Home / ಕವನ / ಕವಿತೆ / ಸಮಾಧಿ ಯೋಗ

ಸಮಾಧಿ ಯೋಗ

ಎಲರು ತೀಡಿದಷ್ಟು
ಕುಣಿವ ಎಲೆಗಳ ಭಂಗಿ
ಪಟಪಟನೇ ಆಡುವ ಮಾತು
ಗಾಳಿಹಾದಿಯ ತುಂಬೆಲ್ಲಾ ಸಿಗುವ ಹೂಗಳು
ಬದುಕೆಂಬ ಚೈತ್ರಕ್ಕೆ ಎಂತಹ ಸೊಗಸು.

ಅವನ ಕಣ್ಣುಗಳು ಸಿಡಿಯುವಾಗ
ಹನಿಗೂಡಿದ ನದಿ ಶಾಂತವಾಗುತ್ತದೆ.
ಆ ಗುಡ್ಡದಾಚೆಗಿನ ಸರಹದ್ದು
ದಾಟಿ ಬಂದು ಎಷ್ಟೋ ದಿನಗಳಾಗಿವೆ.
ಸದ್ದು ಮಾಡುವ ತಮಟೆ ಮಹಾಮೌನಿ.

ನೋವು ಬದಲಿಸುತ್ತದೆ.
ಬದಲಾಗುವುದು ಕೆಂಡದ ಬಣ್ಣವೂ
ಆಗಾಗ ಎಲರ ಸುಳಿಗೆ ಅಂತರ್‍ಲಾಗ ಹಾಕುವ
ಧೌತ ವಸನಗಳು ತಿಪ್ಪೆ ಮೇಲೆ ಬೀಳದಂತೆ
ಗಟ್ಟಿಯಾಗಿ ಕಟ್ಟಬೇಕು ಸರಿಗೆತಂತಿಗೆ

ಸಾಗರನ ದಡದಲ್ಲಿ ಮುತ್ತುವ
ಎಲರ ಮುತ್ತಿನ ಕಚಗುಳಿ
ಗಾಳಿನೀರಿನ ಆಳ ಅಗಲಕ್ಕೆ
ಪ್ರಚಂಡ ಪ್ರತಾಪಕ್ಕೆ ಮರುಕ್ಷಣದ
ಕಿನ್ನತೆ-ನಾನೆಂಬ ಶೂನ್ಯತೆ

ಸಡಗರದ ಎಳೆತ ಸೆಳೆತಗಳ ಕೂಡು ಕೂಟ
ಕ್ಷಣದ ಆಟ ನೋಟ
ನೆನಪ ಹಾಳೆಗಳು ತೆರೆದುಕೊಳ್ಳುವವು
ಗೋಡೆಯ ತುಂಬೆಲ್ಲಾ ಚಿತ್ರಗಳು ರೀಲಿನಂತೆ
ಚಲಿಸಿ ಹೋಗುವವು.
ಮಗುಚಿ ಬೀಳುವುದು ದಪ್ಪಂಚಿನ ಮೇಲ್ಪುಟ
ಮತ್ತೇ ಅದೇ ಸಬ್ಬಕ್ಕಿ ಗಂಜಿ
ಬಿಸಿ ಮಜ್ಜನ ಚಿಕಿತ್ಸೆ ಸಮಾಧಿಯೋಗಕ್ಕೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...