Home / ಲೇಖನ / ಇತರೆ / ದೊಡ್ಡವರು ಸಣ್ಣವರಾಗುವುದೇಕೆ?

ದೊಡ್ಡವರು ಸಣ್ಣವರಾಗುವುದೇಕೆ?

ಪ್ರಿಯ ಸಖಿ,
ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ.
ದೊಡ್ಡವರು ಸಣ್ಣವರಾಗುವುದು
ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ
ತಮೆಗೆಲ್ಲ ಗೊತ್ತಿದೆ ಎಂದು ತಿಳಿದುಕೊಂಡಾಗ
ತಮ್ಮ ನಂತರ ಮುಂದೆ
ಪ್ರಲಯವೇ ಎಂದು ಭಾವಿಸಿದಾಗ
ಸಾಮಾನ್ಯವಾಗಿ ಹಿರಿಯರು ನಮ್ಮ ಕಾಲದಲ್ಲಿ ಹೀಗಿತ್ತು ನಮ್ಮ ಕಾಲವೇ ಚೆನ್ನ, ಕಾಲ ಕೆಟ್ಟು ಹೋಯ್ತು, ಮುಂದೆ ಭವಿಷ್ಯವೇ ಕಾಣುತ್ತಿಲ್ಲ ಇತ್ಯಾದಿ ಮಾತನಾಡುತ್ತಿರುತ್ತಾರೆ. ಹಾಗೆಂದು ಬದಲಾವಣೆಯೇ ಇಲ್ಲದೇ ಇರಲು ಬದುಕು ನಿಂತ ನೀರಲ್ಲ. ಈ ದೊಡ್ಡವರು ಹಿಂದೊಮ್ಮೆ ಚಿಕ್ಕವರಾಗಿದ್ದರು ಆಗಲೂ ಅವರ ಹಿರಿಯರು ಇವರನ್ನು ಇದೇ ಮಾತುಗಳಿಂದ ಚುಚ್ಚುತ್ತಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ತಾವೆಲ್ಲ ಎಲ್ಲವನ್ನೂ ಮಾಡಿಬಿಟ್ಟಿದ್ದೇವೆ,  ಬದುಕಿನಲ್ಲಿ ಎಲ್ಲವೂ ನೋಡಿದ್ದೇವೆ. ನಮಗೆ ಪ್ರಪಂಚದ ಆಗು ಹೋಗುಗಳೆಲ್ಲ ತಿಳಿದಿದೆ, ತಮ್ಮ ನಂತರ ಮುಂದೆ ಬದುಕೆಂಬುದಕ್ಕೆ ಅರ್ಥವೇ ಇಲ್ಲ ಎಂದು ಕಿರಿಯರನ್ನು ತಾತ್ಸಾರದಿಂದ ಕಾಣಲಾರಂಭಿಸಿದಾಗ, ದೊಡ್ಡವರು ಸಣ್ಣವರಾಗುತ್ತಾ ಹೋಗುತ್ತಾರೆಂದು ಕವಿ ಹೇಳುತ್ತಾರೆ. ನಂತರ, ಮುಂದುವರಿಯುತ್ತಾ ಹೀಗೆ ಪ್ರಶ್ನಿಸುತ್ತಾರೆ.
ನಿಮ್ಮ ನಂತರ ಬೀಜ ಮೊಳೆಯುವದಿಲ್ಲವೇ ಸ್ವಾಮಿ?
ಸಸಿ ಬೆಳೆಯುವುದಿಲ್ಲವೇ?
ಸೂರ್ಯ ಮೇಲೆದ್ದಾಗ ನೀರು
ಥಳಥಳಿಸುತ್ತ ಹೊಳೆಯುವುದಿಲ್ಲವೇ?
ರವಿಬಿಂಬ ಕಣ್ಣುಗಳ ಕುಕ್ಕುವುದೇ ಇಲ್ಲವೇ?
ಸಖಿ, ಬದುಕು ಎಲ್ಲಿಯೋ ಒಂದು ಕಡೆ ನಿಂತುಹೋಗುವುದಿಲ್ಲ. ಅದು ನಿರಂತರವಾಗಿ ಚಲಿಸುತ್ತಲೇ ಇರುತ್ತದೆ. ಹಾಗೇ ಹೊಸತೆನ್ನುವುದೂ ಇಲ್ಲಿ ಅನಿವಾರ್ಯ. ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗೆ ಹೊಂದಿಕೊಂಡು ಕಾಲನೊಂದಿಗೇ ಮುಂದೆ ಹೋಗುವವನು ವಿವೇಚನಾ ಶೀಲನೆನಿಸಿಕೊಳ್ಳುತ್ತಾನೆ. ಅದು ಬಿಟ್ಟು ನನ್ನ ಕಾಲದ್ದೇ ಸರಿ ಮುಂದಿನ ಬದುಕು ಸರಿಯಲ್ಲ ನಾನು ನಿಂತಲ್ಲೇ ನಿಂತಿರುತ್ತೇನೆ ಎಂದರೆ ಕಾಲ ಅವನನ್ನು ಹಿಂದೆ ತಳ್ಳಿ ತಾನು ಮುಂದೋಡುತ್ತದೆ! ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...