Home / ಕವನ / ಕವಿತೆ / ಗಾಂಧಿ

ಗಾಂಧಿ

ಮೋಹನದಾಸ ಕರಮಚಂದ್ ಗಾಂಧೀ ನೀನೇ
ಭಾರತ ದೇಶದ ತಂದೀ
ಗುಜರಾತಿನ ಪೋರ್ಬಂದರಿನಲಿ ಹುಟ್ಟಿಬಂದಿ
ಜಗದಗಲ ಮುಗಿಲಗಲ ಬೆಳೆದು ವ್ಯಾಪಿಸಿ ನಿಂದಿ

ನಮ್ಮಂತೆ ಸಾಮಾನ್ಯನಾಗಿಯೆ ಹುಟ್ಟಿದಿ
ಜಗಕೆಲ್ಲ ಸನ್ಮಾನ್ಯ ಮಹಾತ್ಮನೆನಿಸಿದಿ
ಬುದ್ಧ ಏಸುವಿನಂತೆ ಪೈಗಂಬರನಂತೆ
ಮಾನವ ಕುಲಕೆಲ್ಲ ಕುಲದೀಪ ನೀನಾದಿ

ಯುಗಕೊಮ್ಮೆ ಮೂಡುವ ಜನಮನದಾದರ್ಶ
ಯುಗದ ಅಚ್ಚರಿ ನೀನು ನವಯುಗದ ಕರ್ತ
ಕೆಳಗೆ ಬಿದ್ದವರನು ದೀನ ದಲಿತರನ್ನು
ತಬ್ಬಿ ಮೇಲೆತ್ತಲು ಬಂದೆಯೊ ತಾತ

ನಿನ್ನ ಪ್ರತಿಮೆಗಳನು ಸರ್ಕಲುಗಳಲಿಟ್ಟು
ನಿನ್ನ ಹೆಸರನು ಬೀದಿ ಬಾಜಾರಗಳಿಗಿಟ್ಟು
ನಿನ್ನ ಚಿತ್ರವ ನೋಟು ನಾಣ್ಯಗಳ ಮೇಲಿಟ್ಟು
ನಿನ್ನನ್ನೆ ಮರೆತೀವೊ ನಾಚಿಕೆ ಬಿಟ್ಟು

ಈಶ್ವರ ಅಲ್ಲಾನು ರಾಮ ರಹೀಮನು
ಒಬ್ಬನೆ ದೇವನು ಎಂದು ನೀನೆಂದರು
ಧರ್ಮಗಳ ಹೆಸರಲ್ಲಿ ಹಿಂಸಾಕರ್ಮಗಳಲ್ಲಿ
ಕಚ್ಚಾಡಿ ಕೊಲ್ಲುವರು ಮತಾಂಧರು

ಹದ್ದು ನರಿಗಳು ತುಂಬಿ ಗುದ್ದಾಡುತೈದಾವೆ
ದೇಶವಾಗಿದೆ ಇಂದು ಕೊಳೆತು ನಾರುವ ಹೊಂಡ
ಶುದ್ಧ ಜೀವನಕೊಂದು ಮಾದರಿಯಾಗಿದ್ದಿ
ಇಂದು ನಮ್ಮನು ನೋಡಿ ಆಗುವಿ ಕೆಂಡ

ಹಣವೆ ಆಳುವುದೀಗ ಸ್ವಾರ್ಥಕ್ಕೆ ಗದ್ದುಗೆ
ರಾಜಕಾರಣ ಸೂಳೆ ಅಟ್ಟಹಾಸ
ನಿನ್ನ ಆದರ್ಶಗಳ ಗಾಳಿಗೆ ತೂರುತ್ತ
ಸಾಮಾನ್ಯ ಜನರಿಗೆ ಪೂರಾ ಮೋಸ

ಏನಂತ ನೆನೆಯಲಿ ಏನೆಂದು ನೆನೆಯಲಿ
ವರುಷಕೊಮ್ಮೆ ನಿನ್ನ ಗಾಂಧಿ ತಾತ
ಕತ್ತಲೆ ತುಂಬಿದ ದೇಶದಲಿ ಬೆಳಕನ್ನು
ಹೇಗೆ ತರುವಿಯೋ ನೋಡೊ ನೀನೆ ತ್ರಾತ ||
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...