Home / ಕವನ / ಕವಿತೆ / ಗೋರಿಗಳ ನಡುವೆ

ಗೋರಿಗಳ ನಡುವೆ


ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ
ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ
ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ
ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ

ನಡುವೆ ನಿಂತವನ
ಮನಸು ಚಿಂತೆವನ
ಉರಿಯುತ್ತಿದೆ ಕಾಡು
ಮುರಿಯುತ್ತಿದೆ ಮಾಡು

ಮನಸಿನ ಮಾತು
ಕಣ್ಣಲೆ ಹೂತು
ಅರಿವಾಗದು ಅಲ್ಲಿ
ಅದು ನೀರಿಲ್ಲದ ನಲ್ಲಿ.

ನಗವಿದ್ದರೆ, ನಗುವಿದ್ದರೆ
ಮುಗಿಬೀಳುವರಲ್ಲಿ.
ನಿಜ ಮುಚ್ಚುತ, ಹುಸಿ ಬಿಚ್ಚುತ
ಹಸಿವಾದರೂ ಹಸಿರಾಗುತ
ಅವರಿವರಿಗೆ ಉಸಿರಾದರೆ
ಹೆಸರಾಗುವುದಲ್ಲಿ
ಮನದಾಳವ ತೋಡಿದರೆ
ಕೆಸರಾಗುವುದಲ್ಲಿ
ಮೊರೆ ಹೊಕ್ಕೆನು ಇಲ್ಲಿ


ಗೋಡೆಗಳಾದರು ಕಂಬಗಳಾದರು
ಮಾತು ಮರೆಯುವ ಮೃಗಗಳಾದರು
ಸತು ಮುರಿಯುವ ತೋಳಗಳಾದರು
ಮನಸಿಗೆ ಮುಷ್ಟಿಯ ತೋಳುಗಳಾದರು.

ಬೆಳಕಿಗೆ ಬರಿದೆ ಕತ್ತಲ ಕೊರೆದೆ
ಮೀಟುವ ತಂತಿ ಮಿನುಗುವ ತಾರೆ-
ಕಾಣದೆ, ಕಡೆಗೆ ನಾನೇ ಕತ್ತಲು
ಕಣ್ಕಟ್ಟಿದ ವಿಷ-ಬಾಳಿನ ಕುಯಿಲು.


ಮನಸಿಲ್ಲವೆ ನಿಮಗಾದರು?
ದನಿಯಿಲ್ಲವೆ ನಿಜ-ಕಾದರು?
ನನ್ನೆದೆ ಬೆಳಕಿನ ಗೋರಿಗಳೆ
ಬಾಳಿನ ಬಯಲಿನ ಭೇರಿಗಳೆ.

ಅಳಲಿನ ಅನುಭವ ಆಳಕೆ ತಟ್ಟಿ
ಮನುಜತೆ ಮಾತು ಮೂಲಕ ಮುಟ್ಟಿ
ಕಲಕುವ ಅಲೆಗಳು, ಎದೆ ಮುಟ್ಟುವ ಮಜಲು
ಗೋರಿಗಳಾ ಒಡಲು-ಈಗಾಯಿತು ಕಡಲು.

ಗೋರಿಗೊರಳುಗಳು ಉಬ್ಬಿ ಬಂದವು
ಬೆಂದ ಮನಸನು ತಬ್ಬಿ ನಿಂದವು
ತೇವಗೊಳ್ಳುತ ತೇವಗೊಳಿಸುತ
ತೆರಳು ಎಂದವು ಬಾಳಿನ ಹರಿತಕೆ
ಮರಳು ಎಂದವು ಗೋಳಿನ ಇರಿತಕೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...