Home / ಕವನ / ಕವಿತೆ / ಮಿಂಜೈಮೇಳ

ಮಿಂಜೈಮೇಳ

ನವ ಶತಮಾನದಲಿ ಕಾಲಿಡುತಿಹೆವು
ಸ್ವಾತಂತ್ರ್ಯದ ಸುವರ್ಣ ಹಬ್ಬದ..
ಸಡಗರದ… ಸಂತಸಗಳಲಿ

ಗತಿಸಿ ಹೋದ ನಲವತ್ತೇಳರ
ಘಟನೆಗಳ ನೆನೆಯುತ
ಬಲಿದಾನದ ವೀರಸೇನಾನಿಗಳ
ತ್ಯಾಗದ ರೂಪ ಕಾಣುತ
ಸಾಗಿಹದು ಸ್ವಾತಂತ್ರ್ಯಯ ಸುವರ್ಣೋತ್ಸವ

ಸೌಂದರ್ಯರಾಣಿ… ಮುಕುಟ ಮಣಿ
ಶ್ವೇತಧಾರಿಣಿ ಜಮ್ಮು ಕಾಶ್ಮೀರದ
ಗಿರಿ ಕಾನನಗಳ ಮಡಿಲು
ನದಿ ನಲೆಗಳ ನಡುವಲಿ
ಮಿಂಜೈಮೇಳ… ನಡೆದಿತ್ತು

ಹಸಿರ ಧರೆಯ ಸೊಬಗಿನಲಿ
ಚಂಬಾ, ಟಿಸ್ಸಾ, ದೋಡದ, ಜನಪದರು
ಸಂಪಾಗಿ ಸಂತಸದಿ ನಿದ್ರಾವಶದಲ್ಲಿದ್ದರು
ಮಧ್ಯರಾತ್ರಿಯ ಕಾರ್ಗತ್ತಲಲ್ಲಿ
ಏ.ಕೆ-ನಲವತ್ತೇಳು ಗುಡುಗಿದವು
ಅಟ್ಟಹಾಸದಿ ಜಿಹಾದಿಗಳು ಮೆರೆದವು

ಮಲಗಿದಲ್ಲೆ ನಲುಗಿದ ಜೀವಗಳು
ಸ್ವಾತಂತ್ರ್ಯಯೋತ್ಸವ ಸಡಗರದಲಿ…
ವಿಧಿಯಾಟದ ರೂಪ ಕುಣಿದಿತ್ತು
ನಲವತ್ತೇಳರ ನೆನಪಿನಂಗಳದ
ನೆನಪನ್ನೆ ಅಳಿಸಿದವು – ಏಕ.ಎ.೪೭
ವಿಕಾರದಿ-ವಿಕ್ಷಿಪ್ತದಿ ನಗುತ್ತಿದ್ದವು
೫೦ನೇ ಸ್ವಾತಂತ್ರ್ಯಯದ ಸಂಭ್ರಮವ ಅಣಕಿಸುತ್ತಿದ್ದವು

***

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...