Home / ಕವನ / ಕವಿತೆ / ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ
ನಾನು ಒಂದು ನಕ್ಷತ್ರ ನೀನು
ಒಂದು ನಕ್ಷತ್ರ. ನಾವಿಬ್ಬರೂ
ನಮ್ಮಿಬ್ಬರಿಗೆ ಮಾತ್ರ ಗೊತ್ತು.
ಬೆಳಕನ್ನು ಲಕ್ಕ ಮಾಡೋಣ.
ಮುಕ್ಕಾಲು ಚಂದ್ರನನ್ನು ಎಬ್ಬಿ
ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ.

ಇಣುಕಿನೋಡು ಏನೇನು ಕಾಣುತ್ತದೆ-

ತೆಂಗಿನ ಮರಗಳು ಸುಮ್ಮನೆ ನಿಂತಿವೆ.
ಮೀನು ಕಣ್ಣಿನ ಹುಡುಗಿ
ಮಡಕೆಯಲ್ಲಿ ನೀರು ತಂದು
ಮೇಕೆಯ ಜೊತೆಯಲ್ಲಿ ಅಡುತ್ತಿದ್ದಾಳೆ.
ಬಯಲಲ್ಲಿ ಒಂದು ದನ ಮೇಯುತ್ತಿದೆ.
ಸಿಂಹವನ್ನು ಕ೦ಡರೆ ಭಯವೋ
ಚೇಳನ್ನು ಕಂಡರೆ ಭಯವೋ ?

ಚಂದ್ರ ಕರಗಿ ಹೋದನೇನು ನೋಡು.

ಹಸುವಿನಂಥವನು ನಾನು.
ನನ್ನ ಈಜು ಕೊಳಕ್ಕೆ ಬಂದ ಮೀನು
ತನ್ನ ಯಜ್ಞಕ್ಕೆ ನನ್ನ, ಬಲಿ ಏಕೆ ಬಯಸಿದ್ದು?
ಮಾತಿನ ಕುಟುಕಿಗೆ ಹೆದರಿ ನುಣುಚಿಕೊಂಡದ್ದು?

ನಿನ್ನ ಸಾಲದ ಬೆಳೆಕನಲ್ಲಿ ಅವರು ಇವರು
ನನ್ನ ಮುಖ ನೋಡಬೇಕಾಗಿಲ್ಲ.
ನನ್ನ ಸಿಂಹಾಸನಕ್ಕೆ ಮೂವತ್ತೆರಡು ಮೆಟ್ಟಲಿವೆ.
ಒಂದೊಂದು ಮೆಟ್ಟಲಿಗೂ ಒಂದೊಂದು ಬೊಂಬೆ
ನನ್ನ ಒಂದೊಂದು ಕಥೆ ಹೇಳುತ್ತದೆ, ಬಂದು ನೋಡು,
ನನ್ನ ಮನಸ್ಸಿಗೆ ಸಾವಿರ ಮುಖ ಇದೆ,
ಬೆಳಕಿಗೆ ಸಾವಿರ ದಾರಿ ಇದೆ.

ರುಚಿಯಾದ ಮಾತಿನಲ್ಲಿ ನನ್ನ ಕತೆ ಹೇಳಲಾರೆ.
ನಿನ್ನ ಭಾಷೆಯಲ್ಲಿ ನನ್ನ ಅರ್ಥ ನನ್ನ ಇಷ್ಟದ ಹಾಗೇ
ಉಳಿದೀತೇನು ?

ಬೆಳೆಗಿನ ಜಾವದ ರೈಲು ಕೂಗುತ್ತಿದೆ. ನಕ್ಷತ್ರಕ್ಕೂ
ನಕ್ಷತ್ರಕ್ಕೂ ತುಂಬ ದೂರ……….
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...