Home / ಕವನ / ಕವಿತೆ / ಹಟಮೆಂಟ್ ಜೀವನ

ಹಟಮೆಂಟ್ ಜೀವನ

ಕೋಟಿ ಜನ ಒರಲುವರು
ನರಳುವರು, ತೆರಳುವರು
ಅವರ ಬದುಕಿನ ತಾಣ
ಅರೆಸತ್ತು ಉಳಿದ ಪ್ರಾಣ
ನಮ್ಮ ಭಾಷೆಯಲಿ ಹಟಮೆಂಟು
ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು….
ಹುಟ್ಟು-ಸಾವು
ಯೌವನದ ಕಾವು
ಮುದಿಯಾದ ನೋವು
ಗಳ ಸೆಳತ….ಅಲೆತಕದು ಠಾವು…..
ಅಲ್ಲಿಹುದು ಜನನ-ಮರಣದ ನಂಟು
ನಮ್ಮ ಭಾಷೆಯಲದು ಹಟಮೆಂಟು
* * * *

ಒಂದು ದಿನ ಬಂತು ಮಳೆ
ಅದರ ಹಿಂದೆ ಹೊಳೆ
ಮಳೆ ಒಳಗು-ಹೊರಗೂ
ಹೊಳೆಗೆಲ್ಲ ಕೊಚ್ಚಿ ಹೋಗುವವರೆಗೂ
ಗುಡುಗು ಮಿಂಚಿನ ಸೆಳೆತ
ಗಾಳಿ-ಗೋಳಿನ ಹೊಡೆತ
ಬಿದಿರು ಮಳೆ ದೀಪದಲೆ ಎಲ್ಲುಂಟು?
ನಮ್ಮ ಭಾಷೆಯಲದು ಹಟಮೆಂಟು
* * * *

ಚಳಿ ಬಂತು…. ಚಳಿ
ಇಲ್ಲ ಕಂಬಳಿ
ಒಲೆ ಇಹುದು ಬಳಿ
ಅದಕ್ಕಿಲ್ಲ ಎಲಿ
ನಡುಕ……ಕಂಪನ
ಹೃದಯ ಸ್ಥಂಬನ
ಎಳೆಜೀವ ಒಣ…….ಒಣ…
ಬಾಳೆಲ್ಲ ಬಣ ಬಣ

ಚಳಿಗೆ ಸಾವಿನ ಗಂಟು
ಮನೆಯಲ್ಲ ಅದು ಹಟಮೆಂಟು!

ಬಿಸಿಲು….ಬೆವರು
ಬೇಗೆ…ದಗೆ, ಹೊಗೆ.
ಕಾದು ಉರಿವ ನೆಲ……ಇಲ್ಲ ನೀರು
ಇದರೊಳಗು ಬಿಸಿಯುಸಿರು
ಬಿಡುವ ಬಗೆ!

ಪತ್ರದ ಛತ್ರ….
ಬರಿ ಮೈ…..ಇಲ್ಲ ವಸ್ತ್ರ
ಹಾಸಿಗೆ ನೆಲ, ಹೊದಿಕೆ ಇಬ್ಬನಿ ಜಲ
ಬಡತನ ಅವರ ಕೊಲ್ಲುವ ಅಸ್ತ್ರ

ಅನ್ನ ಎನುತ ಹಲುಬುವರು
ಬಡಕಲು ಕಾಯ
ಇರುವನಕ ಬದುಕುವ ಧ್ಯೇಯ
ಬಲವಿಲ್ಲ ಕೈಕಾಲು, ಮೈಗೆ
ನಡೆದಂತೆ ದಾರಿಯಲಿ ಹೊಯ್ಗೆ….

ಇದರೊಳಗು ನೆಲನಮ್ಮ
ಸಿಲುಕಿಹುದು ಹುಲಿಯ ಬಾಯ್ಗೆ
ಮನವಿಡಿ, ತನುಕೊಡಿ, ರಕ್ತ ನೀಡಿ
ರಕ್ಷಣೆಯ ಹೊರೆ ನಿಮ್ಮ ಕೈಗೆ

ಎಂದಿಂತು ಸ್ವರ ಎತ್ತಿ, ಕರ ಎತ್ತಿ
ಅರಚುವರು ಶ್ವೇತಮತಿಗಳು……ನಾಯಕರು

ಕಾಲ ಓಟಿನ ಬಂತು
ಕಾರು ಇತ್ತಲೂ ಬಂತು

“ನಿಮ್ಮ ಹಿತ ನಮ್ಮ ಮತ
ನಿಮಗೆಂದೆ, ನಿಮ್ಮ ಸುಖಕೆಂದೆ
ಹಿಡಿದಿಹೆವು ಇಂದು ವ್ರತ
ಇರಲೇಳಿ ನಮಗೊಂದು ನಿಮ್ಮ ಮತ…..

ಓಟು ಮುಗಿಯಲು
ವ್ರತವೂ ಮುಗಿವುದು
ಅವರಲ್ಲೆ, ಅವರು ವ್ಯರ್ಥ
ಪುಸಿವರು…ಅದಕಿಲ್ಲ ಮಿತ

ಇದು ವಿಧಿಯ ಕಾಂಪ್ಲಿಮೆಂಟು
ಮನೆಯಲ್ಲ ಅದು ಹಟಮೆಂಟು
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...