ಅಮ್ಮನ ಪಡಿಯಚ್ಚು

ಹಸಿರು ಬಳ್ಳಿ ಛಪ್ಪರ ಕಂಡಾಗ
ನೆನಪಗುತ್ತಾಳೆ ನನಗೆ ಅಮ್ಮ
ಅವಳೇ ಕಟ್ಟಿದ್ದ ಛಪ್ಪರದ ಮೇಲೆ
ಹಾಗಲ, ಹೀರೇ, ಪಡುವಲ ಬಳ್ಳಿ
ಕುಂಬಳಕಾಯಿ ಚಳ್ಳವರೆಯ ಹಸಿರು
ಮನೆಮುಂದೆ ದಟ್ಟ ಹಸಿರು ಹಂದರ
ನೆರಳಿತ್ತು ಮನೆಯ ಹಿಂದೆ ಮುಂದೆ
ಬರೀ ಹಸಿರೇ ಹಸಿರಿತ್ತು.

ಅಮ್ಮನ ಆ ಮನೆಗೀಗ
ಸೊಸೆಯ ಆಗಮನವಾಗಿದೆ
ಮಾಡರ್ನ್ ಸೊಸೆ ಹೇಳುತ್ತಾಳೆ
“ರೀ ನನಗೆ ಶೋ ಗಿಡ ಇಷ್ಟ”
ಮಗ ಕ್ಯಾಕ್ಟಸ್, ಪಾಪಾಸು ತಂದ
ಅದಕ್ಕಿಟ್ಟ ಸಮೃದ್ಧ ನೀರು, ಗೊಬ್ಬರ
ಎಲೆಯಿಲ್ಲ, ಕಾಯಿಯಿಲ್ಲ ನೆರಳಿಲ್ಲ
ಎತ್ತರ ನೋಡಿ ಮಗ ಸಂಭ್ರಮಿಸಿದ.

ಅಮ್ಮ ನನ್ನ ತಲೆತುಂಬ ಎಣ್ಣೆ ಹಚ್ಚಿ
ಹೇನು ತೆಗೆದು, ಸೀ‌ರ್ ಒರೆದು
ನೇರ ತಲೆಮಧ್ಯೆ ಬೈತಲೆ ತೆಗೆದು
ದಿಮ್ಮನೆ ಬಿಗಿದು ಎರಡು ಜಡೆ ಮಡಿಚಿಕಟ್ಟಿ
ಮೂರು ದಿನವಾದರೂ ಹಾಳಾಗದಂತೆ
ಹೆಣೆದ ಜಡೆ ಮೇಲೆ ರಿಬ್ಬನ್ನು
ಕಟ್ಟಿದ್ದ ನನ್ನ ಅಮ್ಮ
ನನಗೀಗಲೂ ನೆನೆಪಾಗುತ್ತಾಳೆ.

ಸುಖದ ಸಮಯದಲ್ಲಿ ನಮಗೆ
ಸಾವಿರಾರು ಬಂದುಗಳು ಮಗಳೇ
ದುಃಖದಲ್ಲಿ ಯಾರೂ ಬರುವುದಿಲ್ಲ
ಇದೇ ಈ ಜಗದ ನಿಯಮ
ತಿಳಿದುಕೋ ಮುದ್ದು ಮಗಳೇ
ನಿನ್ನ ಕಾಲ ಮೇಲೆ ನೀ ನಿಂತು
ಬದುಕುವುದ ಕಲಿತುಕೋ
ಹಂಗಿನ ಅನ್ನ ತಿನ್ನಬೇಡ ಮಗಳೇ
ಎಂದು ಬುದ್ಧಿ ಹೇಳುತ್ತಿದ್ದ ಅಮ್ಮ
ನನಗೀಗಲೂ ನೆನಪಗುತ್ತಾಳೆ.

ಅಮ್ಮ ಬದುಕಿದ್ದಾಳೆ ಇಲ್ಲಿಯೇ
ನನ್ನ ಪಡಸಾಲೆಯ ಮುಂದೆಯೇ
ಅಲ್ಲಿ ನನ್ನ ಮನೆ ಮುಂದಿನ ಛಪ್ಪರದಲಿ
ನಾನು ಬೆಳೆಸಿದ್ದೆ; ಅವರೇ, ಕುಂಬಳಕಾಯಿ
ಹೀರೇ, ಹಾಗಲಕಾಯಿ-ಹಸಿರನ ಮಧ್ಯೆ
ಅಮ್ಮನ ನೆರಳಿದೆ ನೋಡು
ಅಣ್ಣ-ಅತ್ತಿಗೆಯರಿಗೆ ಇದು ಕಾಣದಿರಬಹುದು
ನನ್ನ ಮನೆ ಮುಂದಿನ ಹಂದರದಲಿ
ಹಸಿರು ಜೀವ ಚೇತನ ಕಂಡಾಗ
ನನಗೆ ಅಮ್ಮ ನೆನಪಾಗುತ್ತಾಳೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಕೇರಿಯ ಚಂದ
Next post ಕುರಿಯಮಾತು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys