Home / ಕವನ / ಕವಿತೆ / ಅಮ್ಮನ ಪಡಿಯಚ್ಚು

ಅಮ್ಮನ ಪಡಿಯಚ್ಚು

ಹಸಿರು ಬಳ್ಳಿ ಛಪ್ಪರ ಕಂಡಾಗ
ನೆನಪಗುತ್ತಾಳೆ ನನಗೆ ಅಮ್ಮ
ಅವಳೇ ಕಟ್ಟಿದ್ದ ಛಪ್ಪರದ ಮೇಲೆ
ಹಾಗಲ, ಹೀರೇ, ಪಡುವಲ ಬಳ್ಳಿ
ಕುಂಬಳಕಾಯಿ ಚಳ್ಳವರೆಯ ಹಸಿರು
ಮನೆಮುಂದೆ ದಟ್ಟ ಹಸಿರು ಹಂದರ
ನೆರಳಿತ್ತು ಮನೆಯ ಹಿಂದೆ ಮುಂದೆ
ಬರೀ ಹಸಿರೇ ಹಸಿರಿತ್ತು.

ಅಮ್ಮನ ಆ ಮನೆಗೀಗ
ಸೊಸೆಯ ಆಗಮನವಾಗಿದೆ
ಮಾಡರ್ನ್ ಸೊಸೆ ಹೇಳುತ್ತಾಳೆ
“ರೀ ನನಗೆ ಶೋ ಗಿಡ ಇಷ್ಟ”
ಮಗ ಕ್ಯಾಕ್ಟಸ್, ಪಾಪಾಸು ತಂದ
ಅದಕ್ಕಿಟ್ಟ ಸಮೃದ್ಧ ನೀರು, ಗೊಬ್ಬರ
ಎಲೆಯಿಲ್ಲ, ಕಾಯಿಯಿಲ್ಲ ನೆರಳಿಲ್ಲ
ಎತ್ತರ ನೋಡಿ ಮಗ ಸಂಭ್ರಮಿಸಿದ.

ಅಮ್ಮ ನನ್ನ ತಲೆತುಂಬ ಎಣ್ಣೆ ಹಚ್ಚಿ
ಹೇನು ತೆಗೆದು, ಸೀ‌ರ್ ಒರೆದು
ನೇರ ತಲೆಮಧ್ಯೆ ಬೈತಲೆ ತೆಗೆದು
ದಿಮ್ಮನೆ ಬಿಗಿದು ಎರಡು ಜಡೆ ಮಡಿಚಿಕಟ್ಟಿ
ಮೂರು ದಿನವಾದರೂ ಹಾಳಾಗದಂತೆ
ಹೆಣೆದ ಜಡೆ ಮೇಲೆ ರಿಬ್ಬನ್ನು
ಕಟ್ಟಿದ್ದ ನನ್ನ ಅಮ್ಮ
ನನಗೀಗಲೂ ನೆನೆಪಾಗುತ್ತಾಳೆ.

ಸುಖದ ಸಮಯದಲ್ಲಿ ನಮಗೆ
ಸಾವಿರಾರು ಬಂದುಗಳು ಮಗಳೇ
ದುಃಖದಲ್ಲಿ ಯಾರೂ ಬರುವುದಿಲ್ಲ
ಇದೇ ಈ ಜಗದ ನಿಯಮ
ತಿಳಿದುಕೋ ಮುದ್ದು ಮಗಳೇ
ನಿನ್ನ ಕಾಲ ಮೇಲೆ ನೀ ನಿಂತು
ಬದುಕುವುದ ಕಲಿತುಕೋ
ಹಂಗಿನ ಅನ್ನ ತಿನ್ನಬೇಡ ಮಗಳೇ
ಎಂದು ಬುದ್ಧಿ ಹೇಳುತ್ತಿದ್ದ ಅಮ್ಮ
ನನಗೀಗಲೂ ನೆನಪಗುತ್ತಾಳೆ.

ಅಮ್ಮ ಬದುಕಿದ್ದಾಳೆ ಇಲ್ಲಿಯೇ
ನನ್ನ ಪಡಸಾಲೆಯ ಮುಂದೆಯೇ
ಅಲ್ಲಿ ನನ್ನ ಮನೆ ಮುಂದಿನ ಛಪ್ಪರದಲಿ
ನಾನು ಬೆಳೆಸಿದ್ದೆ; ಅವರೇ, ಕುಂಬಳಕಾಯಿ
ಹೀರೇ, ಹಾಗಲಕಾಯಿ-ಹಸಿರನ ಮಧ್ಯೆ
ಅಮ್ಮನ ನೆರಳಿದೆ ನೋಡು
ಅಣ್ಣ-ಅತ್ತಿಗೆಯರಿಗೆ ಇದು ಕಾಣದಿರಬಹುದು
ನನ್ನ ಮನೆ ಮುಂದಿನ ಹಂದರದಲಿ
ಹಸಿರು ಜೀವ ಚೇತನ ಕಂಡಾಗ
ನನಗೆ ಅಮ್ಮ ನೆನಪಾಗುತ್ತಾಳೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...