Home / ಕವನ / ಕವಿತೆ / ಗಂಗಜ್ಜಿ

ಗಂಗಜ್ಜಿ

ಜಾಣೆ ಗಂಗವ್ವನ ಮನೆಯ ಹೊಕ್ಕು ನೋಡು
ನೀನೊಂದು ಕ್ಷಣಕಾಲವಲ್ಲಿ ಕೂಡು
ಜ್ಞಾನಮಯದಾನಂದ ಶಾಂತಿಮಯದಾನಂದ
ತಾನೆ ತಾನಾಗಿಹುದು ಪುಣ್ಯವಂತಳ ಬೀಡು

ಕಟ್ಟಿಹಾಕು ನಿನ್ನ ಮನಸು ಒಳಗೆ, ಒಂದು
ಕೆಟ್ಟ ಯೋಚನೆ ಮಾಡದಂತೆ ಘಳಿಗೆ
ಸೊಟ್ಟಮೋರೆಯ ಮಾತು, ತಳ್ಳಿಬಳ್ಳಿಯ ಮಾತು
ಎಳ್ಳಷ್ಟು ಸೇರದು ನಮ್ಮ ಗಂಗವ್ವನಿಗೆ

ಪೂರ್ಣವಿಕಸನವಾದ ಕುಸುಮದಂತೆ, ನಮ್ಮ
ಅಜ್ಜಿ ಗಂಗವ್ವನ ಮನಸು ಅಂತೆ
ಮುಸಿ ಮುಸಿ ನಸುನಗುತ ಹಸನಾಗಿ ನುಡಿಯುವಳು
ಬಂದವರನಾದರಿಸಿ ಕುಶಲವೇ ನೀವೆಂದು

ಕರ್ಮಯೋಗವನರಿತು ಬಾಳುತಿಹಳು ಜಗದ
ಮರ್ಮಂಗಳನು ತಿಳಿದು ಸುಮ್ಮನಿಹಳು
ಕ್ಷತ್ರಿಯರ ಕುಲದವಳು ವೀರಪುತ್ರರ ಮಗಳು
ಧೈರ್‍ಯವಂತಳು ಅಜ್ಜಿ ನುರಿತವಳು ಸಾಸಿಗಳು

ಹಂಗಿನನ್ನವನುಂಬ ಪ್ರಾಣಿಯಲ್ಲಾ ನಮ್ಮ
ಗಂಗಜ್ಜಿ ವೃಥ ಕಾಲ ಕಳೆವಳಲ್ಲ
ಅತ್ತಿತ್ತ ತಿರುಗದೆ ಚಿತ್ರಕಲೆಗಳ ರಚಿಸಿ
ಉತ್ತಮರಿಗದನಿತ್ತು ಕಾಲಕಳೆಯುವಳೆಲ್ಲ

ಚೌರಿ ಕೂದಲು ತುರುಬು ಸೃಷ್ಟಿಯಂತೆ, ದಿವ್ಯ
ಪಾರಿಜಾತದ ಪುಷ್ಪವೃಕ್ಷವಂತೆ
ಸಕ್ಕರಿಯ ಸರವಂತೆ, ಮಕ್ಕಳಿಗೆ ಮೆಚ್ಚಂತೆ
ಸೂಕ್ಷ್ಮಪಾಕದಿ ಮಾಳ್ಪ ಅಚ್ಚು ಕೆಲಸಗಳಂತೆ

ಚೋರ ಕೃಷ್ಣನು ಸೀರೆ ಕದ್ದುದಂತೆ, ಅಲ್ಲಿ
ಗೋಪಿಯರು ಕೈಮುಗಿದು ನಿಂತುದಂತೆ
ಶಂಕರನ ಗುಡಿಯಂತೆ, ಪೂಜೆ ವಸ್ತುಗಳಂತೆ
ಮೈಸೂರು ಮಲ್ಲಿಗೆಯ ಹಾರಗಳ ಸೊಗಸಂತೆ

ಶೃಂಗಾರವಾಗಿಹುದು ಕೌಶಲ್ಯವು ಅಲ್ಲಿ
ಸ್ವಾಮಿ ಪೂಜೆಗಳೊಡನೆ ಪುಣ್ಯಕಥೆಯು
ಸಂಗೀತ ಸಾಹಿತ್ಯ ಚಿತ್ರ ಶಿಲ್ಪದ ಕಲೆಯು
ತುಂಬಿ ತುಳುಕುತಲಿಹುದು ಮಾತಿನೊಳು ರಸಿಕತೆಯು

ಸದ್ದು ಸಪ್ಪುಳ ಇಲ್ಲದಂತೆ ಪೋದೆ ನಮ್ಮ
ಅಜ್ಜಿ ಗಂಗವ್ವನಿಗೆ ಪ್ರೇಮವಾದೆ
ಮುದ್ದು ಸುರಿಸುತ ಅಲ್ಲಿ ನಾನೊಬ್ಬ ಮಗಳಾದೆ
ಬುದ್ಧಿವಂತಳ ಕಂಡು ಬೆಪ್ಪಾದೆ ಬೆರಗಾದೆ!

ಹಡೆದವ್ವ ದಿನದಿನಕೆ ಮರೆಯುತಿಹಳು, ನಮ್ಮ
ಗಂಗಜ್ಜಿ ಮಾಡಿದಳು ಇಂತು ಮರುಳು
ನನ್ನಮ್ಮ ಎಂದು ಬಹುಲಾಲನೆಯ ಮಾಡುವಳು
ಬಾ ಬಾರೆ ಜನಕಜೇ ಉಣ್ಣೆಂದು ಕರೆಯುವಳು
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...