Home / ಕವನ / ಕವಿತೆ / ಅನಂತ

ಅನಂತ

ಕಿರಿ ಕಿರಿ
ಮನಸ್ಸಿನ ಒಳಗೆ ಹೊರಗೆ
ಪರೀಕ್ಷಾ ಭವನದಲಿ ಕೂತ ವಿದ್ಯಾರ್ಥಿಯ
ತಲೆಯಲ್ಲಿ….
ತಲೆಯ ಮೇಲೆ ಫೋನಿನ ಕಿರ್ ಕಿರಿ
ಆಫೀಸಿನಲ್ಲಿ ಮೇಲಾಧಿಕಾರಿಗಳ
ಅವರಿಗೆ ಕಂಪನಿಯ ಲಾಭ ಹಾನಿಗಳ
ಓದು ರೂಮಿನಲಿ
ಓದುವ ಹುಡುಗರ…ಹುಡುಗಿಯರ
‘ಮೇಲಂಕಲಿಯಾ ಎಂದರೇನು ಸಾರ್’
ಅಯ್ಯೋ ಪೆದ್ದೆ. ಎಷ್ಟು ಸಾರಿ ವಿವರಿಸಲಿ?
ಸ್ವಲ್ಪ ಓದ ಬಿಡಿ (ಅದನ್ನು ತಿಳಿದು ನೀವು ಮಾಡುವುದೇನು)
ಮನೆಯಲ್ಲಿ ಓದಲಾಗುವುದಿಲ್ಲ
ಹೆಂಡತಿಯ ಕಿರಿ ಕಿರಿ
ಮಕ್ಕಳ ಕಿರಿ ಕಿರಿ
ಪಕ್ಕದ ಮನೆಯ ಹೆಣ್ಮಕ್ಕಳ ಕಿರಿ ಕಿರಿ
ಆಕೆ ಫರೀದಾ – ಅಡಿಗಡಿಗೆ ಬರುತ್ತಾಳೆ
ನನ್ನ ಓದುವ ಟೇಬಲಿಗೆ ಒರಗುತ್ತಾಳೆ
ಬುದ್ಧಿ ಮನಸ್ಸಿಗೆ
ಓದಲಾಗುವುದಿಲ್ಲ
ಥತ್, ಹರೆಯದ ಹುಡುಗಿ
ತಲೆಯಷ್ಟು ದಪ್ಪ ಎದೆ
ಕಿರಿ ಕಿರಿ ಎಲ್ಲಾ ಕಡೆ
ನೆತ್ತಿಯ ಕುಕ್ಕಿ ‘ಕವಿ ಸಮಯ’ದ ಬಗ್ಗೆ
ವಿಚಾರ ಮಾಡ ತೊಡಗಿದಾಗ
ಮತ್ತೆ ಕಿರ್ರ್…..
‘ತಗೊಳ್ಳಿ, ಈ ಮಗುವನ್ನ
ನನಗೆ ಒಳಗೆ ಕೆಲಸ ಇದೆ….
(ನಿನಗೆ ಕೆಲಸ ಇಲ್ಲದಿದ್ದುದು ಯಾವಾಗ)’
ಓದಿ ನೀವು ಮಾಡಿದ್ದೇನು?
‘ಮಾಡಿದ್ದೇನು’
ಮೂರು ಕಾಸಿನ ಬೆಲೆಯ ಶಿಕ್ಷಣ ವೃತ್ತಿ
ಅಲ್ಲಿ ಪ್ರಿಂಸಿಪಾಲನ,
ಸಂಚಾಲಕರ ಕಿರುಕುಳ
‘ನಿನ್ನೆ ಪಿರೇಡ್ ಬಂಕ್ ಮಾಡಿದಿ?
ವಿದ್ಯಾರ್ಥಿಗಳ ಕಂಪ್ಲೇಂಟ್ ಬಂದಿದೆ….’
ಮಾಡಿದ್ದು ಅರ್ಥವಾಯಿತೆ ಅವರಿಗೆ?
ಕಿರಾಣಿ ಅಂಗಡಿಯಲ್ಲಿ
ರೇಶನಿಗೆ ನಿಂತಾಗ ಹಿಂದು-ಮುಂದಿನವರ
ಗಲಾಟೆ, ಕಿರಿಕಿರಿ
‘ಅಕ್ಕಿಯಿದೆ, ಗೋದಿಯಿಲ್ಲ’
ಆದರದು (ಮನುಷ್ಯರು ತಿನ್ನುವಂಥಾದ್ದಲ್ಲ)
‘ಗೋದಿಯಿದೆ, ಸಕ್ಕರೆ ಇಲ್ಲ’ – (ಸ್ನ್ಯಾಮಿನೊಳಗಿದೆ ಎಲ್ಲ.)
ಅವನ ಮುಖಕ್ಕೆ ಹೊಡೆದಷ್ಟು ಸಿಟ್ಟು
ಒಮ್ಮೆಲೆ ಆತಂಕಿ ಆಗಿ ಬಿಡಲೆ
ಆಗ ಮೈ ಒರಸಿ ಮಾತಿಗೆ ನಿಂತ
‘ಅವಳ’ ಮದಮತ್ತ ಶರೀರದ ರೂಪ-ಅತಿ-ಸಮೀಪ.
ಮತ್ತೆ ಕಿರಿ ಕಿರಿ
ಸಿಟ್ಟಿನ ವಿಚಾರವೂ ಹೋಯಿತು.
ಬದುಕಿನುದ್ದಕೂ
ಮೈ-ಮನಗಳನ್ನು ಆವರಿಸಿ ನಿಂತ
ಕಿರುಕುಳ ಚಿರ ಅನಂತ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...