Home / ಕವನ / ಕವಿತೆ / ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರುಷಗಳ ಮೇಲೆ
ಸವಿನೆನಪುಗಳ ಬುತ್ತಿಯಲಿ
ಏನೇನೊ ಹಲವು ಕನಸನೆ ಹೊತ್ತು
ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ

ಕರಿಮಣ್ಣಿನ ಏರೆಹೊಲದ ದಿಬ್ಬದಿ
ನನ್ನೂರು ಕಾಣುವ ತವಕದಿ
ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ
ಜುಳು… ಜುಳು… ಹರಿಯುತಿಹಳು
ಕಷ್ಣೆಯುದರದೊಳಗಿನ `ಡೋಣಿ’

ಹದಿನಾಲ್ಕು ವರ್ಷಗಳ ಹಿಂದೆ
ಹೇಗಿತ್ತು ಹಾಗೆ ಇಂದಿಗು ಎಲ್ಲೆಲ್ಲೂ
ಪರಿಚಯದ ಮರುಛಾಯೆ
ಕಣ್ಮುಂದೆ ತುಂಬಿ ಮರುಕಳಿಸಿತ್ತು
ಮನದಿ ಇಲ್ಲುಂಡ ಸುಖವೆಲ್ಲ
ಬಾಲ್ಯದ ಬನವ ತವಕದಲಿ
ಹೊಕ್ಕಾಗ ಎಲ್ಲೆಡೆಗೂ ಹದಿನಾಲ್ಕು ವರ್ಷಗಳ
ಮುದುಡಿದ ಮುದಿ ನೆರಳು ಕವಿದಿತ್ತು

ವರುಣ ದುಬಾರಿಯಾಗಿದ್ದು…
ಎಲ್ಲೆಡೆ ಬಣ… ಬಣ
ನೆಲ ಜಲ – ಮನಗಳು
ನಿಂತ ಮರವಾಗಿದ್ದವು ಒಣಗಿ…

ಹೊಟ್ಟೆಪಾಡಿಗಾಗಿ ಗುಳೆ ಎದ್ದು ಹೋಗಿದ್ದ
ನನ್ನೂರಿನ ಅಣ್ಣ-ತಮ್ಮಂದಿರು
ಅಕ್ಕ-ತಂಗಿಯರು ಕಾಣದ
ಓಣೆಲ್ಲಾ ಮೌನ ಆವರಿಸಿತ್ತು

ಓಡಾಡಿ… ಆಡಿದ
ಬೆಚ್ಚಗಿನ ಮನೆಗಳೆಲ್ಲಾ ನೆಲಕೆ
ಕುಸಿದ ಮಣ್ಣಿನ ಗುಡ್ಡೆಗಳೆಲ್ಲ
ಹುಗಿದಿಟ್ಟುಕೊಂಡ ಬಾಲ್ಯದ ನೆನಪುಗಳೆಲ್ಲಾ
ಬಿದ್ದಿದ್ದವು ಮಾಸಿ ತಬ್ಬಲಿಯಾಗಿ

ಅಂದು ಗಿಜಿ-ಗಿಜಿ ತುಂಬಿದ
ಭೇದವೆಣಿಸದ ಮನಗಳು ಓಣಿಗಳು
ನಿರ್ಜೀವ ಸವೆತದ ಮುದುಡಿದ
ಆ ಹಿರಿಜೀವಗಳ ಅಸಹಾಯಕತೆ ಕಾಣುತ

ಕಣ್ಮುಂದೆ ಕಟ್ಟುತಲಿ
ಜೀವ ಮರಮರನೆ ಬಳಲಿತು
ಅವ್ವ-ಅಪ್ಪ- ಹೋದ
ಅಜ್ಜ-ಮುತ್ತಜ್ಜರು ಹೋದ
ಮನೆ-ಮನ-ಬರಿದಾಗಿತ್ತು

ಆ ಹಿರಿಜೀವಗಳ ಸ್ಪರ್ಶದ
ಪ್ರೀತಿ ಉಂಡ ಬಾಲ್ಯವು
ಅವರೊಡನೆ ಈ ಲೋಕವು ಹೋಯ್ತು
ಎಲ್ಲೋ ಮಣ್ಣಲ್ಲಡಗಿದ….
ಈ ಜಗದ ರೀತಿ ನೀತಿಯಿದು

ಹಸಿ ಗಾಯದಿ ಬಸಿವ
ನೆತ್ತರ ತೆರಹದಿ
ಬರಿಯ ವ್ಯಥೆಯೇ ಜೀವ ತುಂಬಿರಲು

ಸುಡು ಬಿಸಿಲಿನ ನಡು ಹಗಲು
ಮುಸ್ಸಂಜೆ ಕವಿದಿತ್ತು…
ಮನಕ್ಕೆಲ್ಲ ತಂಪು ಎರೆದಿತ್ತು
ಅಂದು ಇಂದಿನ ನಡುವೆ ತಿರುಗಿತ್ತು
ಹದಿನಾಲ್ಕು ವರ್ಷಗಳ
ಕಠೋರ ನಿಷ್ಕರುಣ ಕಾಲಚಕ್ರ

*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...