Home / ಕವನ / ಕವಿತೆ / ಪ್ರಿಜಂ

ಪ್ರಿಜಂ

ಕವಿಯ ಕಣ್ಣೊಂದು ಪ್ರಿಜಂ
ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ
ಹಿಡಿದಂತೆ ವಿಚಿತ್ರ ರಾವುಗನ್ನಡಿ
ಕಪ್ಪು ಬಿಳುಪುಗಳ ಚಿತ್ರಗಳಿಗೆ
ಮೂಡುವವೋ ಕೊಂಬುಬಾಲ
ಕೋರೆ ಹಲ್ಲುಗಳು
ಬಣ್ಣ ಬಣ್ಣ ಮುಖವಾಡಗಳು
ವೇಷಭೂಷಣಗಳು
ಸರಳ ರೇಖೆಯೊಳಗಿಂದ
ಹಾಯುವ ಬಿಳಿಕಿರಣಗಳು
ವಕ್ರೀಭವಿಸಿ ಆಗುವವು
ವರ್ಣ ಕಿರಣಗಳು
ನೆಲದೊಳಗಿನ ನೀರು ಕುಡಿದ ಹಕ್ಕಿ
ಹಾರುವುದು ಮೇಲೆ
ನಂದನಗಳ ಹುಡುಕಿ
ಅಂತರದಲ್ಲೇ ಗೂಡು ಕಟ್ಟಿ
ಮೊಟ್ಟೆಗಳನಿಟ್ಟು
ಕಾವು ಕೊಡುವುದು
ಒಂದೊಂದೇ ಬಣ್ಣಬಣ್ಣದ ಎಳೆಮರಿಗಳು
ಹೊರಬರುವುದ ನೋಡುತ್ತ
ಕೇಳಿ ಅರಿಯದ ಕಂಡು ಅರಿಯದ ವಸ್ತುಗಳು
ಎಂದೂ ಮೂಸಿ ನೋಡದ
ಸವಿನೋಡದ ಹೂವು ಹಣ್ಣುಗಳು
ತೇಲಾಡುವ ರಂಗು ರಂಗಿನ
ಹದಿಹರೆಯದ ಚೆಲುವೆಯರು
ಆಧಾರವಿಲ್ಲದೆ ನಿಂತ
ಕಂಬಗಳು ಬೋದಿಗೆಗಳು
ಅವುಗಳ ಮೇಲೆ ಮಹಲು ಗೋಪುರಗಳು
ಸುಗಂಧವೇ ಬೀಸುವ ತಂಗಾಳಿ
ನಿರಾಕಾರದಾಕೃತಿಗಳ ಒಯ್ಯಾರ ವೈಹಾಳಿ
ಲೋಕದಲ್ಲಿ ಬೆರಗಿನಲಿ ಮೋಡಿ ಓಡಾಡಿ
ಮತ್ತೆ ಕಣ್ಣು ತೆರೆದಾಗ ಒಡೆವುದು ಪ್ರಿಜಂ
ಕಣ್ಣು ಕುಕ್ಕುವ ಕಪ್ಪು ಬಿಳುಪಿನ ಕರಾಳ ಜಗತ್ತು
ಚುಚ್ಚುವ ವಾಸ್ತವ ಮುಳ್ಳುಗಳು
ಹೃದಯ ಹಿಂಡಿ ಕೆಳಗೆ ಬಿಡುವ ಹನಿಹನಿಗಳು
ಗಾಯಗಳಿಂದ ಇಳಿಯುವ ನೆತ್ತರ ಹನಿಗಳು
ಮತ್ತೆ ಅದೇ ಅದೇ ರಿಯಾಲಿಜಂ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...