Home / ಕವನ / ಕವಿತೆ / ಉದ್ಧಾರಕ

ಉದ್ಧಾರಕ

ಎಲಾ ಇವನ,
ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ!
ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು
ನಮ್ಮ ಭರತರು.

ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು
ಧಗಧಗ ಕಣಯ್ಯ ಕೆಲವರಿಗೆ ಹೊಟ್ಟೆಕಿಚ್ಚು.
ಅಲ್ಲ, ಯಾರಾದರೂ ಮಾಡಿದ್ದಾರೆಯೆ
ನೀನು ಮಾಡಿದ ಭಾಷಣಗಳ ಕೊಟ್ಟ ಕರೆಗಳ ಸಂಖ್ಯೆಯಷ್ಟು ಸೇವೆ?
ಆ ಹೊಟ್ಟೆಕಿಚ್ಚಿನವರು ಮಂಥರೆಯ ಒಕ್ಕಲೆಂದು ಮುಲಾಜಿಲ್ಲದೆ ಚುಚ್ಚು ;
ಮತ್ತೆ ಹೆಚ್ಚಾದರೆ ಚಚ್ಚು.

ನನಗೆ ಗೊತ್ತು: ಆ ರಾಮ ಸತ್ತು
ಯುಗಗಳಾದ ಮೇಲೆ ನಿನ್ನದೇ ಅವನಂಥ ಪ್ರಪ್ರಥಮ ಅವತಾರ! ಕನ್ನಡಿಗರುದ್ಧಾರ!
ಅಗಸ ಅಂದುಕೊಂಡನೆಂದು ಆತಂಕಪಟ್ಟ ಆ ರಾಮ
ಅಲ್ಪರಂದುಕೊಂಡರೇನಂತೆ ಎಂಬ ನೀನೇ ಸರಿ ಬಹು ಆರಾಮ.
ಕೊಟ್ಟ ಮಾತಿಗೆ ಕಟ್ಟು ಬೀಳುವ ಆ ರಾಮನಿಗೆಲ್ಲೊ
ತಾಕತ್ತಿಲ್ಲ ತೆಗೆ
ನಿನ್ನದೇ ಸರಿ: ರಾವಣಕಾರ್ಯವನ್ನಾದರೂ ಮಾಡಿ
ರಾಮನೆನ್ನಿಸಿಕೊಳ್ಳುವ ಬಗೆ.

ನಿನ್ನ ಹಿಂದೆಯೂ ಇದೆ ಸುಗ್ರೀವ ಸೇನೆ
ಪಾಠ ಕಲಿಸಿ ನಂಬಿಗಸ್ತರನ್ನು ಆರಿಸಿ ಹಾರಿಸಿ
ಪೀಠಗಿಟ್ಟಿಸುವ ನಿನ್ನ ಕಲಿತನಕ್ಕೆ ಕೊಡಬೇಕು
ಮತ್ತೊಂದು ಪೀಠ; ಅವಾರ್ಡು,
ನೀನಾದೆ ಬಿಡು ಬೀದಿಬೀದಿಯ ಬೋರ್ಡು.

ಅಂದಹಾಗೆ ಎಂದು ನಮ್ಮೂರಿಗೆ ನಿನ್ನ ಸವಾರಿ?
ಭಕ್ತರಿಗೆ ಬರೆದಿದ್ದೆಯಂತಲ್ಲ ಸಿದ್ಧಗೊಳಿಸಲು ನಗಾರಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...