Home / ಕವನ / ಕವಿತೆ / ಬುದ್ಧ ಮತ್ತು ನನ್ನ ಮಾತುಗಳು

ಬುದ್ಧ ಮತ್ತು ನನ್ನ ಮಾತುಗಳು

ಬುದ್ಧ ಹೇಳಿದ ಮುಳ್ಳಿನ ಕಿರೀಟ
ಧರಿಸಿದರೆ ನೋವುಗಳು ಎದೆಗಿಳಿದು
ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು
ಎಲ್ಲವೂ ಮೌನವಾಗುತ್ತವೆ.
ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ
ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು
ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತವೆ
ಎಂದೂ ಮತ್ತೆ ಮಾತಿನ ಶಸ್ತ್ರ ಪ್ರಹಾರ
ಮೌನದ ಆಳವನ್ನು ಕಲುಕಿ ರಾಡಿ ಮಾಡುತ್ತದೆಂದು.

ಬುದ್ಧ ಹೇಳಿದ ಅವಮಾನ ಹಿಯ್ಯಾಳಿಸಿದರೆ
ಈ ದೇಹ ಬಂಧನದಿಂದ ಬಿಡುಗಡೆ
ಸಿಗುತ್ತದೆ. ಎಂದೂ ಅಲ್ಲ ಕ್ರೂರ ಮನಸ್ಸಿರುವುದಿಲ್ಲ,
ಎಲ್ಲವೂ ಮಾತಿನಾಚೆಯ ಮೌನವಾಗುತ್ತದೆ.
ಅವನಿಗೆ ಗೊತ್ತಿಲ್ಲ ಉಳಿಯಿಂದ
ಹೊಡೆದು ಶಿಲ್ಪಿ ಮಾಡಿದ ಮಾಟ
ಮೂರ್ತಿ ತಾಳ್ಮೆಯಿಂದ ಎಲ್ಲ ದಾಟಿ ಮೀರಿ
ಪೂಜೆಗೊಳ್ಳುತ್ತದೆ ಕತ್ತಲೆಯಿಂದ ಬೆಳಕಿನ ಅರಮನೆಯಲಿ.

ಬುದ್ಧ ಹೇಳಿದ ಎಲ್ಲ ಬಿಟ್ಟು ಊರಿಗೆ ಬೆನ್ನು ಹಾಕಿ
ನಿರ್ಮೋಹಿಯಾಗಿ ನಡೆದರೆ ದಾರಿಯಲಿ ಏಕಾಂಗಿಯಾಗಿ
ನಿರ್ಲಕ್ಷಿಸಿದ ಸತ್ಯಗಳು ಕಣ್ಣಮುಂದೆ ಕಂಗೊಳಿಸುತ್ತದೆ
ಮತ್ತೆ ಭವ ಬದುಕು ಒಂದಾಗುತ್ತದೆ.
ಅವನಿಗೆ ಗೊತ್ತಿಲ್ಲ ಸಂತೆಯೊಳಗೆ ನಿಂತು
ಸತ್ಯವನ್ನ ಸುಳ್ಳಿನೊಡನೆ ಹೊಡೆದಾಡಿ ನಮ್ಮಿಂದಲೇ
ಕಳಚಿ ಕೊಂಡು ಹೊಸ ನಮೂನೆಯ ಮನಸ್ಸು.
ಬದುಕು ಮತ್ತೆ ನಮ್ಮಲ್ಲೇ ಹುಟ್ಟಿಕೊಳ್ಳುತ್ತದೆ ಎಂದು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...