Home / ಕವನ / ಅನುವಾದ / ಎಷ್ಟು ಕಾಲ?

ಎಷ್ಟು ಕಾಲ?

ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ?
ಸಾವಿರ ದಿನವೋ ಒಂದು ದಿನವೋ?
ಒಂದು ವಾರವೋ ಒಂದಷ್ಟು ಶತಮಾನವೋ?
ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ?
‘ಅನಂತ ಕಾಲ’ ಅಂದರೆ ಎಷ್ಟುಕಾಲ?
ಈ ಯೋಚನೆಗಳಲ್ಲಿ ಮುಳುಗಿ
ಉತ್ತರ ಹುಡುಕಲು ಹೊರಟೆ.
ಹೋಗಿ ಮಹಾ ಗುರುಗಳನ್ನು ಕಂಡೆ.
ಅವರ ಪೂಜೆ ಆಚಾರಗಳೆಲ್ಲ ಮುಗಿಯಲೆಂದು ಕಾದೆ.
ಎಲ್ಲ ಮುಗಿಸಿ ದೇವರನ್ನೋ ದೆವ್ವವನ್ನೋ
ಕಾಣಲು ಹೊರಟರು ಅವರೆಲ್ಲ.
ನನ್ನ ಪ್ರಶ್ನೆ ಕೇಳಿ ಬೇಸತ್ತರು.
ಅವರಿಗೆ ತಿಳಿದದ್ದು ತೀರ ಸ್ವಲ್ಪ.
ಅವರು ಎಷ್ಟಂದರೂ ಮಠದ ಉಸ್ತುವಾರಿ ಅಧಿಕಾರಿಗಳು ತಾನೆ?
ಡಾಕ್ಟರುಗಳು ಕನ್ಸಲ್ಟೇಶನ್ನಿನ ನಡುವೆ ಬಿಡುವು ಮಾಡಿಕೊಂಡು
ನನ್ನ ಕೂರಿಸಿ ಮಾತಾಡಿದರು.
ಕೈಯಲ್ಲಿ ಕತ್ತರಿ, ಚೂರಿ;
ಮೈ ತುಂಬ ಔರೋಮೈಸಿನ್ ವಾಸನೆ.
ದಿನಕ್ಕಿಂತ ಮರುದಿನ ಹೆಚ್ಚು ಬ್ಯುಸಿ.
ಅವರ ಮಾತಿನಿಂದ ತಿಳಿದದ್ದು ಇಷ್ಟು;
ಮೈಕ್ರೋಬುಗಳ ಸಾವು ಮುಖ್ಯವಲ್ಲ…
ದಿನವೂ ಸಹಸ್ರಾರು ಸಾಯುತ್ತವೆ…
ಬದುಕಿ ಉಳಿದವು ವಿಕೃತಿಯ ಲಕ್ಷಣ ತೋರುತ್ತವಲ್ಲ ಅದೇ ಸಮಸ್ಯೆ.
ಭಯವಾಗಿ ಹೆಣ ಸುಡುವಲ್ಲಿಗೆ ಹೋದೆ.
ನದಿಯ ಪಕ್ಕದಲ್ಲಿ ಸುಡುತ್ತಾರೆ,
ಬಣ್ಣ ಬಳಿದ ಹೆಣಗಳು,
ಪುಟ್ಟ ಶರೀರಗಳು,
ಶಾಪದ ಪ್ರಭಾವಳಿ ಹೊತ್ತ
ಅರಸರ ಹೆಣಗಳು,
ವಾಂತಿ ಭೇಧಿ ಬಂದು ಸತ್ತ
ಸುಂದರಿಯರ ಶವಗಳು.
ಹೆಣಗಳ ಬೀಚು,
ನಡುವೆ ದಹನ ಪಾರಂಗತರು.
ಬಿಡುವು ಸಿಕ್ಕಾಗ ಅವರತ್ತ
ನನ್ನ ಪ್ರಶ್ನೆಗಳನ್ನು ಎಸೆದೆ.
‘ನಿನ್ನೊ ಸುಡುತ್ತೇವೆ ಬಾ’ ಅಂದರು.
ಅವರಿಗೆ ತಿಳಿದದ್ದು ಅದೊಂದೇ.
ನಮ್ಮೂರಿಗೆ ಬಂದರೆ ಸ್ಮಶಾನದವರು
ಹೆಂಡ ಹೀರುತ್ತಾ, ನಡುನಡುವೆ ಹೇಳಿದರು :
‘ಒಬ್ಬ ಒಳ್ಳೆ ಹುಡುಗಿಯನ್ನು ಹಿಡಿದುಕೋ
ಈ ಎಲ್ಲ ತರಲೆ ಮರೆತುಬಿಡು.’
ಇಷ್ಟು ಸಂತೋಷವಾಗಿದ್ದವರನ್ನು ನೋಡೇ ಇರಲಿಲ್ಲ.
ಬಾಟಲಿಯ ಮೇಲೆ ಬಾಟಲಿ
ಖಾಲಿ ಮಾಡುತ್ತಾ ಹಾಡಿದರು,
ಮತ್ತೇರಿದರು, ಮಹಾನ್ ಸಂಭೋಗ ಪರಿಣತರು.
ಮನೆಗೆ ಬಂದೆ. ಪ್ರಪಂಚವೆಲ್ಲ ಸುತ್ತಿ
ಮುದುಕನಾಗಿದ್ದೆ.
ಈಗ ಯಾರನ್ನೂ ಕೇಳುವುದಿಲ್ಲ.
ಆದರೆ ದಿನ ಕಳೆದಂತೆ ತಿಳಿಯುವುದು ಕಡಿಮೆಯಾಗುತ್ತಿದೆ.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...