Home / ಲೇಖನ / ಇತರೆ / ಕೀಳರಿಮೆ ಏಕೆ?

ಕೀಳರಿಮೆ ಏಕೆ?

ಪ್ರಿಯ ಸಖಿ,
ಬಸ್ಸಿನ ಪ್ರಯಾಣದಲ್ಲೊಮ್ಮೆ ಕಾಲೇಜು ಯುವತಿಯೊಬ್ಬಳು ಜೊತೆಯಾದಳು. ಏನೇನೋ ಕಾಡು ಹರಟೆ ಹೊಡೆಯುತ್ತಾ ದಾರಿ ಸವೆಸುತ್ತಿರಲು, ಇದ್ದಕ್ಕಿದ್ದಂತೆ ಆ ಯುವತಿ ಕೂತ ಸೀಟಿನಲ್ಲೆ ಮಿಸುಕಾಡಲಾರಂಭಿಸಿದಳು. ಹಿಂದೆ ಮುಂದೆ, ಅಕ್ಕಪಕ್ಕಕ್ಕೆ ಜರುಗುತ್ತಾ ಹೇಗೆ ಕುಳಿತರೂ ಸಮಾಧಾನವಿಲ್ಲವೆಂಬಂತೆ ಗಲಿಬಿಲಿಯಲ್ಲಿದ್ದಳು. ನಿಧಾನಕ್ಕೆ ಕಣ್ಣು ಹಾಯಿಸಿದವಳಿಗೆ ಹಿಂದಿನ ಸೀಟಿನ ಯುವಕನೊಬ್ಬನ ಕಾಲ್ಚಳಕಕ್ಕೆ ಇವಳು ಹೀಗೆ ಒದ್ದಾಡುತ್ತಿದ್ದಾಳೆ ಎಂಬುದರಿವಾಯ್ತು. ‘ಆ ಹುಡುಗಂಗೆ ಕಾಲು ತೆಗೆಯೋದಕ್ಕೆ ಹೇಳಿ’ ಎಂದೆ. ಪಕ್ಕದವಳಿಗೆ. ಅದಕ್ಕವಳು ‘ಹೇಗೆ ಹೇಳೋದು ಅವನೇನಾದ್ರೂ ಒರಟಾಗಿ ಉತ್ತರ ಕೊಟ್ರೆ?’ ಎಂದಳು.

‘ಕೊಡ್ಲಿ ನಮಗೇನು ಬಾಯಿಲ್ಲವಾ ನಾವೂ ಮಾತಾಡಿದ್ರಾಯ್ತು’ ಎಂದೆ. ‘ಜನರೆದುರಿಗೆ ನಂಗೆ ಅವಮಾನ ಆಗುತ್ತೆ’ ಎಂದಳು ಹಿಂಜರಿಯುತ್ತಾ. ನಾನು ಅವಕ್ಕಾದೆ. ಅಲ್ಲ ಅವಮಾನವಾಗುವುದು ಇವಳಿಗಾ? ಅವನಿಗಾ? ಅವಳ ಒದ್ದಾಟ ನೋಡಲಾರದೇ ಕೊನೆಗೆ ನಾನೇ ಎದ್ದುನಿಂತು ‘ಸೀಟಿನಿಂದ ಕಾಲು ತೆಗೀರಿ ತೊಂದರೆ ಆಗುತ್ತೆ’ ಎಂದೆ. ಬಸ್ಸಿನಲ್ಲಿದ್ದ ಅನೇಕರ ಗಮನ ಆ ಕಡೆ ಬಿತ್ತು. ನಾಚಿದ ಯುವಕ ತಟ್ಟನೆ ಕಾಲ್ತೆಗೆದ. ಮುಂದೆ ಪ್ರಯಾಣದುದ್ದಕ್ಕೂ ಅನೇಕ ಪ್ರಜ್ಞಾವಂತರ ಚುಚ್ಚುನೋಟಗಳನ್ನು ಅವನು ಎದುರಿಸಬೇಕಾಯ್ತು!

ಸಖಿ, ಇಲ್ಲಿ ನನ್ನ ಕಾಳಜಿ ಇರುವುದು ಅವನ ಬಗೆಗಲ್ಲಾ. ಅವನು ಇದರಿಂದ ಪಾಠ ಕಲಿತನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ …….. ಆ ಯುವತಿಯ ಸ್ವಾನುಕಂಪದ ಬಗೆಗೆ ನನಗೆ ತೀವ್ರ ಬೇಸರವಾಯ್ತು. ಇಷ್ಟು ಸಣ್ಣ ಕಿರುಕುಳವನ್ನೇ ಎದುರಿಸಲಾಗದವಳು ನಾಳೆ ಅಕಸ್ಮಾತ್ ದೊಡ್ಡ ಶೋಷಣೆ, ದೌರ್ಜನ್ಯ ಎದುರಾದರೆ ಹೇಗೆ ಎದುರಿಸಿಯಾಳು?

ಇದು ಮಹಿಳಾ ಸಬಲೀಕರಣ ವರ್ಷ. ಅವರು ಹೀಗೆಂದುಕೊಂಡರೆ, ಇವರು ಹಾಗೆಂದುಕೊಂಡರೆ ಎಂಬ ಸ್ವಯಂ ಕಲ್ಪಿತ ಭ್ರಮಾಲೋಕದಲ್ಲಿ ತೇಲುತ್ತಾ ವಾಸ್ತವ ವನ್ನೆದುರಿಸಲು ಹಿಂಜರಿಯುವ ಇಂತಹಾ ಸ್ತ್ರೀಯರು ಸಬಲರಾಗುವುದು ಯಾವಾಗ? ಇದು ನನ್ನ ಕರ್ಮ. ಇದನ್ನು ನಾನು ಹೇಗಾದರೂ ಸರಿ ಅನುಭವಿಸಲೇಬೇಕು ಎಂಬ ಕಣ್ಪಟ್ಟಿಯನ್ನು ಕಟ್ಟಿಕೊಂಡು ಅಂಧರಾಗಿರುವ ಮಹಿಳೆಯರು, ಈ ತಮ್ಮ ಕೀಳರಿಮೆಯಿಂದ ಮೊದಲು ಹೊರಬರಬೇಕು. ಯಾರೋ ಬಂದು ನನ್ನನ್ನು ಉದ್ಧಾರ ಮಾಡುವರೆಂದು ಕಾಯದೇ ತನಗೊದಗುವ ಎಲ್ಲಾ ಸಣ್ಣ, ದೊಡ್ಡ ಆಪತ್ತುಗಳನ್ನು ಸ್ವತಹ ತಾನೇ ಎದುರಿಸಲು ಸಿದ್ಧರಾಗಬೇಕು! ಆಗಷ್ಟೇ ಹೆಣ್ಣು ಸಬಲೆಯಾಗುವತ್ತ ಒಂದು ಹೆಜ್ಜೆ ಇರಿಸಿದಂತಾಗುತ್ತದೆ.

ಬೆನ್ನಿಗೆ ಬಿದ್ದ ಶಿಲುಬೆಯನ್ನು ಹೊರುವುದೂ ಅದನ್ನು ತುಂಡರಿಸಿ ಕಿತ್ತೂಗೆಯುವುದು ಎರಡೂ ನಮ್ಮ ಕೈಯಲ್ಲೇ ಇರುವುದಿಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...