Home / ಕವನ / ಕವಿತೆ / ಬಯಕೆಯುತ್ಸವ

ಬಯಕೆಯುತ್ಸವ

ಬಂತು ಶ್ರಾವಣ
ಎಂತು ಬದುಕುವಳೊ
ನಲ್ಲೆ ಜೀವ ಉಳಿಸಿ
ಎಂದು ಹಪಹಪಿಸಿ
ಮೈಗೆ ಮನಸ್ಸಿಗೆ ಯಾತನೆಯ ಬರಿಸಿ
ಬರಿದೆ ಕೊರಗದಿರು, ಸೊರಗದಿರು ನಲ್ಲ
ತುಂತುರು ಮಳೆಯ ತುಷಾರಕ್ಕೆ
ತಂಗಾಳಿಯ ಅಲೆ ಬಂದು ಸಿಲುಕಿದಾಗ
ನನ್ನ ಹೃದಯದ ಎಳೆ ಎಳೆದಂತಾಗಿ
ಯಕ್ಷ, ನಿನ್ನ ನೆನಪಿನ ಸುಳಿ ಏಳುವುದು
ಮೊದಲ ದಿವಸಗಳ, ರಾತ್ರಿಗಳ, ಕ್ಷಣಗಳ
ಅನುಭವದ ಸ್ವರ್ಗಸುಖ
ಎಂತು ಬರುವುದೊ ಮತ್ತೊಮ್ಮೆ
ಎಂದು ನನ್ನ ಜೀವವೂ ತುಡಿಯುವುದು
ಮಿಡಿಯುವುದು….
ಹಿಂದಿನಂತಲ್ಲ.
ಇಂದು ಬರಗಾಲವಿಲ್ಲ
ಈ ಸಲ ನಭವೇ ಕಳಚಿ ಬಿದ್ದಿದೆ
ಮೇಘ ಮಿತ್ರ ನಮ್ಮ ವಿರಹ ವಾರ್ತೆಯನು
ಹೊತ್ತು
ದುಃಖ ಭಾರವ ತಾಳಲಾರದೆ
ಬಾಂದಳದಿಂದ ಬಿದ್ದು
ಎಲ್ಲಡೆಯಲ್ಲು ನೆರೆಯನು ಬರಿಸಿದ್ದಾನೆ
ಹಸು-ಹಟ್ಟಿ ಬೆಳೆ-ಮಳೆ ಜನ ವಸತಿ-
ಗಳನೆಲ್ಲ ಹೊಚ್ಚಳಿಸಿ
ನಮ್ಮ ಮಂತ್ರಿಗಳನ್ನು ಮತ್ತೊಮ್ಮೆ
ವಿಮಾನ ವೀಕ್ಷಣಕೆ ಭರವಸೆಗಳ ಭಾಷಣಕೆ
ತೊಡಗಿಸಿದ್ದಾನೆ.
ಆದರೂ
ಪ್ರೇಮಿಗಳಿಬ್ಬರನು
ಜಾತಿ ನೀತಿಯ ಸಂಪತ್ತಿನ ಸವಾಲು ಹಾಕಿ
ಅಗಲಿಪುದೆ ಸುಖ ಈಜಗಕೆ
ಮೊನ್ನೆ…. ಕೇಳಿದೆಯಲ್ಲ
ಪ್ರಖರ ಪ್ರೇಮಿಗಳೀರ್ವರು
ಒಂದೆ ಉರುಳಿಗೆ ತಮ್ಮ ಕೊರಳನ್ನು ಬಿಗಿದು
ಅಪ್ಪಿಕೊಂಡೇ ಇಹದ ಜಂಜಡದಿಂದ
ರಿಕ್ತರಾದುದ, ಮುಕ್ತರಾದುದ… ಕೇಳಿದೆಯಲ್ಲ
ದೂರವಾಣಿಯಲಿ ನನ್ನ ಮನದಳಲುಗಳ
ಕೂರವಾಗಿಹ ಗತಿವಿಧಿಯ
ದೂರಿ ಹೇಳುವ ಮನಸಾದರೂ
ದೂರವಾಣಿಯ ತಾರೊತ್ತಿ
ದೂರುಗಳ ಸೆರೆಹಿಡಿದ
ಚೋರರ ಭಯವಾಗಿ
ನಿನ್ನ ರಾಜಪದವಿಯನೆ ಕಸಿದು
ದುರ್ಗತಿಗೆಸೆದು
ಪದಚ್ಯುತಿಗೊಳಿಸಿ ಅಳಿಸಿ
ನಿನ್ನವರನ್ನೆ ನಿನ್ನ ವಿರುದ್ಧ ಮಸೆದು
ಸತ್ತೆಯನೆ ಬದಲಿಸುವರೆಂಬ
ಅಳಕು ಬಂತು ಸುತ್ತಿ…
ಅಂಚೆ ವಿಧೇಯಕ
ಕಾಯಿದೆಯಾಗುವ ಮುನ್ನ
ನನ್ನ ದುಗುಡದ ವಿಸ್ತಾರವನ್ನ
ಎಕ್ಕಣಿಸಿ
ಆಷಾಡದ ಪ್ರಥಮ ದಿವಸಗಳ
ಸವಿನೆನಪು ರಸನಿಮಿಷಗಳ
ಲೆಕ್ಕಣಿಸಿ
ಕಳಿಸುವೆನು ನಿನಗೊಂದು
ಪ್ರಣಯ ಪತ್ರವ ಚಿನ್ನ
ಅದಕೆಂದೆ ಮಿಲನದ
ಬಯಕೆಯುತ್ಸವದಿ ಕೊಡೆ ಬಿಡಿಸಿ
ಬದುಕಿರುವೆ ಶ್ರಾವಣದಲು
ಜೀವ ಉಳಿಸಿ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...