Home / ಕವನ / ಕವಿತೆ / ಎಚ್ಚರಿಕೆ

ಎಚ್ಚರಿಕೆ

ಬಂಧನವರಿಯದೆ
ಸುಖವನು ಬಯಸದೆ
ಬೆಳೆಯುತ ಬರುತಿಹಳೀ ಸೀತೆ

ನಿರುತವು ಶ್ರಾವ್ಯದ
ಗಾನವನೊರೆವಳು
ಕಿರುನಗೆ ಮೊಗದೊಳು ಸುಪ್ರೀತೆ

ಗಾಯಕಿ ನಿನ್ನಯ
ಗಾನವ ಕೇಳಲು
ಕಾತರರಾಗಿಹೆವೆಂದೊಡನೆ

ಕಂಗಳ ಮುಚ್ಚುತ
ತಾಳವ ತಟ್ಟುತ
ಝೇಂಕೃತನಾದವ ಗೆಯ್ಯುವಳು

ಗಾನದ ಸಾಗರ-
ದಲೆಗಳ ಸೆಳೆತದಿ
ತೂಗಿಸಿ ತೇಲಿಸಿ ನಲಿಸುವಳೂ

ವಾಣಿಯ ವೀಚಿಯ
ಮಾಲೆಯ ಪೋಣಿಸಿ
ಕ್ಷಣದೊಳು ಮೆಯ್ಯನು ಮರೆಸುವಳು

ನಿಸ್ಪೃಹ ಮನಸಿನ
ನಮ್ಮೀ ಸೀತೆಗೆ
ಓದುವುದೆಂದರೆ ಹಿರಿಯಾಸೆ

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಕಂಡರೆ ಬಹುಪ್ರೀತಿ

ಚಿಗುರಿದ ಲತೆಯೊಳು
ಅರಳುತ ಬರುತಿಹ
ಕುಸುಮವ ಹೋಲುವ ಓ ಸೀತೇ

ವಿಶ್ವದ ರಂಗದಿ
ನಾನಾ ಬಗೆಗಳ
ಯಂತ್ರಗಳಿರುವುವು ಎಚ್ಚರಿಕೆ

ಕಣ್ಣಿಗೆ ಕಾಣದ
ಸ್ಥಳದೊಳು ಕೆಲವೆಡೆ
ಮಣ್ಣೊಳು ಹುದುಗಿವೆ ವಜ್ರಗಳು

ಹೊನ್ನಿನ ರಾಸಿಯ
ಮಧ್ಯದಿ ಕೆಲವೆಡೆ
ಸರ್ಪಗಳಿರುವುವು ಎಚ್ಚರಿಕೆ

ಭಾವದಿ ತುಂಬಿದೆ
ದೇವನ ಸೃಷ್ಟಿಯು
ಎಂಬುದನೆಂದಿಗು ಮರೆಯದಿರು

ಮೇಘವ ಚುಂಬಿಸಿ
ಗಗನದಿ ಸುಳಿಯುತ
ಹಾರುವ ಹಕ್ಕಿಯ ತೆರದೊಳಿರು

ಕಲ್ಮಷವಿಲ್ಲದ
ನಿನ್ನೀ ಹೃದಯದಿ
ಮುಳ್ಳಿನ ಕಂಪೆಯ ಹರಡದಿರು

ಕಷ್ಟದಿ ನರಳುವ
ಜನರಿಗೆ ಮರುಗುತ
ಸಾಯವ ಮಾಳ್ಪುದ ಮರೆಯದಿರು

ಹೇಳಲು ಬಾರದ
ಸುಖವನು ನೀಡುವ
ಕಲೆಗಳ ಬಯಸುವ ಓ ಸೀತೇ

ಸುಖ ಸ್ವಾತಂತ್ರ್‍ಯದ
ಗೈಮೆಯ ಫಲವನು
ಸೃಷ್ಟಿಯ ಕರ್ತನೆ ಉಣುತಿರಲಿ

ಬಂಧನ ರಹಿತದ
ನಿನ್ನೀ ಬಾಳ್ವೆಗೆ
ಸೃಷ್ಟಿಯ ಕರ್ತನ ಒಲವಿರಲಿ

ಎಂದಳು ಕಿವಿಯೊಳು
ಪ್ರೀತಿಯ ತಂಗಿಗೆ
ಸೀತೆಯ ಸೋದರಿ ಜನಕಜೆಯು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...