Home / ಲೇಖನ / ಇತರೆ / ಮಸ್ತಕ ತಿಂತು ಮನುಷ್ಯನ್ನ

ಮಸ್ತಕ ತಿಂತು ಮನುಷ್ಯನ್ನ

ಪ್ರಿಯ ಸಖಿ,

ಅಡಗಿ ಮನಿ ಅವ್ವನ್ನ ತಿಂತು
ಅಧಿಕಾರ ಅಪ್ಪನ್ನ ತಿಂತು
ಪುಸ್ತಕದ ಹೊರೆ ತಿಂತು ತಮ್ಮನ್ನ
ಮಸ್ತಕ ತಿಂತು ಮನುಷ್ಯನ್ನ

ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ? ಆದರೆ ಆಳಕ್ಕಿಳಿದಷ್ಟು ಅರ್ಥವಾದಂತೆಲ್ಲಾ ವಿಶೇಷ ಅರ್ಥವನ್ನು ಕೊಡುತ್ತದಲ್ಲವೇ? ಅಡುಗೆ ಮನೆಯೆಂಬ ಕಾರ್ಖಾನೆಯಲ್ಲಿ ಮೂರು ಹೊತ್ತು ಅದರಲ್ಲೇ ಕರಗಿಹೋಗುತ್ತಾರೆ ನಮ್ಮ ಅನೇಕ ಹೆಣ್ಣುಮಕ್ಕಳು. ಹಾಗೇ ಗಂಡು ಅಧಿಕಾರ ಸ್ಥಾನದಲ್ಲಿರುವಾಗ ಅದರ ಗರ್ವ, ಅಹಂಕಾರಗಳಲ್ಲೇ ಮೆರೆಯುತ್ತಾ ತನ್ನತನ ಕಳೆದುಕೊಳ್ಳುತ್ತಾನೆ. ರಾಶಿ ಪುಸ್ತಕದ ಹೊರೆ ಮಗುವಿನ ಕ್ರಿಯಾಶೀಲತೆಯನ್ನೂ, ಸೃಜನಶೀಲತೆಯನ್ನೂ ನುಂಗಿಬಿಡುತ್ತದೆ. ಹಾಗೇ ‘ಮನುಷ್ಯನ್ನ ಅವನ ಮಸ್ತಕವೇ ತಿಂದು ಬಿಡುತ್ತದೆ’ ಎನ್ನುತ್ತಾರೆ ಕವಯಿತ್ರಿ.

ನಿಜವಾದ ಮಾತಲ್ಲವೇ ಸಖಿ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಭಾವನೆಗಳಿಗಿಂತಾ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾನೆ. ಹೃದಯದಿಂದ ಅಳೆಯಬೇಕಾದ ಎಷ್ಟೊಂದು ಮೌಲ್ಯಗಳನ್ನು ಮೆದುಳಿನಿಂದ ಅಳೆಯಲು ಹೋಗಿ ಖಾಲಿಯಾಗುತ್ತಿದ್ದಾನೆ. ಇಂದಿನ ನಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತಗೊಂಡಿರುವುದಕ್ಕೆ ಅದನ್ನು ಎಂಥದೋ ಮಬ್ಬು ಶೂನ್ಯತೆ ಆಳುತ್ತಿರುವುದಕ್ಕೆ ನಾವು ಭಾವನೆಗಳನ್ನು ನಿಕೃಷ್ಟಗೊಳಿಸಿರುವುದೇ ಕಾರಣ ಆಗಿದೆ. ಚಿಂತಕ ಡಿ. ಹೆಚ್. ಲಾರೆನ್ಸ್ ‘A man who is emotionally educated is like a phoenix’  ಭಾವನಾತ್ಮಕವಾಗಿ ಕಲಿತ ಮನುಷ್ಯ ಫೀನಿಕ್ಸ್ ಪಕ್ಷಿಯಂತೆಯೇ ತನ್ನದೇ ಬೂದಿಯಿಂದ ಮತ್ತೆ ಎದ್ದು ಹೊಸ ಜೀವನವನ್ನು ಆರಂಭಿಸಬಹುದು ಎನ್ನುತ್ತಾನೆ. ಬರಿಯ ಬುದ್ಧಿಯನ್ನು ಉಪಯೋಗಿಸಲು ಕಲಿತ ಮನುಷ್ಯ ಬಹಳ ಬೇಗನೆ ಹೊಸತನವನ್ನು ಕಳೆದುಕೊಂಡು ಕಳೆದುಹೋಗುತ್ತಾನೆ.

ಸಖಿ, ಅದಕ್ಕೆಂದೇ ಮನುಷ್ಯನನ್ನು ಭಾವನಾತ್ಮಕವಾಗಿ ತಯಾರಿಸುವುದೇ ಇಂದಿನ ಅವಶ್ಯಕತೆ ಮತ್ತು ತುರ್ತು. ಹಾಗಾದಾಗ ಮನುಷ್ಯ ತನ್ನ ಸೃಜನಶೀಲತೆಯನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಹೃದಯ ಶ್ರೀಮಂತಿಕೆಯ ಔನ್ನತ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಅದಿಲ್ಲದಿದ್ದಾಗ ಮಸ್ತಕವೇ ಮನುಷ್ಯನನ್ನು ತಿಂದು ಅವನನ್ನು ನಿರ್ವೀರ್ಯನನ್ನಾಗಿಸಿ ಬಿಡುತ್ತದೆ. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...