Home / ಕವನ / ಕವಿತೆ / ಕೋಳಿ

ಕೋಳಿ

ಒಂದು ಕಾಲವಿತ್ತು
ಆಗ ನನ್ನ ಕೂಗಿನಿಂದಲೇ
ಬೆಳಗಾಗುತ್ತಿತ್ತು
ಮುಂಜಾನೆಗೆ ಹೆಸರೇ ಇತ್ತು
“ಕೋಳಿ ಕೂಗೋ ಹೊತ್ತು” ಎಂದು.
ನಾನು ಕೂಡ ಸುಂದರ
ಬಾತುಗಳಂತೆ
ರಾಜ ಹಂಸಗಳಂತೆ.
ನನಗೂ ಮೋಹಕ ನಡಿಗೆ ಇತ್ತು
ದೊಡ್ಡ ಸಂಸಾರವಿತ್ತು
ನನ್ನ ಮರಿಗಳೊಂದಿಗೆ
ಹೋಗುತ್ತಿದ್ದರೆ ನಾನು
ಕಿರಿಯರಿಗೆ ಆಟ, ಚಲ್ಲಾಟ
ಹಿರಿಯರಿಗೆ ಒಳ್ಳೆಯ ನೋಟ
ನಾನು ಒಂದು ಹಕ್ಕಿಯಾಗಿದ್ದೆ
ಅಲ್ಪ ಸ್ವಲ್ಪ ಹಾರುತ್ತಿದ್ದೆ.
ಈಗ ಆ ಕಾಲ ಹೋಯಿತು
ಜನ ನಮ್ಮನ್ನು
ಸಾಕತೊಡಗಿದರು
ನಮ್ಮಮೊಟ್ಟೆಗಾಗಿ
ತಮ್ಮ ಹೊಟ್ಟೆಗಾಗಿ
ನಮ್ಮಮೊಟ್ಟೆಗಳ ತಿಂದು ತೇಗಿ
ನಮ್ಮನ್ನೇ ಕೊಂದು ತಿಂದರು!
ಬಾಯಿ ಚಪ್ಪರಿಸಿದರು
ನಮ್ಮ ಮೊಟ್ಟೆ-ಮಾಂಸಗಳಿಗೆ,
ಪ್ರೀತಿ ಇಲ್ಲದೆ ಬೆಳೆಸಿ
ಕರುಣೆ ಇಲ್ಲದೆ ಸಾಯಿಸಿ
ಕೋಳಿ ಸಾಕಣೆ ಒಂದು
ಉದ್ಯಮ ಮಾಡಿದರು!
ಈಗ ಹಾರುವುದಿರಲಿ,
ನಡೆಯುವಂತೆಯೂ ಇಲ್ಲ.
ಇತರ ಎಲ್ಲ ಪ್ರಾಣಿಗಳಂತೆ,
ಮನುಷ್ಯರಂತೆ ನಾವು ಕೂಡ
ಪ್ರಕೃತಿ ದೇವಿಯ ಮಕ್ಕಳು
ಎಂದರೆ ಕೇಳುವರಾರು?
ನಾವೀಗ ಒಂದು ಸರಕು
“ಕೋಳಿ ಫಾರಂ” ಎಂಬ ಕಾರ್ಖಾನೆಯಲ್ಲಿ
ನಮ್ಮನ್ನು ಉತ್ಪಾದಿಸುತ್ತಾರೆ
ತೂಗಿ ತಕ್ಕಡಿಯಲ್ಲಿ ಮಾರುತ್ತಾರೆ
ಸೈಕಲ್ಲುಗಳಲ್ಲಿ ಕಟ್ಟಿ ಸಾಗಿಸುತ್ತಾರೆ
ಕೊಂದು, ಬೇಯಿಸಿ, ಖಾರ ಎರೆದು ತಿನ್ನುತ್ತಾರೆ
ನಾವು ಜೀವಿಗಳೆಂಬುದ ಮರೆಯುತ್ತಾರೆ!
*****
೨೧-೦೬-೧೯೯೨

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...