Home / ಕವನ / ಕವಿತೆ / ಗಾಂಧಿ

ಗಾಂಧಿ

ಮೋಹನದಾಸ ಕರಮಚಂದ್ ಗಾಂಧೀ ನೀನೇ
ಭಾರತ ದೇಶದ ತಂದೀ
ಗುಜರಾತಿನ ಪೋರ್ಬಂದರಿನಲಿ ಹುಟ್ಟಿಬಂದಿ
ಜಗದಗಲ ಮುಗಿಲಗಲ ಬೆಳೆದು ವ್ಯಾಪಿಸಿ ನಿಂದಿ

ನಮ್ಮಂತೆ ಸಾಮಾನ್ಯನಾಗಿಯೆ ಹುಟ್ಟಿದಿ
ಜಗಕೆಲ್ಲ ಸನ್ಮಾನ್ಯ ಮಹಾತ್ಮನೆನಿಸಿದಿ
ಬುದ್ಧ ಏಸುವಿನಂತೆ ಪೈಗಂಬರನಂತೆ
ಮಾನವ ಕುಲಕೆಲ್ಲ ಕುಲದೀಪ ನೀನಾದಿ

ಯುಗಕೊಮ್ಮೆ ಮೂಡುವ ಜನಮನದಾದರ್ಶ
ಯುಗದ ಅಚ್ಚರಿ ನೀನು ನವಯುಗದ ಕರ್ತ
ಕೆಳಗೆ ಬಿದ್ದವರನು ದೀನ ದಲಿತರನ್ನು
ತಬ್ಬಿ ಮೇಲೆತ್ತಲು ಬಂದೆಯೊ ತಾತ

ನಿನ್ನ ಪ್ರತಿಮೆಗಳನು ಸರ್ಕಲುಗಳಲಿಟ್ಟು
ನಿನ್ನ ಹೆಸರನು ಬೀದಿ ಬಾಜಾರಗಳಿಗಿಟ್ಟು
ನಿನ್ನ ಚಿತ್ರವ ನೋಟು ನಾಣ್ಯಗಳ ಮೇಲಿಟ್ಟು
ನಿನ್ನನ್ನೆ ಮರೆತೀವೊ ನಾಚಿಕೆ ಬಿಟ್ಟು

ಈಶ್ವರ ಅಲ್ಲಾನು ರಾಮ ರಹೀಮನು
ಒಬ್ಬನೆ ದೇವನು ಎಂದು ನೀನೆಂದರು
ಧರ್ಮಗಳ ಹೆಸರಲ್ಲಿ ಹಿಂಸಾಕರ್ಮಗಳಲ್ಲಿ
ಕಚ್ಚಾಡಿ ಕೊಲ್ಲುವರು ಮತಾಂಧರು

ಹದ್ದು ನರಿಗಳು ತುಂಬಿ ಗುದ್ದಾಡುತೈದಾವೆ
ದೇಶವಾಗಿದೆ ಇಂದು ಕೊಳೆತು ನಾರುವ ಹೊಂಡ
ಶುದ್ಧ ಜೀವನಕೊಂದು ಮಾದರಿಯಾಗಿದ್ದಿ
ಇಂದು ನಮ್ಮನು ನೋಡಿ ಆಗುವಿ ಕೆಂಡ

ಹಣವೆ ಆಳುವುದೀಗ ಸ್ವಾರ್ಥಕ್ಕೆ ಗದ್ದುಗೆ
ರಾಜಕಾರಣ ಸೂಳೆ ಅಟ್ಟಹಾಸ
ನಿನ್ನ ಆದರ್ಶಗಳ ಗಾಳಿಗೆ ತೂರುತ್ತ
ಸಾಮಾನ್ಯ ಜನರಿಗೆ ಪೂರಾ ಮೋಸ

ಏನಂತ ನೆನೆಯಲಿ ಏನೆಂದು ನೆನೆಯಲಿ
ವರುಷಕೊಮ್ಮೆ ನಿನ್ನ ಗಾಂಧಿ ತಾತ
ಕತ್ತಲೆ ತುಂಬಿದ ದೇಶದಲಿ ಬೆಳಕನ್ನು
ಹೇಗೆ ತರುವಿಯೋ ನೋಡೊ ನೀನೆ ತ್ರಾತ ||
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್