ಬಣ

ಚಳಿಗೆ ಸಾವಿನ ಗಂಟು
ಮನೆಯಲ್ಲ ಅದು ಹಟಮೆಂಟು!

ಬಿಸಿಲು….ಬೆವರು
ಬೇಗೆ…ದಗೆ, ಹೊಗೆ.
ಕಾದು ಉರಿವ ನೆಲ……ಇಲ್ಲ ನೀರು
ಇದರೊಳಗು ಬಿಸಿಯುಸಿರು
ಬಿಡುವ ಬಗೆ!

ಪತ್ರದ ಛತ್ರ….
ಬರಿ ಮೈ…..ಇಲ್ಲ ವಸ್ತ್ರ
ಹಾಸಿಗೆ ನೆಲ, ಹೊದಿಕೆ ಇಬ್ಬನಿ ಜಲ
ಬಡತನ ಅವರ ಕೊಲ್ಲುವ ಅಸ್ತ್ರ

ಅನ್ನ ಎನುತ ಹಲುಬುವರು
ಬಡಕಲು ಕಾಯ
ಇರುವನಕ ಬದುಕುವ ಧ್ಯೇಯ
ಬಲವಿಲ್ಲ ಕೈಕಾಲು, ಮೈಗೆ
ನಡೆದಂತೆ ದಾರಿಯಲಿ ಹೊಯ್ಗೆ….

ಇದರೊಳಗು ನೆಲನಮ್ಮ
ಸಿಲುಕಿಹುದು ಹುಲಿಯ ಬಾಯ್ಗೆ
ಮನವಿಡಿ, ತನುಕೊಡಿ, ರಕ್ತ ನೀಡಿ
ರಕ್ಷಣೆಯ ಹೊರೆ ನಿಮ್ಮ ಕೈಗೆ

ಎಂದಿಂತು ಸ್ವರ ಎತ್ತಿ, ಕರ ಎತ್ತಿ
ಅರಚುವರು ಶ್ವೇತಮತಿಗಳು……ನಾಯಕರು

ಕಾಲ ಓಟಿನ ಬಂತು
ಕಾರು ಇತ್ತಲೂ ಬಂತು

“ನಿಮ್ಮ ಹಿತ ನಮ್ಮ ಮತ
ನಿಮಗೆಂದೆ, ನಿಮ್ಮ ಸುಖಕೆಂದೆ
ಹಿಡಿದಿಹೆವು ಇಂದು ವ್ರತ
ಇರಲೇಳಿ ನಮಗೊಂದು ನಿಮ್ಮ ಮತ…..

ಓಟು ಮುಗಿಯಲು
ವ್ರತವೂ ಮುಗಿವುದು
ಅವರಲ್ಲೆ, ಅವರು ವ್ಯರ್ಥ
ಪುಸಿವರು…ಅದಕಿಲ್ಲ ಮಿತ

ಇದು ವಿಧಿಯ ಕಾಂಪ್ಲಿಮೆಂಟು
ಮನೆಯಲ್ಲ ಅದು ಹಟಮೆಂಟು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...