Home / ಕವನ / ಅನುವಾದ / ಎಷ್ಟು ಕಾಲ?

ಎಷ್ಟು ಕಾಲ?

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ?
ಸಾವಿರ ದಿನವೋ ಒಂದು ದಿನವೋ?
ಒಂದು ವಾರವೋ ಒಂದಷ್ಟು ಶತಮಾನವೋ?
ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ?
‘ಅನಂತ ಕಾಲ’ ಅಂದರೆ ಎಷ್ಟುಕಾಲ?
ಈ ಯೋಚನೆಗಳಲ್ಲಿ ಮುಳುಗಿ
ಉತ್ತರ ಹುಡುಕಲು ಹೊರಟೆ.
ಹೋಗಿ ಮಹಾ ಗುರುಗಳನ್ನು ಕಂಡೆ.
ಅವರ ಪೂಜೆ ಆಚಾರಗಳೆಲ್ಲ ಮುಗಿಯಲೆಂದು ಕಾದೆ.
ಎಲ್ಲ ಮುಗಿಸಿ ದೇವರನ್ನೋ ದೆವ್ವವನ್ನೋ
ಕಾಣಲು ಹೊರಟರು ಅವರೆಲ್ಲ.
ನನ್ನ ಪ್ರಶ್ನೆ ಕೇಳಿ ಬೇಸತ್ತರು.
ಅವರಿಗೆ ತಿಳಿದದ್ದು ತೀರ ಸ್ವಲ್ಪ.
ಅವರು ಎಷ್ಟಂದರೂ ಮಠದ ಉಸ್ತುವಾರಿ ಅಧಿಕಾರಿಗಳು ತಾನೆ?
ಡಾಕ್ಟರುಗಳು ಕನ್ಸಲ್ಟೇಶನ್ನಿನ ನಡುವೆ ಬಿಡುವು ಮಾಡಿಕೊಂಡು
ನನ್ನ ಕೂರಿಸಿ ಮಾತಾಡಿದರು.
ಕೈಯಲ್ಲಿ ಕತ್ತರಿ, ಚೂರಿ;
ಮೈ ತುಂಬ ಔರೋಮೈಸಿನ್ ವಾಸನೆ.
ದಿನಕ್ಕಿಂತ ಮರುದಿನ ಹೆಚ್ಚು ಬ್ಯುಸಿ.
ಅವರ ಮಾತಿನಿಂದ ತಿಳಿದದ್ದು ಇಷ್ಟು;
ಮೈಕ್ರೋಬುಗಳ ಸಾವು ಮುಖ್ಯವಲ್ಲ…
ದಿನವೂ ಸಹಸ್ರಾರು ಸಾಯುತ್ತವೆ…
ಬದುಕಿ ಉಳಿದವು ವಿಕೃತಿಯ ಲಕ್ಷಣ ತೋರುತ್ತವಲ್ಲ ಅದೇ ಸಮಸ್ಯೆ.
ಭಯವಾಗಿ ಹೆಣ ಸುಡುವಲ್ಲಿಗೆ ಹೋದೆ.
ನದಿಯ ಪಕ್ಕದಲ್ಲಿ ಸುಡುತ್ತಾರೆ,
ಬಣ್ಣ ಬಳಿದ ಹೆಣಗಳು,
ಪುಟ್ಟ ಶರೀರಗಳು,
ಶಾಪದ ಪ್ರಭಾವಳಿ ಹೊತ್ತ
ಅರಸರ ಹೆಣಗಳು,
ವಾಂತಿ ಭೇಧಿ ಬಂದು ಸತ್ತ
ಸುಂದರಿಯರ ಶವಗಳು.
ಹೆಣಗಳ ಬೀಚು,
ನಡುವೆ ದಹನ ಪಾರಂಗತರು.
ಬಿಡುವು ಸಿಕ್ಕಾಗ ಅವರತ್ತ
ನನ್ನ ಪ್ರಶ್ನೆಗಳನ್ನು ಎಸೆದೆ.
‘ನಿನ್ನೊ ಸುಡುತ್ತೇವೆ ಬಾ’ ಅಂದರು.
ಅವರಿಗೆ ತಿಳಿದದ್ದು ಅದೊಂದೇ.
ನಮ್ಮೂರಿಗೆ ಬಂದರೆ ಸ್ಮಶಾನದವರು
ಹೆಂಡ ಹೀರುತ್ತಾ, ನಡುನಡುವೆ ಹೇಳಿದರು :
‘ಒಬ್ಬ ಒಳ್ಳೆ ಹುಡುಗಿಯನ್ನು ಹಿಡಿದುಕೋ
ಈ ಎಲ್ಲ ತರಲೆ ಮರೆತುಬಿಡು.’
ಇಷ್ಟು ಸಂತೋಷವಾಗಿದ್ದವರನ್ನು ನೋಡೇ ಇರಲಿಲ್ಲ.
ಬಾಟಲಿಯ ಮೇಲೆ ಬಾಟಲಿ
ಖಾಲಿ ಮಾಡುತ್ತಾ ಹಾಡಿದರು,
ಮತ್ತೇರಿದರು, ಮಹಾನ್ ಸಂಭೋಗ ಪರಿಣತರು.
ಮನೆಗೆ ಬಂದೆ. ಪ್ರಪಂಚವೆಲ್ಲ ಸುತ್ತಿ
ಮುದುಕನಾಗಿದ್ದೆ.
ಈಗ ಯಾರನ್ನೂ ಕೇಳುವುದಿಲ್ಲ.
ಆದರೆ ದಿನ ಕಳೆದಂತೆ ತಿಳಿಯುವುದು ಕಡಿಮೆಯಾಗುತ್ತಿದೆ.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...