Home / ಕವನ / ಕವಿತೆ / ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ

ಇಷ್ಟೊಂದು ದೊಡ್ಡ ಬಯಲಲ್ಲಿ
ನಾನು ಒಂದು ನಕ್ಷತ್ರ ನೀನು
ಒಂದು ನಕ್ಷತ್ರ. ನಾವಿಬ್ಬರೂ
ನಮ್ಮಿಬ್ಬರಿಗೆ ಮಾತ್ರ ಗೊತ್ತು.
ಬೆಳಕನ್ನು ಲಕ್ಕ ಮಾಡೋಣ.
ಮುಕ್ಕಾಲು ಚಂದ್ರನನ್ನು ಎಬ್ಬಿ
ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ.

ಇಣುಕಿನೋಡು ಏನೇನು ಕಾಣುತ್ತದೆ-

ತೆಂಗಿನ ಮರಗಳು ಸುಮ್ಮನೆ ನಿಂತಿವೆ.
ಮೀನು ಕಣ್ಣಿನ ಹುಡುಗಿ
ಮಡಕೆಯಲ್ಲಿ ನೀರು ತಂದು
ಮೇಕೆಯ ಜೊತೆಯಲ್ಲಿ ಅಡುತ್ತಿದ್ದಾಳೆ.
ಬಯಲಲ್ಲಿ ಒಂದು ದನ ಮೇಯುತ್ತಿದೆ.
ಸಿಂಹವನ್ನು ಕ೦ಡರೆ ಭಯವೋ
ಚೇಳನ್ನು ಕಂಡರೆ ಭಯವೋ ?

ಚಂದ್ರ ಕರಗಿ ಹೋದನೇನು ನೋಡು.

ಹಸುವಿನಂಥವನು ನಾನು.
ನನ್ನ ಈಜು ಕೊಳಕ್ಕೆ ಬಂದ ಮೀನು
ತನ್ನ ಯಜ್ಞಕ್ಕೆ ನನ್ನ, ಬಲಿ ಏಕೆ ಬಯಸಿದ್ದು?
ಮಾತಿನ ಕುಟುಕಿಗೆ ಹೆದರಿ ನುಣುಚಿಕೊಂಡದ್ದು?

ನಿನ್ನ ಸಾಲದ ಬೆಳೆಕನಲ್ಲಿ ಅವರು ಇವರು
ನನ್ನ ಮುಖ ನೋಡಬೇಕಾಗಿಲ್ಲ.
ನನ್ನ ಸಿಂಹಾಸನಕ್ಕೆ ಮೂವತ್ತೆರಡು ಮೆಟ್ಟಲಿವೆ.
ಒಂದೊಂದು ಮೆಟ್ಟಲಿಗೂ ಒಂದೊಂದು ಬೊಂಬೆ
ನನ್ನ ಒಂದೊಂದು ಕಥೆ ಹೇಳುತ್ತದೆ, ಬಂದು ನೋಡು,
ನನ್ನ ಮನಸ್ಸಿಗೆ ಸಾವಿರ ಮುಖ ಇದೆ,
ಬೆಳಕಿಗೆ ಸಾವಿರ ದಾರಿ ಇದೆ.

ರುಚಿಯಾದ ಮಾತಿನಲ್ಲಿ ನನ್ನ ಕತೆ ಹೇಳಲಾರೆ.
ನಿನ್ನ ಭಾಷೆಯಲ್ಲಿ ನನ್ನ ಅರ್ಥ ನನ್ನ ಇಷ್ಟದ ಹಾಗೇ
ಉಳಿದೀತೇನು ?

ಬೆಳೆಗಿನ ಜಾವದ ರೈಲು ಕೂಗುತ್ತಿದೆ. ನಕ್ಷತ್ರಕ್ಕೂ
ನಕ್ಷತ್ರಕ್ಕೂ ತುಂಬ ದೂರ……….
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...