ಕೋಳಿ

ಒಂದು ಕಾಲವಿತ್ತು
ಆಗ ನನ್ನ ಕೂಗಿನಿಂದಲೇ
ಬೆಳಗಾಗುತ್ತಿತ್ತು
ಮುಂಜಾನೆಗೆ ಹೆಸರೇ ಇತ್ತು
“ಕೋಳಿ ಕೂಗೋ ಹೊತ್ತು” ಎಂದು.
ನಾನು ಕೂಡ ಸುಂದರ
ಬಾತುಗಳಂತೆ
ರಾಜ ಹಂಸಗಳಂತೆ.
ನನಗೂ ಮೋಹಕ ನಡಿಗೆ ಇತ್ತು
ದೊಡ್ಡ ಸಂಸಾರವಿತ್ತು
ನನ್ನ ಮರಿಗಳೊಂದಿಗೆ
ಹೋಗುತ್ತಿದ್ದರೆ ನಾನು
ಕಿರಿಯರಿಗೆ ಆಟ, ಚಲ್ಲಾಟ
ಹಿರಿಯರಿಗೆ ಒಳ್ಳೆಯ ನೋಟ
ನಾನು ಒಂದು ಹಕ್ಕಿಯಾಗಿದ್ದೆ
ಅಲ್ಪ ಸ್ವಲ್ಪ ಹಾರುತ್ತಿದ್ದೆ.
ಈಗ ಆ ಕಾಲ ಹೋಯಿತು
ಜನ ನಮ್ಮನ್ನು
ಸಾಕತೊಡಗಿದರು
ನಮ್ಮಮೊಟ್ಟೆಗಾಗಿ
ತಮ್ಮ ಹೊಟ್ಟೆಗಾಗಿ
ನಮ್ಮಮೊಟ್ಟೆಗಳ ತಿಂದು ತೇಗಿ
ನಮ್ಮನ್ನೇ ಕೊಂದು ತಿಂದರು!
ಬಾಯಿ ಚಪ್ಪರಿಸಿದರು
ನಮ್ಮ ಮೊಟ್ಟೆ-ಮಾಂಸಗಳಿಗೆ,
ಪ್ರೀತಿ ಇಲ್ಲದೆ ಬೆಳೆಸಿ
ಕರುಣೆ ಇಲ್ಲದೆ ಸಾಯಿಸಿ
ಕೋಳಿ ಸಾಕಣೆ ಒಂದು
ಉದ್ಯಮ ಮಾಡಿದರು!
ಈಗ ಹಾರುವುದಿರಲಿ,
ನಡೆಯುವಂತೆಯೂ ಇಲ್ಲ.
ಇತರ ಎಲ್ಲ ಪ್ರಾಣಿಗಳಂತೆ,
ಮನುಷ್ಯರಂತೆ ನಾವು ಕೂಡ
ಪ್ರಕೃತಿ ದೇವಿಯ ಮಕ್ಕಳು
ಎಂದರೆ ಕೇಳುವರಾರು?
ನಾವೀಗ ಒಂದು ಸರಕು
“ಕೋಳಿ ಫಾರಂ” ಎಂಬ ಕಾರ್ಖಾನೆಯಲ್ಲಿ
ನಮ್ಮನ್ನು ಉತ್ಪಾದಿಸುತ್ತಾರೆ
ತೂಗಿ ತಕ್ಕಡಿಯಲ್ಲಿ ಮಾರುತ್ತಾರೆ
ಸೈಕಲ್ಲುಗಳಲ್ಲಿ ಕಟ್ಟಿ ಸಾಗಿಸುತ್ತಾರೆ
ಕೊಂದು, ಬೇಯಿಸಿ, ಖಾರ ಎರೆದು ತಿನ್ನುತ್ತಾರೆ
ನಾವು ಜೀವಿಗಳೆಂಬುದ ಮರೆಯುತ್ತಾರೆ!
*****
೨೧-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೇಖಕ ಮತ್ತು ಓದುಗ
Next post ಭಾರತೀಯ

ಸಣ್ಣ ಕತೆ

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…