Home / ಲೇಖನ / ಇತರೆ / ಮಸ್ತಕ ತಿಂತು ಮನುಷ್ಯನ್ನ

ಮಸ್ತಕ ತಿಂತು ಮನುಷ್ಯನ್ನ

ಪ್ರಿಯ ಸಖಿ,

ಅಡಗಿ ಮನಿ ಅವ್ವನ್ನ ತಿಂತು
ಅಧಿಕಾರ ಅಪ್ಪನ್ನ ತಿಂತು
ಪುಸ್ತಕದ ಹೊರೆ ತಿಂತು ತಮ್ಮನ್ನ
ಮಸ್ತಕ ತಿಂತು ಮನುಷ್ಯನ್ನ

ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ? ಆದರೆ ಆಳಕ್ಕಿಳಿದಷ್ಟು ಅರ್ಥವಾದಂತೆಲ್ಲಾ ವಿಶೇಷ ಅರ್ಥವನ್ನು ಕೊಡುತ್ತದಲ್ಲವೇ? ಅಡುಗೆ ಮನೆಯೆಂಬ ಕಾರ್ಖಾನೆಯಲ್ಲಿ ಮೂರು ಹೊತ್ತು ಅದರಲ್ಲೇ ಕರಗಿಹೋಗುತ್ತಾರೆ ನಮ್ಮ ಅನೇಕ ಹೆಣ್ಣುಮಕ್ಕಳು. ಹಾಗೇ ಗಂಡು ಅಧಿಕಾರ ಸ್ಥಾನದಲ್ಲಿರುವಾಗ ಅದರ ಗರ್ವ, ಅಹಂಕಾರಗಳಲ್ಲೇ ಮೆರೆಯುತ್ತಾ ತನ್ನತನ ಕಳೆದುಕೊಳ್ಳುತ್ತಾನೆ. ರಾಶಿ ಪುಸ್ತಕದ ಹೊರೆ ಮಗುವಿನ ಕ್ರಿಯಾಶೀಲತೆಯನ್ನೂ, ಸೃಜನಶೀಲತೆಯನ್ನೂ ನುಂಗಿಬಿಡುತ್ತದೆ. ಹಾಗೇ ‘ಮನುಷ್ಯನ್ನ ಅವನ ಮಸ್ತಕವೇ ತಿಂದು ಬಿಡುತ್ತದೆ’ ಎನ್ನುತ್ತಾರೆ ಕವಯಿತ್ರಿ.

ನಿಜವಾದ ಮಾತಲ್ಲವೇ ಸಖಿ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಭಾವನೆಗಳಿಗಿಂತಾ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾನೆ. ಹೃದಯದಿಂದ ಅಳೆಯಬೇಕಾದ ಎಷ್ಟೊಂದು ಮೌಲ್ಯಗಳನ್ನು ಮೆದುಳಿನಿಂದ ಅಳೆಯಲು ಹೋಗಿ ಖಾಲಿಯಾಗುತ್ತಿದ್ದಾನೆ. ಇಂದಿನ ನಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತಗೊಂಡಿರುವುದಕ್ಕೆ ಅದನ್ನು ಎಂಥದೋ ಮಬ್ಬು ಶೂನ್ಯತೆ ಆಳುತ್ತಿರುವುದಕ್ಕೆ ನಾವು ಭಾವನೆಗಳನ್ನು ನಿಕೃಷ್ಟಗೊಳಿಸಿರುವುದೇ ಕಾರಣ ಆಗಿದೆ. ಚಿಂತಕ ಡಿ. ಹೆಚ್. ಲಾರೆನ್ಸ್ ‘A man who is emotionally educated is like a phoenix’  ಭಾವನಾತ್ಮಕವಾಗಿ ಕಲಿತ ಮನುಷ್ಯ ಫೀನಿಕ್ಸ್ ಪಕ್ಷಿಯಂತೆಯೇ ತನ್ನದೇ ಬೂದಿಯಿಂದ ಮತ್ತೆ ಎದ್ದು ಹೊಸ ಜೀವನವನ್ನು ಆರಂಭಿಸಬಹುದು ಎನ್ನುತ್ತಾನೆ. ಬರಿಯ ಬುದ್ಧಿಯನ್ನು ಉಪಯೋಗಿಸಲು ಕಲಿತ ಮನುಷ್ಯ ಬಹಳ ಬೇಗನೆ ಹೊಸತನವನ್ನು ಕಳೆದುಕೊಂಡು ಕಳೆದುಹೋಗುತ್ತಾನೆ.

ಸಖಿ, ಅದಕ್ಕೆಂದೇ ಮನುಷ್ಯನನ್ನು ಭಾವನಾತ್ಮಕವಾಗಿ ತಯಾರಿಸುವುದೇ ಇಂದಿನ ಅವಶ್ಯಕತೆ ಮತ್ತು ತುರ್ತು. ಹಾಗಾದಾಗ ಮನುಷ್ಯ ತನ್ನ ಸೃಜನಶೀಲತೆಯನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಹೃದಯ ಶ್ರೀಮಂತಿಕೆಯ ಔನ್ನತ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಅದಿಲ್ಲದಿದ್ದಾಗ ಮಸ್ತಕವೇ ಮನುಷ್ಯನನ್ನು ತಿಂದು ಅವನನ್ನು ನಿರ್ವೀರ್ಯನನ್ನಾಗಿಸಿ ಬಿಡುತ್ತದೆ. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...