Home / ಲೇಖನ / ವಿಜ್ಞಾನ / ಕನಸುಗಳು

ಕನಸುಗಳು

“ಕನಸು” ನಮ್ಮ ನಿದ್ರೆಯ ಅವಿಭಾಜ್ಯ ಅಂಗ. ಮಿದುಳಿನ ಹೈಪೋಥಲಮಸ್ ನಿದ್ರೆಯನ್ನು ನಿಯಂತ್ರಿಸುವ ಭಾಗ. ಹೀಗಾಗಿ ಕನಸು ಮೆದುಳಿನ ಚಟುವಟಿಕೆಯಾಗಿದೆ. ನಾವು ಒಂದು ಗಂಟೆ ನಿದ್ರೆ ಮಾಡಿದರೆ ಹತ್ತು ನಿಮಿಷ ಕನಸು ಕಾಣುತ್ತೇವೆ! ಅಂದರೆ ಪ್ರತಿರಾತ್ರಿ ನಾವು ಹತ್ತತ್ತು ನಿಮಿಷಗಳ ಕಾಲ ಐದಾರು ಸಲ ಕನಸು ಕಾಣುತ್ತೇವೆ. ಕನಸುಗಳನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿದವರಲ್ಲಿ ಸಿಗ್ಮಂಡ್ ಫ್ರಾಯ್ಡ್ ಪ್ರಮುಖರು. ಇವರ ಪ್ರಕಾರ ನಮ್ಮ ಮನಸ್ಸಿನಲ್ಲಿ ಆಲೋಚನೆಗಳನ್ನು ಮಾಡುವ ಎರಡು ಪ್ರತಿನಿಧಿಗಳಿವೆ. ಒಂದು ಸುಪ್ತ ಮನಸ್ಸಿನಲ್ಲಿ ಇದ್ದರೆ ಇನ್ನೊಂದು ಜಾಗೃತ ಮನಸ್ಸಿನಲ್ಲಿರುತ್ತದೆ. ಒಂದನೆಯದು ಜಾಗೃತ ಮನಸ್ಸಿಗೆ ಬರಬೇಕಾದರೆ ಇನ್ನೊಂದರ ಮೂಲಕವೇ ಹಾದು ಬರಬೇಕು. ಹೀಗೆ ಬರುವಾಗ “ದಂಡ ದಾರಿ”ಯನ್ನೂ ಹಾಯಬೇಕು. ನಮ್ಮ ಜಾಗೃತ ಮನಸ್ಸಿಗೆ ಪಥ್ಯವಾಗದ ಆಲೋಚನೆಗಳನ್ನು ಈ ದಂಡ ದಾರಿ ತಡೆಹಿಡಿದು ಹಿಂದಕ್ಕೆ ಕಳುಹಿಸುತ್ತದೆ. ಈ ರೀತಿ ಹಿಂದಕ್ಕೆ ಹೋದ ಆಲೋಚನೆಗಳು ದಮನ ಸ್ಥಿತಿಯಲ್ಲಿರುತ್ತವೆ. ನಿದ್ರೆಯಲ್ಲಿ ದಂಡ ದಾರಿ ಸ್ವಲ್ಪ ಸಡಿಲವಾಗುತ್ತದೆ. ಆಗ ಈ ಆಲೋಚನೆಗಳು ಮೇಲೇರಿ ಬರುತ್ತವೆ. ಸಡಿಲವಾದರೂ ನಿಯಂತ್ರಣ ಇದ್ದೇ ಇರುವುದರಿಂದ ಆಲೋಚನೆಗಳು ರಾಜಿಮಾಡಿಕೊಂಡು ಬದಲಾದ ರೂಪದೊಂದಿಗೆ ಕನಸಾಗಿ ಕಾಣಿಸಿಕೊಳ್ಳುತ್ತವೆ.

ಕನಸು ಕೇವಲ ದೃಶ್ಯಗಳ ಸರಪಳಿಯಾಗಿರದೆ ಜೀವಂತ ಅನುಭವವಾಗಿದೆ. ಏಕೆಂದರೆ ತಕ್ಕ ಭಾವನೆಗಳ ಸಹಿತ ನಾವು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ಉದಾಹರಣೆಗೆ ದುಃಖದ ಕನಸು ಬಿದ್ದಾಗ ಬಿಕ್ಕಿಬಿಕ್ಕಿ ಅಳುತ್ತೇವೆ. ಆದರೆ ಶರೀರ ನಿಷ್ಕ್ರಿಯವಾಗಿರುತ್ತದೆ. ಕೈಕಾಲುಗಳು ಚಲಿಸಲಾಗುವ ದಿಲ್ಲ. ಹೃದಯದ ಬಡಿತ, ರಕ್ತದೊತ್ತಡ, ಉಸಿರಾಟಗಳು ಏರುಪೇರಾಗುತ್ತವೆ.

ಕನಸುಗಳು ನಮ್ಮ ಮನಸ್ಥಿತಿಯ ಕನ್ನಡಿ. ಮನಸ್ಸು ಸಮಾಧಾನ, ಸಂತೃಪ್ತಿಯಲ್ಲಿದ್ದಾಗ ಬೀಳುವ ಕನಸೇ ಬೇರೆ. ಗಾಬರಿ, ಭಯ, ದುಃಖದಿಂದ ಕೂಡಿರುವಾಗ ಬೀಳುವ ಕನಸೇ ಬೇರೆ.

ನಮಗೆ ಬೀಳುವ ಹೆಚ್ಚಿನ ಕನಸುಗಳು ವರ್ಣಮಯ. ಕೆಲವು ಸಲ ಕಪ್ಪು-ಬಿಳುಪು ಅಥವಾ ಬೂದುಬಣ್ಣದ ಕನಸುಗಳು ಬೀಳಬಹುದು.
*****

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...