Home / ಕವನ / ಕವಿತೆ / ಧೈರ್ಯ ಬೇಕು

ಧೈರ್ಯ ಬೇಕು

ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು
ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ
ಅದರ ತಲೆಗೆ ಹೊಡೆಯಲಿಕ್ಕೆ
ಧೈರ್ಯ ಬೇಕೂ ಅದಕೆ ಧೈರ್ಯ ಬೇಕು

ಹೃದಯದಲ್ಲಿ ಶೋಕರಸವು ತುಟಿಯ ಮೇಲೆ ಹಾಸ್ಯ ರಸವು
ರಸದ ಇಂಥ ಕಲಬೆರಕೆಗೆ || ಧೈರ್ಯ….
ಸುತಮುತ್ತಲ ಕಡೆಗೆ | ಕತ್ತಲೊಂದೆ ತುಂಬಿದಾಗ
ಕಿರಣವನ್ನು ಕಾಣಲಿಕ್ಕೆ || ಧೈರ್ಯ….

ಸಂಶಯ ನಿರಾಶೆ ತುಂಬಿ | ಉಸಿರು ಕಟ್ಟಿ ಹೋಗುವಾಗ
ನಂಬಿಕೆಯಲಿ ತಲೆಯನೆತ್ತೆ || ಧೈರ್ಯ….
ನಮ್ಮ ಅಳುವೆ ಹೊರ ಒಳಗಿರೆ | ಇತರರಳುವ ತವಿಸಿ ನಗುವ
ಹೊಮ್ಮಿಸುವಾ ಸಾಹಸಕ್ಕೆ || ಧೈರ್ಯ….

ದೇಹಶಕ್ತಿ ಇಳಿದು ಹೋಗಿ | ದಿನದ ಕೆಲಸ ಸಪ್ಪೆಯಾಗಿ
ಇರುವ ಕಸವ ರಸ ಮಾಡಲು || ಧೈರ್ಯ….
ಮಾತುಗಳಿಗೆ ಬಣ್ಣ ಕೊಟ್ಟು| ಮೋಸ ಬಲೆಗೆ ಎಳೆಯುವಾಗ
ಇದ್ದುದಿದ್ದ ಹಾಗೆ ಪೇಳೆ || ಧೈರ್ಯ….

ನೀಚತನವು ದನಿಯನೆತ್ತಿ | ಎಳೆಯ ಸತ್ಯವನೊತ್ತಲು
ಎಳೆಯ ಲತೆಯು ಮರವಾಗಲು || ಧೈರ್ಯ….
ಗುಡ್ಡ ತಲೆಯ ಮೇಲೆ ಬಿದ್ದ| ರೀತಿಯಲ್ಲಿ ದುಃಖವಡಸೆ
ನಿನ್ನ ಇಚ್ಛೆ ದೇವ ಎನಲು || ಧೈರ್ಯ….
ವಿಧಿಯು ನಿನ್ನ ಬಲಗೆನ್ನೆಗೆ ಹೊಡೆತ ಕೊಡಲು ಸಿಟ್ಟಾಗದೆ
ನಿನ್ನ ಎಡದ ಕೆನ್ನೆ ಕೊಡಲು || ಧೈರ್ಯ….
ಕತ್ತಿ ಮದ್ದು ಗುಂಡುಗಳಲಿ ತೋರುವಂಥದಲ್ಲ ಧೈರ್ಯ
ಸೃಷ್ಟಿಯಲ್ಲಿ ಮಗುವು ಕೂಡ ಮಾಡಬಲ್ಲ ಸಹಜ ಧೈರ್ಯ
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...