ರಾತ್ರಿಯಲ್ಲಿ ಹೆಜ್ಜೆ ಸದ್ದು

ಯಾವಾಗಲೂ ಹೆಜ್ಜೆಸದ್ದು
ಯಾವಾಗಲೂ
ರಾತ್ರಿಯ ಹೊತ್ತು ಹೆಜ್ಜೆ ಸದ್ದು
ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ,
ಯಾವಾಗಲೋ ತೆರೆದುಕೊಂಡು ಬಿಡುತ್ತದೆ
ನಿನ್ನನೀಲಿ ನೆರಳನ್ನು ದಿನವೂ ರಾತ್ರಿ
ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು?
ಹೆಜ್ಜೆಗಳು ಹತ್ತಿರ ಬರುತ್ತವೆ.
ನಿನ್ನ ಕಣ್ಣೇ ದೇಶ
ನಿನ್ನ ತೋಳೇ ನನ್ನಸುತ್ತುವರೆದ ಕೋಟೆ ಗೋಡೆ.
ಹೆಜ್ಜೆಗಳು ಬರುತ್ತವೆ.
ಯಾಕೆ ಯಾವಾಗಲೂ
ನಾನು ಓಡುವಂತೆಯೇ ಕನಸು ಚಿತ್ರಿಸುತ್ತದೆ
ಓ ಶಹರ್ ಝಾದ?

ಹೆಜ್ಜೆಗಳು ಹತ್ತಿರ ಬರುತ್ತವೆ,
ಒಳಗೆ ಬರುವುದಿಲ್ಲ.
ನಾನು ನಿನ್ನ ನೆರಳು ನೋಡಬಲ್ಲಂಥ
ಮರವಾಗು.
ನಾನು ನಿನ್ನ ನೆರಳು ನೋಡಬಲ್ಲಂಥ
ಚಂದ್ರನಾಗು.
ಬೂದಿಯಲ್ಲಿರುವ ಗುಲಾಬಿಯಂಥ ನನ್ನ ನೆರಳಲ್ಲಿ
ನಿನ್ನ ನೆರಳು ಕಾಣಬಲ್ಲಂಥ
ಕಠಾರಿಯಾಗು.
ಯಾವಾಗಲೂ ರಾತ್ರಿಯ ಹೂತ್ತು ಹೆಜ್ಜೆ ಸದ್ದು.
ನಾನು ಅವಿತಿಟ್ಟುಕೊಳ್ಳಬಲ್ಲಂಥ ಪರದೇಶವಾಗು.
ನನ್ನ ಸೆರೆಮನೆಯಾಗು.
ಒಂದೇ ಬಾರಿಗೆ ನನ್ನ ಕೊಂದುಬಿಡು.
ಹತ್ತಿರ ಹತ್ತಿರ ಬರುವ ಹೆಜ್ಜೆ ಸದ್ದಿನಲ್ಲಿ
ಹೀಗೆ ನನ್ನ ಕೊಲ್ಲಬೇಡ.
*****
ಮೂಲ: ಮಹಮೂದ್ ದರ್‍ವೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುತ್ತರಿ ಹಾಡು
Next post ಅಮರ ಕಲಾವಿದ ಸಪ್ದರ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…