Home / ಕವನ / ಕವಿತೆ / ಧೈರ್ಯ ಬೇಕು

ಧೈರ್ಯ ಬೇಕು

ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು
ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ
ಅದರ ತಲೆಗೆ ಹೊಡೆಯಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು

ಹೃದಯದಲ್ಲಿ ಶೋಕರಸವು ತುಟಿಯ ಮೇಲೆ ಹಾಸ್ಯ ರಸವು
ರಸದ ಇಂಥ ಕಲಬೆರಕೆಗೆ || ಧೈರ್ಯ….
ಸುತಮುತ್ತಲ ಕಡೆಗೆ | ಕತ್ತಲೊಂದೆ ತುಂಬಿದಾಗ
ಕಿರಣವನ್ನು ಕಾಣಲಿಕ್ಕೆ || ಧೈರ್ಯ….

ಸಂಶಯ ನಿರಾಶೆ ತುಂಬಿ | ಉಸಿರು ಕಟ್ಟಿ ಹೋಗುವಾಗ
ನಂಬಿಕೆಯಲಿ ತಲೆಯನೆತ್ತೆ || ಧೈರ್ಯ….
ನಮ್ಮ ಅಳುವೆ ಹೊರ ಒಳಗಿರೆ | ಇತರರಳುವ ತವಿಸಿ ನಗುವ
ಹೊಮ್ಮಿಸುವಾ ಸಾಹಸಕ್ಕೆ || ಧೈರ್ಯ….

ದೇಹಶಕ್ತಿ ಇಳಿದು ಹೋಗಿ | ದಿನದ ಕೆಲಸ ಸಪ್ಪೆಯಾಗಿ
ಇರುವ ಕಸವ ರಸ ಮಾಡಲು || ಧೈರ್ಯ….
ಮಾತುಗಳಿಗೆ ಬಣ್ಣ ಕೊಟ್ಟು| ಮೋಸ ಬಲೆಗೆ ಎಳೆಯುವಾಗ
ಇದ್ದುದಿದ್ದ ಹಾಗೆ ಪೇಳೆ || ಧೈರ್ಯ….

ನೀಚತನವು ದನಿಯನೆತ್ತಿ | ಎಳೆಯ ಸತ್ಯವನೊತ್ತಲು
ಎಳೆಯ ಲತೆಯು ಮರವಾಗಲು || ಧೈರ್ಯ….
ಗುಡ್ಡ ತಲೆಯ ಮೇಲೆ ಬಿದ್ದ| ರೀತಿಯಲ್ಲಿ ದುಃಖವಡಸೆ
ನಿನ್ನ ಇಚ್ಛೆ ದೇವ ಎನಲು || ಧೈರ್ಯ….
ವಿಧಿಯು ನಿನ್ನ ಬಲಗೆನ್ನೆಗೆ ಹೊಡೆತ ಕೊಡಲು ಸಿಟ್ಟಾಗದೆ
ನಿನ್ನ ಎಡದ ಕೆನ್ನೆ ಕೊಡಲು || ಧೈರ್ಯ….
ಕತ್ತಿ ಮದ್ದು ಗುಂಡುಗಳಲಿ ತೋರುವಂಥದಲ್ಲ ಧೈರ್ಯ
ಸೃಷ್ಟಿಯಲ್ಲಿ ಮಗುವು ಕೂಡ ಮಾಡಬಲ್ಲ ಸಹಜ ಧೈರ್ಯ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...