Home / ಕವನ / ಕವಿತೆ / ಅಧೋಗತಿಗೆ ಕನ್ನಡ

ಅಧೋಗತಿಗೆ ಕನ್ನಡ

ಕನ್ನಡ ನಾಡಿನ ರಸಿಕ ಜನಗಳೆ
ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ
ನೀವು ಓ ಕನ್ನಡ ಬಂಧುಗಳೆ?

ಕನ್ನಡಮ್ಮನ ಸ್ಥಿತಿ ಅದೋಗತಿಗೆ
ಯಾರು ಕಾರಣಕರ್ತರು ನೀವು ಬಲ್ಲಿರೋ
ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್
ಬಳಸಿಕೊಂಡು ಸ್ವಾರ್ಥ ಜೀವನಕ್ಕೆ
ಒಳಿತು ಬಯಸಿ ಕನ್ನಡಮ್ಮಗೆ
ಕೇಡು ಬಯಸಿ ಸಾಹಿತ್ಯ ಪರಿಷತ್ತಿಗೆ
ಮೋಸದಿಂದ ದ್ರೋಹ ಬಗೆಯುವ
ಜನ ಕನ್ನಡಮ್ಮನ ರಕ್ಷಕರೆ?

ಕನ್ನಡಮ್ಮನ ಹೆಸರು ಪ್ರತಿಷ್ಟೆಗೆ
ಸಮ್ಮೇಳನ ನಿರ್ವಹಿಸುವ ನೆಪ
ಸುರಿಮಳೆಯಂತೆ ಸುರಿದು ಬಂದ ಹಣ
ಯಾವ ಕಡೆ ನೋಡಿದರು ಸ್ಥಿತಿ ಗಂಭೀರ
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ ಕ್ಷಿಮಾರಿ
ಅವನಿಯ ಮೇಲೆ ಅಕನ್ನಡಿಗರ
ಭಾರವ ಮಡುಗಟ್ಟಿ ನಿಂತಿದೆ ಓ
ಕನ್ನಡಿಗರೆ ನೀ ಯಾರು ಬಲ್ಲಿರೋ

ಸಾಹಿತ್ಯ ಪರಿಷತ ಚುನಾವಣೆ
ಕನ್ನಡಮ್ಮನ ಕೊಲೆಗಡುಕರೆ ಕಣದಲ್ಲಿ
ಅಧ್ಯಕ್ಷ ಸ್ಥಾನಕ್ಕೆ ಹಗಲಿರುಳು ಯತ್ನ
ಪರಿಸ್ಥಿತಿ ಮತದಾರರೇ ನಿರ್ಧಾರ
ಭೃಷ್ಟ ಕನ್ನಡಾಭಿಮಾನಿಗೆ ತೊರೆದು
ಶಿಷ್ಟ ಕನ್ನಡಾಭಿಮಾನಿಗೆ ಮತನೀಡಿ ಬೆಂಬಲಿಸಿ
ಜಯಕ್ಕೆ ಯತ್ನಿಸಿ ಓ ಮತದಾರ ಬಂಧುವೇ
ನಿಮಗೆ ನನ್ನ ಅನಂತ ವಂದನೆಗಳು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...