Home / ಕವನ / ಕವಿತೆ / ಅನಂತ

ಅನಂತ

ಕಿರಿ ಕಿರಿ
ಮನಸ್ಸಿನ ಒಳಗೆ ಹೊರಗೆ
ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ
ತಲೆಯಲ್ಲಿ….
ತಲೆಯ ಮೇಲೆ ಫೋನಿನ ಕಿರ್ ಕಿರಿ
ಆಫೀಸಿನಲ್ಲಿ ಮೇಲಾಧಿಕಾರಿಗಳ
ಅವರಿಗೆ ಕಂಪನಿಯ ಲಾಭ ಹಾನಿಗಳ
ಓದು ರೂಮಿನಲಿ
ಓದುವ ಹುಡುಗರ…ಹುಡುಗಿಯರ
‘ಮೇಲಂಕಲಿಯಾ ಎಂದರೇನು ಸಾರ್’
ಅಯ್ಯೋ ಪೆದ್ದೆ. ಎಷ್ಟು ಸಾರಿ ವಿವರಿಸಲಿ?
ಸ್ವಲ್ಪ ಓದ ಬಿಡಿ (ಅದನ್ನು ತಿಳಿದು ನೀವು ಮಾಡುವುದೇನು)
ಮನೆಯಲ್ಲಿ ಓದಲಾಗುವುದಿಲ್ಲ
ಹೆಂಡತಿಯ ಕಿರಿ ಕಿರಿ
ಮಕ್ಕಳ ಕಿರಿ ಕಿರಿ
ಪಕ್ಕದ ಮನೆಯ ಹೆಣ್ಮಕ್ಕಳ ಕಿರಿ ಕಿರಿ
ಆಕೆ ಫರೀದಾ – ಅಡಿಗಡಿಗೆ ಬರುತ್ತಾಳೆ
ನನ್ನ ಓದುವ ಟೇಬಲಿಗೆ ಒರಗುತ್ತಾಳೆ
ಬುದ್ಧಿ ಮನಸ್ಸಿಗೆ
ಓದಲಾಗುವುದಿಲ್ಲ
ಥತ್, ಹರೆಯದ ಹುಡುಗಿ
ತಲೆಯಷ್ಟು ದಪ್ಪ ಎದೆ
ಕಿರಿ ಕಿರಿ ಎಲ್ಲಾ ಕಡೆ
ನೆತ್ತಿಯ ಕುಕ್ಕಿ ‘ಕವಿ ಸಮಯ’ದ ಬಗ್ಗೆ
ವಿಚಾರ ಮಾಡ ತೊಡಗಿದಾಗ
ಮತ್ತೆ ಕಿರ್ರ್…..
‘ತಗೊಳ್ಳಿ, ಈ ಮಗುವನ್ನ
ನನಗೆ ಒಳಗೆ ಕೆಲಸ ಇದೆ….
(ನಿನಗೆ ಕೆಲಸ ಇಲ್ಲದಿದ್ದುದು ಯಾವಾಗ)’
ಓದಿ ನೀವು ಮಾಡಿದ್ದೇನು?
‘ಮಾಡಿದ್ದೇನು’
ಮೂರು ಕಾಸಿನ ಬೆಲೆಯ ಶಿಕ್ಷಣ ವೃತ್ತಿ
ಅಲ್ಲಿ ಪ್ರಿಂಸಿಪಾಲನ,
ಸಂಚಾಲಕರ ಕಿರುಕುಳ
‘ನಿನ್ನೆ ಪಿರೇಡ್ ಬಂಕ್ ಮಾಡಿದಿ?
ವಿದ್ಯಾರ್ಥಿಗಳ ಕಂಪ್ಲೇಂಟ್ ಬಂದಿದೆ….’
ಮಾಡಿದ್ದು ಅರ್ಥವಾಯಿತೆ ಅವರಿಗೆ?
ಕಿರಾಣಿ ಅಂಗಡಿಯಲ್ಲಿ
ರೇಶನಿಗೆ ನಿಂತಾಗ ಹಿಂದು-ಮುಂದಿನವರ
ಗಲಾಟೆ, ಕಿರಿಕಿರಿ
‘ಅಕ್ಕಿಯಿದೆ, ಗೋದಿಯಿಲ್ಲ’
ಆದರದು (ಮನುಷ್ಯರು ತಿನ್ನುವಂಥಾದ್ದಲ್ಲ)
‘ಗೋದಿಯಿದೆ, ಸಕ್ಕರೆ ಇಲ್ಲ’ – (ಸ್ನ್ಯಾಮಿನೊಳಗಿದೆ ಎಲ್ಲ.)
ಅವನ ಮುಖಕ್ಕೆ ಹೊಡೆದಷ್ಟು ಸಿಟ್ಟು
ಒಮ್ಮೆಲೆ ಆತಂಕಿ ಆಗಿ ಬಿಡಲೆ
ಆಗ ಮೈ ಒರಸಿ ಮಾತಿಗೆ ನಿಂತ
‘ಅವಳ’ ಮದಮತ್ತ ಶರೀರದ ರೂಪ-ಅತಿ-ಸಮೀಪ.
ಮತ್ತೆ ಕಿರಿ ಕಿರಿ
ಸಿಟ್ಟಿನ ವಿಚಾರವೂ ಹೋಯಿತು.
ಬದುಕಿನುದ್ದಕೂ
ಮೈ-ಮನಗಳನ್ನು ಆವರಿಸಿ ನಿಂತ
ಕಿರುಕುಳ ಚಿರ ಅನಂತ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...