Home / ಕವನ / ಕವಿತೆ / ಗಾಂಧಿ

ಗಾಂಧಿ

ಮೋಹನದಾಸ ಕರಮಚಂದ್ ಗಾಂಧೀ ನೀನೇ
ಭಾರತ ದೇಶದ ತಂದೀ
ಗುಜರಾತಿನ ಪೋರ್ಬಂದರಿನಲಿ ಹುಟ್ಟಿಬಂದಿ
ಜಗದಗಲ ಮುಗಿಲಗಲ ಬೆಳೆದು ವ್ಯಾಪಿಸಿ ನಿಂದಿ

ನಮ್ಮಂತೆ ಸಾಮಾನ್ಯನಾಗಿಯೆ ಹುಟ್ಟಿದಿ
ಜಗಕೆಲ್ಲ ಸನ್ಮಾನ್ಯ ಮಹಾತ್ಮನೆನಿಸಿದಿ
ಬುದ್ಧ ಏಸುವಿನಂತೆ ಪೈಗಂಬರನಂತೆ
ಮಾನವ ಕುಲಕೆಲ್ಲ ಕುಲದೀಪ ನೀನಾದಿ

ಯುಗಕೊಮ್ಮೆ ಮೂಡುವ ಜನಮನದಾದರ್ಶ
ಯುಗದ ಅಚ್ಚರಿ ನೀನು ನವಯುಗದ ಕರ್ತ
ಕೆಳಗೆ ಬಿದ್ದವರನು ದೀನ ದಲಿತರನ್ನು
ತಬ್ಬಿ ಮೇಲೆತ್ತಲು ಬಂದೆಯೊ ತಾತ

ನಿನ್ನ ಪ್ರತಿಮೆಗಳನು ಸರ್ಕಲುಗಳಲಿಟ್ಟು
ನಿನ್ನ ಹೆಸರನು ಬೀದಿ ಬಾಜಾರಗಳಿಗಿಟ್ಟು
ನಿನ್ನ ಚಿತ್ರವ ನೋಟು ನಾಣ್ಯಗಳ ಮೇಲಿಟ್ಟು
ನಿನ್ನನ್ನೆ ಮರೆತೀವೊ ನಾಚಿಕೆ ಬಿಟ್ಟು

ಈಶ್ವರ ಅಲ್ಲಾನು ರಾಮ ರಹೀಮನು
ಒಬ್ಬನೆ ದೇವನು ಎಂದು ನೀನೆಂದರು
ಧರ್ಮಗಳ ಹೆಸರಲ್ಲಿ ಹಿಂಸಾಕರ್ಮಗಳಲ್ಲಿ
ಕಚ್ಚಾಡಿ ಕೊಲ್ಲುವರು ಮತಾಂಧರು

ಹದ್ದು ನರಿಗಳು ತುಂಬಿ ಗುದ್ದಾಡುತೈದಾವೆ
ದೇಶವಾಗಿದೆ ಇಂದು ಕೊಳೆತು ನಾರುವ ಹೊಂಡ
ಶುದ್ಧ ಜೀವನಕೊಂದು ಮಾದರಿಯಾಗಿದ್ದಿ
ಇಂದು ನಮ್ಮನು ನೋಡಿ ಆಗುವಿ ಕೆಂಡ

ಹಣವೆ ಆಳುವುದೀಗ ಸ್ವಾರ್ಥಕ್ಕೆ ಗದ್ದುಗೆ
ರಾಜಕಾರಣ ಸೂಳೆ ಅಟ್ಟಹಾಸ
ನಿನ್ನ ಆದರ್ಶಗಳ ಗಾಳಿಗೆ ತೂರುತ್ತ
ಸಾಮಾನ್ಯ ಜನರಿಗೆ ಪೂರಾ ಮೋಸ

ಏನಂತ ನೆನೆಯಲಿ ಏನೆಂದು ನೆನೆಯಲಿ
ವರುಷಕೊಮ್ಮೆ ನಿನ್ನ ಗಾಂಧಿ ತಾತ
ಕತ್ತಲೆ ತುಂಬಿದ ದೇಶದಲಿ ಬೆಳಕನ್ನು
ಹೇಗೆ ತರುವಿಯೋ ನೋಡೊ ನೀನೆ ತ್ರಾತ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...