Home / ಕವನ / ಕವಿತೆ / ಕೋಳಿ

ಕೋಳಿ

ಒಂದು ಕಾಲವಿತ್ತು
ಆಗ ನನ್ನ ಕೂಗಿನಿಂದಲೇ
ಬೆಳಗಾಗುತ್ತಿತ್ತು
ಮುಂಜಾನೆಗೆ ಹೆಸರೇ ಇತ್ತು
“ಕೋಳಿ ಕೂಗೋ ಹೊತ್ತು” ಎಂದು.
ನಾನು ಕೂಡ ಸುಂದರ
ಬಾತುಗಳಂತೆ
ರಾಜ ಹಂಸಗಳಂತೆ.
ನನಗೂ ಮೋಹಕ ನಡಿಗೆ ಇತ್ತು
ದೊಡ್ಡ ಸಂಸಾರವಿತ್ತು
ನನ್ನ ಮರಿಗಳೊಂದಿಗೆ
ಹೋಗುತ್ತಿದ್ದರೆ ನಾನು
ಕಿರಿಯರಿಗೆ ಆಟ, ಚಲ್ಲಾಟ
ಹಿರಿಯರಿಗೆ ಒಳ್ಳೆಯ ನೋಟ
ನಾನು ಒಂದು ಹಕ್ಕಿಯಾಗಿದ್ದೆ
ಅಲ್ಪ ಸ್ವಲ್ಪ ಹಾರುತ್ತಿದ್ದೆ.
ಈಗ ಆ ಕಾಲ ಹೋಯಿತು
ಜನ ನಮ್ಮನ್ನು
ಸಾಕತೊಡಗಿದರು
ನಮ್ಮಮೊಟ್ಟೆಗಾಗಿ
ತಮ್ಮ ಹೊಟ್ಟೆಗಾಗಿ
ನಮ್ಮಮೊಟ್ಟೆಗಳ ತಿಂದು ತೇಗಿ
ನಮ್ಮನ್ನೇ ಕೊಂದು ತಿಂದರು!
ಬಾಯಿ ಚಪ್ಪರಿಸಿದರು
ನಮ್ಮ ಮೊಟ್ಟೆ-ಮಾಂಸಗಳಿಗೆ,
ಪ್ರೀತಿ ಇಲ್ಲದೆ ಬೆಳೆಸಿ
ಕರುಣೆ ಇಲ್ಲದೆ ಸಾಯಿಸಿ
ಕೋಳಿ ಸಾಕಣೆ ಒಂದು
ಉದ್ಯಮ ಮಾಡಿದರು!
ಈಗ ಹಾರುವುದಿರಲಿ,
ನಡೆಯುವಂತೆಯೂ ಇಲ್ಲ.
ಇತರ ಎಲ್ಲ ಪ್ರಾಣಿಗಳಂತೆ,
ಮನುಷ್ಯರಂತೆ ನಾವು ಕೂಡ
ಪ್ರಕೃತಿ ದೇವಿಯ ಮಕ್ಕಳು
ಎಂದರೆ ಕೇಳುವರಾರು?
ನಾವೀಗ ಒಂದು ಸರಕು
“ಕೋಳಿ ಫಾರಂ” ಎಂಬ ಕಾರ್ಖಾನೆಯಲ್ಲಿ
ನಮ್ಮನ್ನು ಉತ್ಪಾದಿಸುತ್ತಾರೆ
ತೂಗಿ ತಕ್ಕಡಿಯಲ್ಲಿ ಮಾರುತ್ತಾರೆ
ಸೈಕಲ್ಲುಗಳಲ್ಲಿ ಕಟ್ಟಿ ಸಾಗಿಸುತ್ತಾರೆ
ಕೊಂದು, ಬೇಯಿಸಿ, ಖಾರ ಎರೆದು ತಿನ್ನುತ್ತಾರೆ
ನಾವು ಜೀವಿಗಳೆಂಬುದ ಮರೆಯುತ್ತಾರೆ!
*****
೨೧-೦೬-೧೯೯೨

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...