ರಾತ್ರಿಯಲ್ಲಿ ಹೆಜ್ಜೆ ಸದ್ದು

ಯಾವಾಗಲೂ ಹೆಜ್ಜೆಸದ್ದು
ಯಾವಾಗಲೂ
ರಾತ್ರಿಯ ಹೊತ್ತು ಹೆಜ್ಜೆ ಸದ್ದು
ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ,
ಯಾವಾಗಲೋ ತೆರೆದುಕೊಂಡು ಬಿಡುತ್ತದೆ
ನಿನ್ನನೀಲಿ ನೆರಳನ್ನು ದಿನವೂ ರಾತ್ರಿ
ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು?
ಹೆಜ್ಜೆಗಳು ಹತ್ತಿರ ಬರುತ್ತವೆ.
ನಿನ್ನ ಕಣ್ಣೇ ದೇಶ
ನಿನ್ನ ತೋಳೇ ನನ್ನಸುತ್ತುವರೆದ ಕೋಟೆ ಗೋಡೆ.
ಹೆಜ್ಜೆಗಳು ಬರುತ್ತವೆ.
ಯಾಕೆ ಯಾವಾಗಲೂ
ನಾನು ಓಡುವಂತೆಯೇ ಕನಸು ಚಿತ್ರಿಸುತ್ತದೆ
ಓ ಶಹರ್ ಝಾದ?

ಹೆಜ್ಜೆಗಳು ಹತ್ತಿರ ಬರುತ್ತವೆ,
ಒಳಗೆ ಬರುವುದಿಲ್ಲ.
ನಾನು ನಿನ್ನ ನೆರಳು ನೋಡಬಲ್ಲಂಥ
ಮರವಾಗು.
ನಾನು ನಿನ್ನ ನೆರಳು ನೋಡಬಲ್ಲಂಥ
ಚಂದ್ರನಾಗು.
ಬೂದಿಯಲ್ಲಿರುವ ಗುಲಾಬಿಯಂಥ ನನ್ನ ನೆರಳಲ್ಲಿ
ನಿನ್ನ ನೆರಳು ಕಾಣಬಲ್ಲಂಥ
ಕಠಾರಿಯಾಗು.
ಯಾವಾಗಲೂ ರಾತ್ರಿಯ ಹೂತ್ತು ಹೆಜ್ಜೆ ಸದ್ದು.
ನಾನು ಅವಿತಿಟ್ಟುಕೊಳ್ಳಬಲ್ಲಂಥ ಪರದೇಶವಾಗು.
ನನ್ನ ಸೆರೆಮನೆಯಾಗು.
ಒಂದೇ ಬಾರಿಗೆ ನನ್ನ ಕೊಂದುಬಿಡು.
ಹತ್ತಿರ ಹತ್ತಿರ ಬರುವ ಹೆಜ್ಜೆ ಸದ್ದಿನಲ್ಲಿ
ಹೀಗೆ ನನ್ನ ಕೊಲ್ಲಬೇಡ.
*****
ಮೂಲ: ಮಹಮೂದ್ ದರ್‍ವೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುತ್ತರಿ ಹಾಡು
Next post ಅಮರ ಕಲಾವಿದ ಸಪ್ದರ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…