Home / ಕವನ / ಭಾವಗೀತೆ / ಅಪ್ಪ ಅಪ್ಪ

ಅಪ್ಪ ಅಪ್ಪ

ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ
ಫಸ್ಟು ಕಣಪ್ಪ
ಬೇಕಿದ್ದರೆ ನೀ ಪ್ರಶ್ನೆ ಕೇಳು
ಉತ್ತರಿಸುವೆನಪ್ಪ
ನಾ ಉತ್ತರಿಸುವೆನಪ್ಪ
ನೀ ಪ್ರಶ್ನೆ ಕೇಳಪ್ಪ \\ಪಲ್ಲವಿ\\

ತಂದೆ: ಹಾಗೋ? (ಮಾತಿನ ಶೈಲಿಯಲ್ಲಿ)
ಕೋಳಿಯು ಮೊಟ್ಟೆ ಇಡುತ್ತೆ ಯಾಕೆ
ಹೇಳುವೆ ಏನಮ್ಮ?
ಮಗಳು: ಹಾಕಿದರೆ ಅದು ಒಡೆದ್ಹೋಗುತ್ತೆ
ಅದಕ್ಕೆ ಇಡುತ್ತೆ ಅಪ್ಪ
ತಂ: ಗಣೇಶನ ಕತೆಯಿಂದ ನೀನು
ತಿಳಿದೆ ಏನಮ್ಮ?
ಮ: ಸ್ನಾನದ ಕೋಣೆಗೆ ಬಾಗಿಲು ಇರುವುದು
ಅಗತ್ಯ ಇದೆಯಪ್ಪ
ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ
ಫಸ್ಟು ಕಣಪ್ಪ
ಅದಕ್ಕೆ ಇನ್ನು ಪ್ರಶ್ನೆ ಕೇಳು
ಉತ್ತರಿಸುವೆನಪ್ಪ
ನಾ ಉತ್ತರಿಸುವೆನಪ್ಪ
ನೀ ಪ್ರಶ್ನೆ ಕೇಳಪ್ಪ \\೧\\

ತಂ: ಸರಿ. ಹಾಗಿದ್ರೆ . . . . (ಮಾತಿನ ಶೈಲಿಯಲ್ಲಿ)
ಮಗಳೆ, ಸಾರು ಸಪ್ಪೆಯಾದರೆ
ಹಾಕುವೆ ಏನಮ್ಮ?
ಮ: ಸಾರು ಸಪ್ಪೆಯಾದರೆ ಉಪ್ಪಿಗೆ
ಕೈ ಹಾಕುವೆನಪ್ಪ
ತಂ: ಅಕ್ಬರನು ಸಿಂಹಾಸನ ಏರಿ
ಏನು ಮಾಡಿದನು?
ಮ: ಮಾಡುವುದೇನು? ತಕ್ಷಣ ಅಲ್ಲಿ
ಕುಳಿತುಕೊಂಡನು

ಮ: ಅಪ್ಪ ಅಪ್ಪ ಇನ್ನು ಯಾವುದೆ
ಪ್ರಶ್ನೆ ಕೇಳಪ್ಪ
ಉತ್ತರ ಹೇಳುವ ನನಗಿಲ್ಲದ ಶ್ರಮ
ನಿನಗೆ ಯಾಕಪ್ಪ?
ತಂ: ಮಗಳೆ ಮಗಳೆ ನಿಜಕ್ಕು ನೀನೆ
ಬಹಳ ಬುದ್ಧಿವಂತೆ
ಥಟ್ಟಂತ ಉತ್ತರಿಸುವ ನಿನಗೆ
ಸಾಟಿ ಇಲ್ಲವಂತೆ- ಯಾರೂ
ಸಾಟಿ ಇಲ್ಲವಂತೆ! \\೨\\
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...