Home / ಕವನ / ಕವಿತೆ / ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ
ಸಾಂಬ ಕೇಳು ನಮ ವಿಟರಾರು
ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು
ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು
ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು
ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವರು
ರಂಭೆರು ಲೋಕದಿ ಕಂಭನಡಿಸಿ ಅವಲಂಬನದೊಳು ಮರಿಗೊಂಬುವರು

||ಇಳವು||
ಮುಂಭಾಗವ ರೋಹಿಣಿ ಚಂದ್ರನ ಬೀರಿ ಬೆಂಬಲದಿ ಅಶ್ವಿನಿಯ ತಾರಿ
ಹಿಂಭಾಗ ಮುಖಾ ಭುಜರಸ ವಿದೂಷಕ ಸಾರಿ
ಹಿಂಭಾಗದರೋ ಸುಖದೋರಿ
||ಏರು||
ತುಂಬಿಲ ರಂಧ್ರದಿ ತವಕ ತೂರ್ಯ ಅದ
-ರುಂಬುವ ಪಾನದ ಪಾಕ ಮದುರ
ತುಂಬಿದಂಥ ಕುಚ ಕುಂಭದಿ ಅಮೃತನಂಬಿಕೊಂಡು ಪುರುಷನ ತೋರು || ೧ ||

ನಾಗಲೀಕ ನಾರಾಯಣ ಲಕ್ಷ್ಮಿಸಹವಾಸದಲಿ ಸರಸದ ಘೋರಾ
ಬ್ಯಾಗ ಬ್ರಹ್ಮ ಸರಸ್ವತಿ ಸಂಯೋಗದಿ ಮೇರು ಕಿರಣದಿಂದ್ರಿಯ ಮೋರಾ
ಜಾಗಲಾಗ ಪಾರಾಗ ರುದ್ರಗ ಹೋಗಿ ಕಾಳಿ ತಾಳಿದ ವಿವರಾ

ಸಾಗುತಿಹುದು ಸುರಿದಾಂಕುರ ಮೂಗಿನ
ಮೇಘ ಹೊಳೆಯುವ ರೇಖವು ಮೂರಾ

||ಇಳವು||
ಭೋಗಕ್ಕೆ ಹಸ್ತಿನಿಯ ಜೋಡು
ರಾಗಂಗ ರೋಮದ ಕೋಡು
ಮ್ಯಾಗ ಬಂದು ಬೀಳುವದು ನೋಡು
ನೀಗುವದಲ್ಲೆ ಮನ್ಮಥನ ಬೀಡು

||ಏರು||
ಸೂಸುತಿಹುದು ಯವ್ವನದಿ ಮನಸಿಜನ ಬೀದಿಯೊಳಗೆ
ಕಾಮಶಾಸ್ತ್ರಕರತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು

ಹಟದಿ ಶಿವೆ ಬೆಸಗೊಳ್ಳಲು ಶಿವ ತಾ ತಿಳಿಸಿದ ಸಾರು
ಪಟಹ ಬರದು ಚಿತ್ರದಲಿ ರೂಪಿಸಲು
ನಿಟಗೊಳಿಸಿತು ಹೃದಯದ ಬೇರು
ಮಟನೋಟವು ಕಮಟಕರ ಭೂಟಕ ಪದ್ಮಿನಿಯ ಮೈಬೆವರು
ಚಟುಲ ಕಟಾಕ್ಷದಿ ಪರಶಿವ ಪೇಳಲು
ಧಟಿತವಾದ ಶರೀರದ ಕವಲು
ಕುಟಿಲ ಕೋಹರತಿಮಾರಗ ಹೊಳೆಯಲು
ಘಟನೆ ನಿಮಗ ತಿಳಿಸಿದ ಸಾರು
||ಏರು||
ಶಂಕಿನಿಗ ಸಪ್ತ‌ಋಷಿ ಬೆದರಿ
ಜಟ ಹರಕೊಂಡರು ಪಲುವದರಿ

||ಇಳವು||
ನಿಟಿಲನೇತ್ರ ಶಿಶುನಾಳಧೀಶಗ ಅಷ್ಟ ಜನರು
ಸ್ತ್ರೀ ಪುರುಷರು ತುಂಬಿದಂಥ ಕುಚಕುಂಭದಿ
ಅಮೃತ ನಂಬಿಕೊಂಡ ಪುರುಷನ ತೋರು || ೩ ||
*****

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...