Home / ಕವನ / ಕವಿತೆ / ಉದುರಿದೆಲೆಗಳು

ಉದುರಿದೆಲೆಗಳು

ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ
ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ;
ಹಳೆಯ ಅರಳಿಮರ
ಹೊಳೆಮೆಟ್ಟಲು
ಗರುಡಗಂಬ
ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ
ಹುಟ್ಟಿಕೊಳ್ಳುತ್ತದೆ ಸತ್ತ ಗಿಡ
ಸುತ್ತದಡ ನಡುವೆ
ಕತ್ತರಿಸಿ ತೆಗೆದ ಆಕಾಶದಂತೆ ಕಪ್ಪಗೆ
ಬೆತ್ತಲೆ ಮೈಯ ನುಣುಪು ಜಲ

ಬೆತ್ತಲೆ ಮೈಯ ತುಂಗಾನದಿಯ ಪಿಸುದನಿ
ನೆಕ್ಕಿಬಿಡುತ್ತದೆ ಒಳಗೆ ಮೊಳೆಯುತ್ತಿರುವ ಉರಿಯ
ಹೊರಟುಬಿಡುತ್ತದೆ ಮನಸ್ಸು ಹೊಡೆದುಕೊಂಡು ಮೇವಿಗೆ
ಹಿಂಡು ಕುರಿಯ
ಕೂರುತ್ತೇನೆ ದಡದಲ್ಲಿ
ಕಾಲಾಡುತ್ತ ನೀರಲ್ಲಿ
ಕರೆಯುತ್ತೇನೆ ಒಬ್ಬೊಬ್ಬರಾಗಿ
ಕಾಡಿದ ಕೌರವರ ಕೂಡಿದ ಪಾಂಡವರ
ಕರೆಯುತ್ತೇನೆ ಕಂಪು ಕನಸುಗಳನ್ನು
ಎದೆಗೆ ಹಬ್ಬಿದ್ದ ಚೆಲುವೆಯರ
ಆಸೆಗೆ ಆಕೃತಿ ನೀಡಿದ ಅರುಣೋದಯ ಋಣಗಳ
ಆದರಿಸಿ ಆಲಿಂಗನದಲ್ಲಿ ಅಫಜಲರಾದ ನೆಂಟರ
ನಾಲಿಗೆಯಲ್ಲಿ ಜೆಟ್ ಬಿಡುವ ಕಾಲುನಡಿಗೆ ಕುಂಟರ
ಚೈತ್ರವರಳುತ್ತದೆ
ಜ್ಯೇಷ್ಠ ಕೆರಳುತ್ತದೆ.
ಮುಗಿಯುತ್ತದೆ ಮಾಗಿ ತಾಗಿ ಎಲ್ಲ ಕೋಲಾಹಲ
ಬಿಸಿಲು ಬೆಳುದಿಂಗಳೆಲ್ಲ ಜೊತೆಬೆರಳಂತೆ ನಿಂತು
ಒಂದೇ ಕೈಯಾಗಿದೆ ಅವು ಕಾಲೂರಿದ ನೆಲ

ಇಲ್ಲ ಎಲ್ಲ ಅರ್ಥವಾಗುತ್ತದೆ ಈಗ ನನಗೆ
ಬಿಚ್ಚಿ ನಿಲ್ಲುತ್ತವೆ ಪಾತ್ರಗಳೆಲ್ಲ ಗ್ರೀನ್ ರೂಮಿನಲಿ ತಮ್ಮ ತೊಡಿಗೆ
ಒಂದೇ ದಾರದಿಂದ ಆಗಿದೆ ಕಸೂತಿಯ
ಬಗೆಬಗೆ ಚಿತ್ರ, ಹೆಣಿಗೆ
ಸುಖದುಃಖ ಬ್ಯಾಂಡು ಹೊಡೆಯುತ್ತ ಹೊರಟಿದೆ
ವಿವೇಕದ ಮೆರವಣಿಗೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...