Home / ಕವನ / ಕವಿತೆ / ಅಮ್ಮನ ಪಡಿಯಚ್ಚು

ಅಮ್ಮನ ಪಡಿಯಚ್ಚು

ಹಸಿರು ಬಳ್ಳಿ ಛಪ್ಪರ ಕಂಡಾಗ
ನೆನಪಗುತ್ತಾಳೆ ನನಗೆ ಅಮ್ಮ
ಅವಳೇ ಕಟ್ಟಿದ್ದ ಛಪ್ಪರದ ಮೇಲೆ
ಹಾಗಲ, ಹೀರೇ, ಪಡುವಲ ಬಳ್ಳಿ
ಕುಂಬಳಕಾಯಿ ಚಳ್ಳವರೆಯ ಹಸಿರು
ಮನೆಮುಂದೆ ದಟ್ಟ ಹಸಿರು ಹಂದರ
ನೆರಳಿತ್ತು ಮನೆಯ ಹಿಂದೆ ಮುಂದೆ
ಬರೀ ಹಸಿರೇ ಹಸಿರಿತ್ತು.

ಅಮ್ಮನ ಆ ಮನೆಗೀಗ
ಸೊಸೆಯ ಆಗಮನವಾಗಿದೆ
ಮಾಡರ್ನ್ ಸೊಸೆ ಹೇಳುತ್ತಾಳೆ
“ರೀ ನನಗೆ ಶೋ ಗಿಡ ಇಷ್ಟ”
ಮಗ ಕ್ಯಾಕ್ಟಸ್, ಪಾಪಾಸು ತಂದ
ಅದಕ್ಕಿಟ್ಟ ಸಮೃದ್ಧ ನೀರು, ಗೊಬ್ಬರ
ಎಲೆಯಿಲ್ಲ, ಕಾಯಿಯಿಲ್ಲ ನೆರಳಿಲ್ಲ
ಎತ್ತರ ನೋಡಿ ಮಗ ಸಂಭ್ರಮಿಸಿದ.

ಅಮ್ಮ ನನ್ನ ತಲೆತುಂಬ ಎಣ್ಣೆ ಹಚ್ಚಿ
ಹೇನು ತೆಗೆದು, ಸೀ‌ರ್ ಒರೆದು
ನೇರ ತಲೆಮಧ್ಯೆ ಬೈತಲೆ ತೆಗೆದು
ದಿಮ್ಮನೆ ಬಿಗಿದು ಎರಡು ಜಡೆ ಮಡಿಚಿಕಟ್ಟಿ
ಮೂರು ದಿನವಾದರೂ ಹಾಳಾಗದಂತೆ
ಹೆಣೆದ ಜಡೆ ಮೇಲೆ ರಿಬ್ಬನ್ನು
ಕಟ್ಟಿದ್ದ ನನ್ನ ಅಮ್ಮ
ನನಗೀಗಲೂ ನೆನೆಪಾಗುತ್ತಾಳೆ.

ಸುಖದ ಸಮಯದಲ್ಲಿ ನಮಗೆ
ಸಾವಿರಾರು ಬಂದುಗಳು ಮಗಳೇ
ದುಃಖದಲ್ಲಿ ಯಾರೂ ಬರುವುದಿಲ್ಲ
ಇದೇ ಈ ಜಗದ ನಿಯಮ
ತಿಳಿದುಕೋ ಮುದ್ದು ಮಗಳೇ
ನಿನ್ನ ಕಾಲ ಮೇಲೆ ನೀ ನಿಂತು
ಬದುಕುವುದ ಕಲಿತುಕೋ
ಹಂಗಿನ ಅನ್ನ ತಿನ್ನಬೇಡ ಮಗಳೇ
ಎಂದು ಬುದ್ಧಿ ಹೇಳುತ್ತಿದ್ದ ಅಮ್ಮ
ನನಗೀಗಲೂ ನೆನಪಗುತ್ತಾಳೆ.

ಅಮ್ಮ ಬದುಕಿದ್ದಾಳೆ ಇಲ್ಲಿಯೇ
ನನ್ನ ಪಡಸಾಲೆಯ ಮುಂದೆಯೇ
ಅಲ್ಲಿ ನನ್ನ ಮನೆ ಮುಂದಿನ ಛಪ್ಪರದಲಿ
ನಾನು ಬೆಳೆಸಿದ್ದೆ; ಅವರೇ, ಕುಂಬಳಕಾಯಿ
ಹೀರೇ, ಹಾಗಲಕಾಯಿ-ಹಸಿರನ ಮಧ್ಯೆ
ಅಮ್ಮನ ನೆರಳಿದೆ ನೋಡು
ಅಣ್ಣ-ಅತ್ತಿಗೆಯರಿಗೆ ಇದು ಕಾಣದಿರಬಹುದು
ನನ್ನ ಮನೆ ಮುಂದಿನ ಹಂದರದಲಿ
ಹಸಿರು ಜೀವ ಚೇತನ ಕಂಡಾಗ
ನನಗೆ ಅಮ್ಮ ನೆನಪಾಗುತ್ತಾಳೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...