Home / ಕವನ / ಕವಿತೆ / ಅಸ್ಪೃಶ್ಯರು

ಅಸ್ಪೃಶ್ಯರು

ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು
ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು?
ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ
ಮೌನ ಅಸಹ್ಯವಾದಾಗ ಮಾತಾಡುತ್ತೇವೆ
ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ

ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರಿ ನೀವು
ನಾಯಿಗಳಿದ್ದಾವೆ ಸ್ವಾಮಿ ಗೊತ್ತು ನಮಗೆ
ನಿಮ್ಮ ನಾಯಿಗಳಿದ್ದಾವೆ ಕಾರುಗಳಿದ್ದಾವೆ
ಪೋಷ್ ಹೊಟೇಲುಗಳಿವೆ ಕ್ಯಾಬರೆಸ್ವರ್ಗದ ದೇವರು ನೀವು
ಈಚೆಗೆ ಬೀದಿಗಳಲ್ಲಿ ನಾವೂ ಇದ್ದೇವೆ ಅಸ್ಪೃಶ್ಯ ವರ್ಗದ ಜನರು

ಅಪರಿಚಿತರಂತೆ ನೋಡುವುದೇಕೆ, ಸ್ವಾಮಿ?
ನಮಗೆ ಬಹು ಹಳೆಕಾಲದ ಪರಿಚಯವುಂಟು ಮರೆತಿರ?
ಹಿಂದೆ ಬ್ಯಾಬಿಲೋನಿನಲ್ಲಿ ನಿಮ್ಮ ಗಾಣ
ಎಳೆದವರು ನಾವು
ಮಾರುಕಟ್ಟೆಗಳಲ್ಲಿ ನಮ್ಮನ್ನು ಹರಾಜಿಗೆ
ಮಾರಿದವರು ನೀವು
ನಿಮ್ಮ ಊಳಿಗದ ಗೂನು ಈ ಬೆನ್ನ ಮೇಲುಂಟು
ನಮ್ಮ ಮಕ್ಕಳಿಗೂ ಇದರ ಹೆದರಿಕೆಯುಂಟು

ಸಂಧಾನಗಕ್ಕಾಗಿ ನೀವು ಬಂದದ್ದೇನೋ ಖರೆ
ಆದರೆ ಹೇಗೆ ಮಾತಾಡಿದರೂ
ನಮ್ಮ ಭಾಷೆ ನಿಮಗೆ ಅರ್ಥವಾಗುವುದಿಲ್ಲ
ಹಾಗೆಂದು ನಿಮ್ಮ ಅಂಬೋಣ
ಎನು ಮಾಡೋಣ, ಹೇಳಿ
ನೀವು ಪ್ರಯತ್ನಿಸದೇನೆ, ನಿಮಗಿಷ್ಟವಿಲ್ಲದೇನೆ
ಅರ್ಥವಾದೀತು ಎಂದಾದರೂ ಒಮ್ಮೆ

ಇಷ್ಟಕ್ಕೆಲ್ಲಾ ಯಾಕೆ ಹೀಗೆ ಹಿಸ್ಟೀರಿಯಾ ಬಡಿದವರಂತೆ ಕೂಗುತ್ತೀರಿ?
ಸಾಹಿತ್ಯ ಸಂಸ್ಕಾರ ಸಂಪತ್ತು ಅಧಿಕಾರ ಎಲ್ಲವೂ ನಿಮ್ಮದೇ ಸ್ವತ್ತು
ಎಂದ ಮೇಲೆ ಯಾಕೆ ಹೀಗೆ ಕೂಗಾಡುತ್ತೀರಿ?
ಕ್ರಾಂತಿಗಳು ಬಂದಿವೆ ನಿಜ
ಬಂದು ಹೊರಟುಹೋಗಿವೆ
ಅವು ಹೊರಟುಹೋದ್ದರಿಂದಲೇ ನಿಮ್ಮ ಪೀಳಿಗೆ ಬೆಳೆದಿದೆ
ಬೆಳೆಯುತ್ತಲೇ ಇದೆ
ಎಂದ ಮೇಲೆ ಸುಮ್ಮನೆ ಯಾಕೆ ಹೀಗೆ ಒದ್ದಾಡುತ್ತೀರಿ?

ಯಾಕೆಂದರೆ, ಚರಿತ್ರೆ ಆವರ್ತಿಸುವುದಿಲ್ಲ
ವರ್ತಮಾನ ಹೀಗೇ ನಿಂತಿರುವುದಿಲ್ಲ
ಏನೋ ಸಂಭವಿಸಲಿದೆ-ಎಂದೆ?
ಇದು ನಮಗೆ ಗೊತ್ತು
ನಮಗೆ ಗೊತ್ತೆಂದು ತಿಳಿದದ್ದರಿಂದಲೆ
ನಮ್ಮ ಕಂಡಾಗ ನಿಮ್ಮ ಮುಖಕ್ಕೊಂದು ಅಪೂರ್ವ
ಪ್ರೇತಕಳೆ ಬರುತ್ತದೆ: ಇದು ಸಹಜ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...