Home / ಕವನ / ಕವಿತೆ / ಗಾಂಧಿ

ಗಾಂಧಿ

ಮೋಹನದಾಸ ಕರಮಚಂದ್ ಗಾಂಧೀ ನೀನೇ
ಭಾರತ ದೇಶದ ತಂದೀ
ಗುಜರಾತಿನ ಪೋರ್ಬಂದರಿನಲಿ ಹುಟ್ಟಿಬಂದಿ
ಜಗದಗಲ ಮುಗಿಲಗಲ ಬೆಳೆದು ವ್ಯಾಪಿಸಿ ನಿಂದಿ

ನಮ್ಮಂತೆ ಸಾಮಾನ್ಯನಾಗಿಯೆ ಹುಟ್ಟಿದಿ
ಜಗಕೆಲ್ಲ ಸನ್ಮಾನ್ಯ ಮಹಾತ್ಮನೆನಿಸಿದಿ
ಬುದ್ಧ ಏಸುವಿನಂತೆ ಪೈಗಂಬರನಂತೆ
ಮಾನವ ಕುಲಕೆಲ್ಲ ಕುಲದೀಪ ನೀನಾದಿ

ಯುಗಕೊಮ್ಮೆ ಮೂಡುವ ಜನಮನದಾದರ್ಶ
ಯುಗದ ಅಚ್ಚರಿ ನೀನು ನವಯುಗದ ಕರ್ತ
ಕೆಳಗೆ ಬಿದ್ದವರನು ದೀನ ದಲಿತರನ್ನು
ತಬ್ಬಿ ಮೇಲೆತ್ತಲು ಬಂದೆಯೊ ತಾತ

ನಿನ್ನ ಪ್ರತಿಮೆಗಳನು ಸರ್ಕಲುಗಳಲಿಟ್ಟು
ನಿನ್ನ ಹೆಸರನು ಬೀದಿ ಬಾಜಾರಗಳಿಗಿಟ್ಟು
ನಿನ್ನ ಚಿತ್ರವ ನೋಟು ನಾಣ್ಯಗಳ ಮೇಲಿಟ್ಟು
ನಿನ್ನನ್ನೆ ಮರೆತೀವೊ ನಾಚಿಕೆ ಬಿಟ್ಟು

ಈಶ್ವರ ಅಲ್ಲಾನು ರಾಮ ರಹೀಮನು
ಒಬ್ಬನೆ ದೇವನು ಎಂದು ನೀನೆಂದರು
ಧರ್ಮಗಳ ಹೆಸರಲ್ಲಿ ಹಿಂಸಾಕರ್ಮಗಳಲ್ಲಿ
ಕಚ್ಚಾಡಿ ಕೊಲ್ಲುವರು ಮತಾಂಧರು

ಹದ್ದು ನರಿಗಳು ತುಂಬಿ ಗುದ್ದಾಡುತೈದಾವೆ
ದೇಶವಾಗಿದೆ ಇಂದು ಕೊಳೆತು ನಾರುವ ಹೊಂಡ
ಶುದ್ಧ ಜೀವನಕೊಂದು ಮಾದರಿಯಾಗಿದ್ದಿ
ಇಂದು ನಮ್ಮನು ನೋಡಿ ಆಗುವಿ ಕೆಂಡ

ಹಣವೆ ಆಳುವುದೀಗ ಸ್ವಾರ್ಥಕ್ಕೆ ಗದ್ದುಗೆ
ರಾಜಕಾರಣ ಸೂಳೆ ಅಟ್ಟಹಾಸ
ನಿನ್ನ ಆದರ್ಶಗಳ ಗಾಳಿಗೆ ತೂರುತ್ತ
ಸಾಮಾನ್ಯ ಜನರಿಗೆ ಪೂರಾ ಮೋಸ

ಏನಂತ ನೆನೆಯಲಿ ಏನೆಂದು ನೆನೆಯಲಿ
ವರುಷಕೊಮ್ಮೆ ನಿನ್ನ ಗಾಂಧಿ ತಾತ
ಕತ್ತಲೆ ತುಂಬಿದ ದೇಶದಲಿ ಬೆಳಕನ್ನು
ಹೇಗೆ ತರುವಿಯೋ ನೋಡೊ ನೀನೆ ತ್ರಾತ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...