Home / ಲೇಖನ / ವಿಜ್ಞಾನ / ಕನಸುಗಳು

ಕನಸುಗಳು

“ಕನಸು” ನಮ್ಮ ನಿದ್ರೆಯ ಅವಿಭಾಜ್ಯ ಅಂಗ. ಮಿದುಳಿನ ಹೈಪೋಥಲಮಸ್ ನಿದ್ರೆಯನ್ನು ನಿಯಂತ್ರಿಸುವ ಭಾಗ. ಹೀಗಾಗಿ ಕನಸು ಮೆದುಳಿನ ಚಟುವಟಿಕೆಯಾಗಿದೆ. ನಾವು ಒಂದು ಗಂಟೆ ನಿದ್ರೆ ಮಾಡಿದರೆ ಹತ್ತು ನಿಮಿಷ ಕನಸು ಕಾಣುತ್ತೇವೆ! ಅಂದರೆ ಪ್ರತಿರಾತ್ರಿ ನಾವು ಹತ್ತತ್ತು ನಿಮಿಷಗಳ ಕಾಲ ಐದಾರು ಸಲ ಕನಸು ಕಾಣುತ್ತೇವೆ. ಕನಸುಗಳನ್ನು ವೈಜ್ಞಾನಿಕವಾಗಿ ಅಭ್ಯಾಸ ಮಾಡಿದವರಲ್ಲಿ ಸಿಗ್ಮಂಡ್ ಫ್ರಾಯ್ಡ್ ಪ್ರಮುಖರು. ಇವರ ಪ್ರಕಾರ ನಮ್ಮ ಮನಸ್ಸಿನಲ್ಲಿ ಆಲೋಚನೆಗಳನ್ನು ಮಾಡುವ ಎರಡು ಪ್ರತಿನಿಧಿಗಳಿವೆ. ಒಂದು ಸುಪ್ತ ಮನಸ್ಸಿನಲ್ಲಿ ಇದ್ದರೆ ಇನ್ನೊಂದು ಜಾಗೃತ ಮನಸ್ಸಿನಲ್ಲಿರುತ್ತದೆ. ಒಂದನೆಯದು ಜಾಗೃತ ಮನಸ್ಸಿಗೆ ಬರಬೇಕಾದರೆ ಇನ್ನೊಂದರ ಮೂಲಕವೇ ಹಾದು ಬರಬೇಕು. ಹೀಗೆ ಬರುವಾಗ “ದಂಡ ದಾರಿ”ಯನ್ನೂ ಹಾಯಬೇಕು. ನಮ್ಮ ಜಾಗೃತ ಮನಸ್ಸಿಗೆ ಪಥ್ಯವಾಗದ ಆಲೋಚನೆಗಳನ್ನು ಈ ದಂಡ ದಾರಿ ತಡೆಹಿಡಿದು ಹಿಂದಕ್ಕೆ ಕಳುಹಿಸುತ್ತದೆ. ಈ ರೀತಿ ಹಿಂದಕ್ಕೆ ಹೋದ ಆಲೋಚನೆಗಳು ದಮನ ಸ್ಥಿತಿಯಲ್ಲಿರುತ್ತವೆ. ನಿದ್ರೆಯಲ್ಲಿ ದಂಡ ದಾರಿ ಸ್ವಲ್ಪ ಸಡಿಲವಾಗುತ್ತದೆ. ಆಗ ಈ ಆಲೋಚನೆಗಳು ಮೇಲೇರಿ ಬರುತ್ತವೆ. ಸಡಿಲವಾದರೂ ನಿಯಂತ್ರಣ ಇದ್ದೇ ಇರುವುದರಿಂದ ಆಲೋಚನೆಗಳು ರಾಜಿಮಾಡಿಕೊಂಡು ಬದಲಾದ ರೂಪದೊಂದಿಗೆ ಕನಸಾಗಿ ಕಾಣಿಸಿಕೊಳ್ಳುತ್ತವೆ.

ಕನಸು ಕೇವಲ ದೃಶ್ಯಗಳ ಸರಪಳಿಯಾಗಿರದೆ ಜೀವಂತ ಅನುಭವವಾಗಿದೆ. ಏಕೆಂದರೆ ತಕ್ಕ ಭಾವನೆಗಳ ಸಹಿತ ನಾವು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ. ಉದಾಹರಣೆಗೆ ದುಃಖದ ಕನಸು ಬಿದ್ದಾಗ ಬಿಕ್ಕಿಬಿಕ್ಕಿ ಅಳುತ್ತೇವೆ. ಆದರೆ ಶರೀರ ನಿಷ್ಕ್ರಿಯವಾಗಿರುತ್ತದೆ. ಕೈಕಾಲುಗಳು ಚಲಿಸಲಾಗುವ ದಿಲ್ಲ. ಹೃದಯದ ಬಡಿತ, ರಕ್ತದೊತ್ತಡ, ಉಸಿರಾಟಗಳು ಏರುಪೇರಾಗುತ್ತವೆ.

ಕನಸುಗಳು ನಮ್ಮ ಮನಸ್ಥಿತಿಯ ಕನ್ನಡಿ. ಮನಸ್ಸು ಸಮಾಧಾನ, ಸಂತೃಪ್ತಿಯಲ್ಲಿದ್ದಾಗ ಬೀಳುವ ಕನಸೇ ಬೇರೆ. ಗಾಬರಿ, ಭಯ, ದುಃಖದಿಂದ ಕೂಡಿರುವಾಗ ಬೀಳುವ ಕನಸೇ ಬೇರೆ.

ನಮಗೆ ಬೀಳುವ ಹೆಚ್ಚಿನ ಕನಸುಗಳು ವರ್ಣಮಯ. ಕೆಲವು ಸಲ ಕಪ್ಪು-ಬಿಳುಪು ಅಥವಾ ಬೂದುಬಣ್ಣದ ಕನಸುಗಳು ಬೀಳಬಹುದು.
*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...