Home / ಲೇಖನ / ಇತರೆ / ಮಸ್ತಕ ತಿಂತು ಮನುಷ್ಯನ್ನ

ಮಸ್ತಕ ತಿಂತು ಮನುಷ್ಯನ್ನ

ಪ್ರಿಯ ಸಖಿ,

ಅಡಗಿ ಮನಿ ಅವ್ವನ್ನ ತಿಂತು
ಅಧಿಕಾರ ಅಪ್ಪನ್ನ ತಿಂತು
ಪುಸ್ತಕದ ಹೊರೆ ತಿಂತು ತಮ್ಮನ್ನ
ಮಸ್ತಕ ತಿಂತು ಮನುಷ್ಯನ್ನ

ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ? ಆದರೆ ಆಳಕ್ಕಿಳಿದಷ್ಟು ಅರ್ಥವಾದಂತೆಲ್ಲಾ ವಿಶೇಷ ಅರ್ಥವನ್ನು ಕೊಡುತ್ತದಲ್ಲವೇ? ಅಡುಗೆ ಮನೆಯೆಂಬ ಕಾರ್ಖಾನೆಯಲ್ಲಿ ಮೂರು ಹೊತ್ತು ಅದರಲ್ಲೇ ಕರಗಿಹೋಗುತ್ತಾರೆ ನಮ್ಮ ಅನೇಕ ಹೆಣ್ಣುಮಕ್ಕಳು. ಹಾಗೇ ಗಂಡು ಅಧಿಕಾರ ಸ್ಥಾನದಲ್ಲಿರುವಾಗ ಅದರ ಗರ್ವ, ಅಹಂಕಾರಗಳಲ್ಲೇ ಮೆರೆಯುತ್ತಾ ತನ್ನತನ ಕಳೆದುಕೊಳ್ಳುತ್ತಾನೆ. ರಾಶಿ ಪುಸ್ತಕದ ಹೊರೆ ಮಗುವಿನ ಕ್ರಿಯಾಶೀಲತೆಯನ್ನೂ, ಸೃಜನಶೀಲತೆಯನ್ನೂ ನುಂಗಿಬಿಡುತ್ತದೆ. ಹಾಗೇ ‘ಮನುಷ್ಯನ್ನ ಅವನ ಮಸ್ತಕವೇ ತಿಂದು ಬಿಡುತ್ತದೆ’ ಎನ್ನುತ್ತಾರೆ ಕವಯಿತ್ರಿ.

ನಿಜವಾದ ಮಾತಲ್ಲವೇ ಸಖಿ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಭಾವನೆಗಳಿಗಿಂತಾ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾನೆ. ಹೃದಯದಿಂದ ಅಳೆಯಬೇಕಾದ ಎಷ್ಟೊಂದು ಮೌಲ್ಯಗಳನ್ನು ಮೆದುಳಿನಿಂದ ಅಳೆಯಲು ಹೋಗಿ ಖಾಲಿಯಾಗುತ್ತಿದ್ದಾನೆ. ಇಂದಿನ ನಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತಗೊಂಡಿರುವುದಕ್ಕೆ ಅದನ್ನು ಎಂಥದೋ ಮಬ್ಬು ಶೂನ್ಯತೆ ಆಳುತ್ತಿರುವುದಕ್ಕೆ ನಾವು ಭಾವನೆಗಳನ್ನು ನಿಕೃಷ್ಟಗೊಳಿಸಿರುವುದೇ ಕಾರಣ ಆಗಿದೆ. ಚಿಂತಕ ಡಿ. ಹೆಚ್. ಲಾರೆನ್ಸ್ ‘A man who is emotionally educated is like a phoenix’  ಭಾವನಾತ್ಮಕವಾಗಿ ಕಲಿತ ಮನುಷ್ಯ ಫೀನಿಕ್ಸ್ ಪಕ್ಷಿಯಂತೆಯೇ ತನ್ನದೇ ಬೂದಿಯಿಂದ ಮತ್ತೆ ಎದ್ದು ಹೊಸ ಜೀವನವನ್ನು ಆರಂಭಿಸಬಹುದು ಎನ್ನುತ್ತಾನೆ. ಬರಿಯ ಬುದ್ಧಿಯನ್ನು ಉಪಯೋಗಿಸಲು ಕಲಿತ ಮನುಷ್ಯ ಬಹಳ ಬೇಗನೆ ಹೊಸತನವನ್ನು ಕಳೆದುಕೊಂಡು ಕಳೆದುಹೋಗುತ್ತಾನೆ.

ಸಖಿ, ಅದಕ್ಕೆಂದೇ ಮನುಷ್ಯನನ್ನು ಭಾವನಾತ್ಮಕವಾಗಿ ತಯಾರಿಸುವುದೇ ಇಂದಿನ ಅವಶ್ಯಕತೆ ಮತ್ತು ತುರ್ತು. ಹಾಗಾದಾಗ ಮನುಷ್ಯ ತನ್ನ ಸೃಜನಶೀಲತೆಯನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಹೃದಯ ಶ್ರೀಮಂತಿಕೆಯ ಔನ್ನತ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಅದಿಲ್ಲದಿದ್ದಾಗ ಮಸ್ತಕವೇ ಮನುಷ್ಯನನ್ನು ತಿಂದು ಅವನನ್ನು ನಿರ್ವೀರ್ಯನನ್ನಾಗಿಸಿ ಬಿಡುತ್ತದೆ. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...