Home / ಕವನ / ಕವಿತೆ / ಸೂರ್ಯ ಸುಡಲಾರ

ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ
ನನ್ನ ನಿನ್ನ ಪಾದದ ಗುರುತುಗಳು
ದಾಖಲಾಗುವುದಿಲ್ಲ ಯಾವುದೂ
ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ
ಬದುಕು ಚಲಿಸುತ್ತದೆ ಬೇರೆಯವರ
ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ.

ದಾರಿ ಯಾವುದೆಂದು ಯಾರೂ
ತಿಳಿದಿರುವದಿಲ್ಲ ಮತ್ತೆ ಒಂದು ಹಾದಿಯ
ಮೇಲೆ ಕನಸಗುಳ ಮೆರವಣಿಗೆ
ಹೋಗುತ್ತದೆ ಅದರಲ್ಲಿ ಎಲ್ಲರೂ
ಪಾಲುದಾರರಾಗುವುದಿಲ್ಲ ಯಾಕೆಂದರೆ
ಮೌನ ಚಿಗುರು ಭಾಷೆ ಅವರಿವರ ಭಾವಗಳು.

ಕೆಲವೆಂದು ಒಪ್ಪಿಕೊಂಡು ಅವರಿವರು
ಬಿಸಿಲು ಬೆಳದಿಂಗಳಲ್ಲಿ ನಡುಗೆ ಶುರುವಿಟ್ಟಿಕೊಂಡಿದ್ದಾರೆ.
ಹೊಸ ಪ್ರಭೆ ಹೊಸ ರೂಪಗಳ ರೂಹುಗಳ ಹುಡುಕಾಟ
ಒಂದೊಂದು ಸಂತೆಯಲಿ ಒಂದೊಂದು ವ್ಯಾಪಾರ
ಸಂತನಾಗುವ ತವಕ ಸೂರ್ಯೋದಯದಿಂದ
ಹುಟ್ಟಿದ ಆಶೆ ಸೂರ್ಯಾಸ್ತದವರೆಗೆ ವಿಸ್ತರಣೆ.

ಅತ್ತ ಸರಿದ ಇತ್ತ ಮಿಡಿದ ಭಾವಗಳ
ಚಿಮ್ಮಿಸುವ ಲೋಕದ ಡೊಂಕು ಎಲ್ಲ
ತೇಲಿಬಿಟ್ಟ ದೋಣಿಗೆ ದಡಸೇರುವ ಆಶೆ
ಸೂರ್ಯ ಮಾತ್ರ ಸುಡಲಾರ ಭೂಮಿಯ
ಭೂಮಿ ಮಾತ್ರ ಸುತ್ತತ್ತದೆ ಸೂರ್ಯನನ್ನು
ಈ ಸಂಬಂಧದ ಪರಿಗೆ ನಾವು ಅಚ್ಚರಿಗೊಳ್ಳಬೇಕಾಗಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...