Home / ಲೇಖನ / ವಿಜ್ಞಾನ / ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಕ್ಕರೆಯೂ ಸಿಹಿ ವಿಷ: ಯಾವಾಗ?

ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ಆಹಾರವನ್ನು ಸಕ್ಕರೆಯ ರೂಪದಲ್ಲಿ (ಗ್ಲೂಕೋಸ್ ಮತ್ತು ಫ್ರುಕ್ಟೋಸ್) ತಯಾರಿಸುತ್ತವೆ. ಸಸ್ಯ ಪಕ್ವವಾಗುತ್ತ ಹೋದಂತೆ ಅದಕ್ಕೆ ತಾನು ತಯಾರಿಸಿದ ಆಹಾರವೆಲ್ಲ ಉಪಯೋಗಿಸಿಕೊಳ್ಳಲಾಗುವುದಿಲ್ಲ. ಅದರ ಒಂದಿಷ್ಟು ಭಾಗ ಪ್ರೋಟಿನ್, ಪಿಷ್ಠ, ಕಾರ್‍ಬೋಹೈಡ್ರೇಟ್ ಇತ್ಯಾದಿಗಳಾಗಿ ಮಾರ್‍ಪಡಿಸಿ ಬೇರು, ಕಾಂಡ, ಎಲೆ, ಹೂವು, ಬೀಜಗಳಲ್ಲಿ ಸಂಗ್ರಹಿಸಿಡುತ್ತದೆ. ಈ ಆಹಾರವನ್ನು ಬರ, ಅತಿಯಾದ ಚಳಿ ಮತ್ತು ಸತತ ಮಳೆಯ ದಿನಗಳಲ್ಲಿ ಆಹಾರ ತಯಾರಿಸಲು ಸಾಧ್ಯವಾದಾಗ ಉಪಯೋಗಿಸಿಕೊಳ್ಳುತ್ತದೆ.

ಸಸ್ಯಗಳು ಹೀಗೆ ಸಂಗ್ರಹಿಸಿಟ್ಟ ಆಹಾರದ ಮೇಲೆಯೇ ಮಾನವನು ಅವಲಂಬಿತನಾಗಿದ್ದಾನೆ. ನಾವು ಸೇವಿಸುವ ಆಹಾರವೂ ಮತ್ತೇನೂ ಅಲ್ಲ, ಸಸ್ಯವು ಸಂಗ್ರಹಿಸಿಟ್ಟ ಆಹಾರವೇ ಆಗಿದೆ.

ಸಕ್ಕರೆ ಒಂದು ಕಾರ್‍ಬನಿಕ್ ರಾಸಾಯನಿಕ ಸಂಯುಕ್ತವಾಗಿದೆ. ಸಕ್ಕರೆ ನಿಸರ್‍ಗದಲ್ಲಿ ಹಲವು ವಿಧಗಳಲ್ಲಿ ಸಿಕ್ಕುತ್ತದೆ. ಸಾಮಾನ್ಯ ಸಕ್ಕರೆ ‘ಸುಕ್ರೋಸ್’ ಮುಸುಕಿನ ಜೋಳದ ಸಕ್ಕರೆ ‘ಗ್ಲುಕೋಸ್’, ಹಣ್ಣು ಮತ್ತು ತರಕಾರಿಗಳಲ್ಲಿ ಸಕ್ಕರೆ ‘ಫ್ರುಕ್ಟೋಸ್’ ಹಾಲಿನಲ್ಲಿಯ ಸಕ್ಕರೆ ‘ಲ್ಯಾಕ್ಟೋಸ್’ ಇತ್ಯಾದಿ. ಜೇನು ತುಪ್ಪವು ಗ್ಲುಕೋಸ್ ಮತ್ತು ಫ್ರುಕ್ಟೋಸ್ ಎರಡನ್ನೂ ಹೊಂದಿದೆ.

ಕಬ್ಬಿನಿಂದಲೇ ಸಕ್ಕರೆ ತಯಾರಿಸಲಾಗುತ್ತದೆ ಎಂದು ನೀವು ತಿಳಿದರೆ ತಪ್ಪಾಗುವುದು. ಪಾಮ್ ಗಿಡಗಳ ಪುಷ್ಪಮಂಜರಿಯಿಂದ, ಮಾಪಲ್ ಜಾತಿಯ ಗಿಡಗಳ ಕಾಂಡದಿಂದ ಒಸರುವ ದ್ರವದಿಂದ, ಬೀಟ್ ಸಸ್ಯ ಮತ್ತು ಮರಗೆಣಸಿನ ಗೆಡ್ಡೆಗಳಂತಹ ಬೇರುಗಳಿಂದ, ಮೆಕ್ಕೆಜೋಳದ ಬೀಜಗಳಿಂದ ಮತ್ತು ನೀಪಜಾತಿಯ ಮರಗಳಿಂದ ಪಡೆಯಲಾಗುತ್ತದೆ. ಆದರೆ ಸುಮಾರು ೭೫ ಪ್ರತಿಶತ ಸಕ್ಕರೆಯನ್ನು ಕಬ್ಬಿನಿಂದಲೇ ಉತ್ಪಾದಿಸಲಾಗುತ್ತಿದೆ.

ಸಕ್ಕರೆ ಮಾನವ ಮತ್ತು ಪ್ರಾಣಿಗಳಿಗೆ ಬಹುಮುಖ್ಯವದ ಶಕ್ತಿಯ ಮೂಲ. ಇನ್ನಿತರ ಆಹಾರ ಒದಗಿಸದಷ್ಟು ಶೀಘ್ರದಲ್ಲಿ ಸಕ್ಕರೆ ದೇಹಕ್ಕೆ ಶಕ್ತಿ ಒದಗಿಸುತ್ತದೆ ಮತ್ತು ಶೀಘ್ರದಲ್ಲಿ ಕರಗುತ್ತದೆ. ಈ ಕಾರಣದಿಂದಾಗಿಯೇ ಆಟಗಾರರು ಹೊಸ ಹುರುಪನ್ನು ಪಡೆಯಲು ಗ್ಲುಕೋಸ್ ಸೇವಿಸುವದನ್ನು ನೀವು ನೋಡಿರಬಹುದು. ಸಕ್ಕರೆಯಲ್ಲಿ ಯಾವುದೇ ಸತ್ವ ಅಡಗಿಲ್ಲ. ಖನಿಜ, ಲವಣ, ಪ್ರೋಟಿನ್, ವಿಟಮಿನ್ ಇವುಗಳಾವುವೂ ಅದರಲಿಲ್ಲ. ಕೇವಲ ಕಾರ್‍ಬೋಹೈಡ್ರೇಟ್ ಮಾತ್ರ ಹೊಂದಿದೆ. ಅದೇ ಶಕ್ತಿಯ ಮೂಲ. ಅದನ್ನು ಸೇವಿಸಿದಾಗ ದೇಹಕ್ಕೆ ಕ್ಯಾಲೋರಿ ಶಕ್ತಿ ಲಭಿಸುತ್ತದೆ ಅಷ್ಟೇ! ಒಂದು ಪೌಂಡ್ ಸಕ್ಕರೆ ೧,೭೯೪ ಕಿ.ಕ್ಯಾಲೋರಿ ಶಕ್ತಿ ನೀಡುತ್ತದೆ.

ಬಿಳಿ ವಿಷ: ಯಾವುದೇ ಶುಭ ಸಂದೇಶ ಅಥವಾ ಸಂತೋಷದ ಸಂದರ್‍ಭವನ್ನು ನಾವು ಸಿಹಿ (ಸಕ್ಕರೆ) ಯಿಂದ ಹಂಚಿಕೊಳ್ಳುತ್ತೇವೆ. ಆದರೆ ಅದೇ ಸಿಹಿ ದೇಹಕ್ಕೆ ಅಪಾಯ ತಂದೊಡ್ಡಿದರೆ? ನಾಲಿಗೆಗೆ ಸಕ್ಕರೆ ಸಿಹಿಯಾದರೂ ಉದರಕ್ಕೆ ಕಹಿಯಾಗಿದೆ.

ಚಾಕಲೇಟ್ ಮತ್ತು ಸಿಹಿ ಪದಾರ್‍ಥಗಳ ರೂಪದಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುವುದರಿಂದ ದುರ್‍ಬಲ ಮತ್ತು ಹುಳುಕು ಹಲ್ಲು ಹಾಗೂ ಹೊಟ್ಟೆಯಲ್ಲಿ ಹುಳುಗಳು ಉಂಟಾಗಬಹುದು. ಪಾಚಕ ವ್ಯವಸ್ಥೆ ಸಕ್ಕರೆ ಕರಗಿಸಲು ಬಹುವಾಗಿ ಶ್ರಮಿಸಬೇಕಾಗುತ್ತದೆ. ಸಕ್ಕರೆ ದೇಹದಲ್ಲಿ ಕರಗಲು ಹೆಚ್ಚಿನ ಸಮಯದವರೆಗೆ ಉಳಿದುಬಿಡುತ್ತದೆ. ಇದರ ಪರಿಣಾಮವಾಗಿ ಮಿದುಳು, ನರವ್ಯೂಹ ಮತ್ತು ಎಲುಬುಗಳು ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಪೈಯೋರ್‍ಹಿಯೋ, ಮೂತ್ರಾಧಿಕ್ಯ, ಆಮ್ಲೀಯತೆ, ಕರುಳಿನ ಹುಣ್ಣು, ಅಧಿಕ ರಕ್ತದ ಒತ್ತಡ ಇತ್ಯಾದಿ ಸಕ್ಕರೆಯ ಸೇವನೆಯಿಂದ ಉಂಟಾಗುತ್ತದೆ. ಕೂದಲುದುರುವಿಕೆ, ಒರಟು ಚರ್‍ಮ, ಹೃದಯ ರೋಗಗಳೂ ಬರಬಹುದು.

ಸಣ್ಣ ಪ್ರಮಾಣದಲ್ಲಿ ಸಕ್ಕರೆ ಸೇವಿಸಿದಾಗಲೂ ದೇಹಕ್ಕೆ ಹಾನಿಯಿಲ್ಲವೆಂದಲ್ಲ. ಸಕ್ಕರೆಯ ತಯಾರಿಕೆಯಲ್ಲಿ ಸುಣ್ಣ, ಕಾರ್‍ಬನ್ ಡೈ ಆಕ್ಸೈಡ್, ಕ್ಯಾಲ್ಸಿಯಂ, ಫಾಸ್ಫೇಟ್ ಮತ್ತಿತರ ಲವಣಗಳನ್ನು ಸೇರಿಸಲಾಗುತ್ತದೆ. ‘ಅಲ್ಟ್ರಾಮರೈನ್ ಬ್ಲೂ’ ಎಂಬ ದ್ರಾವಣವನ್ನು ಸಕ್ಕರೆಗೆ ಹೊಳಪು ನೀಡಲು ಮತ್ತು ಶುದ್ಧೀಕರಿಸಲು ಉಪಯೋಗಿಸಲಾಗುತ್ತದೆ. ಇದು ಒಂದು ವಿಷಕಾರಿ ದ್ರಾವಣವಾಗಿದ್ದು ಸಕ್ಕರೆಯನ್ನು ಅಪಾಯಕಾರಿ ವಸ್ತುವಾಗಿಸುತ್ತದೆ.

ಸಕ್ಕರೆ ಅಥವಾ ಸಕ್ಕರೆಯಿಂದ ತಯಾರಿಸಿದ ಪದಾರ್‍ಥಗಳನ್ನು ಸೇವಿಸಿದಾಗ ಕೇವಲ ಕೆಲವೇ ನಿಮಿಷಗಳಲ್ಲಿ ಕರಗಿ ರಕ್ತ ಸೇರುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಇದನ್ನು ಹತೋಟಿಯಲ್ಲಿಡಲು ಮೇದೋಜೀರಕ ಗ್ರಂಥಿ ಅತಿಯಾಗಿ ಸ್ರವಿಸಿ ರಕ್ತಕ್ಕೆ ಇನ್ಸುಲಿನ್ ಬಿಡುಗಡೆ ಮಾಡಬೇಕಾಗುತ್ತದೆ. ಇದರಿಂದ ಸಕ್ಕರೆಯ ಪ್ರಮಾಣ ಹತೋಟಿಯಲ್ಲಿರುತ್ತದೆ. ಆದರೆ ಯಕೃತ್ತಿನಲ್ಲಿ ಗ್ರೈಕೋಜೆನ್‌ನ ಪ್ರಮಾಣ ಕುಂಠಿತವಾಗುತ್ತದೆ. ಕಾರಣ ದಣಿವು, ತಲೆನೋವು, ದುರ್‍ಬಲತೆ, ಅಸ್ಥಮಾ, ಡಯಾಬಿಟಿಸ್ ಕಾಣಿಸಿಕೊಳ್ಳುಬಹುದು. ಸಕ್ಕರೆಯ ಹಿತ-ಮಿತ ಸೇವನೆಯೇ ಆರೋಗ್ಯಕ್ಕೆ ಒಳ್ಳೆಯದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...