Home / ಕವನ / ಕವಿತೆ / ಕಾಲಪುರುಷನ ಕುರಿತು

ಕಾಲಪುರುಷನ ಕುರಿತು

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು?
ಬಾರಯ್ಯ ಬಾ!! ಶಕಪುರುಷ…
ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?!
ಈ ನಿನ್ನ ಬರುವಿಕೆಯಲ್ಲಿ?!
ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ!
*

ಬರುವೆ! ಬಂದೇ ಬರುವೆ!!  ಸಂಕ್ರಮಣ ರಾಮ, ನೀ ಚೆನ್ನಿಗರಾಮನಲ್ಲವೇ?
ವರ್ಷ ವರ್ಷ… ಅದೆಂಥಾ ಹರ್ಷವಯ್ಯ ನಿನಗೆ??
ನೀ ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಹುಲಿ, ಸಿಂಹನೇರಿ
ಬರುವೆಯಲ್ಲಯ್ಯಾ?!
ನೀ ಸಾಮನ್ಯನೇನಯ್ಯ?! ಏನನೇರಿ ಬಂದರೂ, ಕುಸ್ತಿ ಒಗೆವೆನಲ್ಲಯ್ಯ?!
*

ನೀ ಬರುವ ಹಾದಿಲಿ: ಕೊಲೆಂಟು, ಸುಲಿಗೆವುಂಟು, ರಕ್ತರಂಜಿತ,
ವರ್ಣರಂಜಿತ, ವಿನಾ ಕಾರಣ ಅವಮಾನ, ಅಪಮಾನವುಂಟು!
ಯುದ್ಧ ಘೋಷಿತ, ಸುನಾಮಿ, ಲೈಲಾ, ಗುಡುಗು, ಸಿಡಿಲು,
ಅಬ್ಬಬ್ಬಾ… ವಿಮಾನ, ಅಗ್ನಿದುರಂತ, ತೈಲ ಸೋರಿಕೆ…
ಎನೆಲ್ಲ ಉಬ್ಬರವಿಳಿತ! ಬರೀ ವಿಭ್ರಮ ಭ್ರಮರಿ ವಿದ್ವುಂಸ ಕುಕೃತ್ಯಗಳೇನು?!
*

ದೇಶದಾ ಉದ್ದಗಲಕೂ ಏನೆಲ್ಲ ಲೇಲೆ, ಹಳವಂಡಗಳಯ್ಯ??
ಎಳೆ ಗರ್ಭಗಳ ಅರಾತುರಿ ಸೀಳಿದ ಖೂಳ ರಕ್ಕಸ ನೀಽ…
ಕಟ್ಟೆಯೊಡೆದು, ಸುದರ್ಶನ ಚಕ್ರವಿಡಿದು ಝೇಂಕರಿಸುತ್ತಾ
ರಾಹು ಮಂಡಲಗಳ ದಾಟಿ, ವೃತ್ತಾಕಾರದಲಿ ನೀ ಬಾರಯ್ಯ! ಬಾ…
*

ಎನು ನಿನ್ನ ಲೀಲೆಯೋ? ಮಾಯೆಯೋ ಜನನ… ಮರಣವೋ?
ನಾಳೆ ನಾಡಿದ್ದು ನಿನ್ನೆ ಮೊನ್ನೆಗಳ ಎಡತಾಕಿಸುತ್ತಾ
ಸ್ಥಾವರ ಜಂಗಮ, ಸಂಗಮಗಳ ಜಪಿ ಜಪಿಸುತ್ತಾ
ಕಂಪ್ಯೂಟರ್‍, ಟೀವಿ, ಇಂಟರ್‌ನೆಟ್, ಐಟಿ, ಬಿಟಿಗಳಲ್ಲಿ ನಿನ್ನ ಜಾಲವೋ…
*

ಸೆಲ್‌ಪೋನಿಂದಲೇ ಗದೆ ಬಿಟ್ಟು, ಬಾಣತೊಟ್ಟು, ಮಕ್ಕಳ್ಹೆರುವ
ಸಹಸ್ತ್ರ ಪುರುಷ ಬಾರಯ್ಯ! ಬಾ…! ನವ ಶತಮಾನದ ತೇಜಾಽ…
ಯೇನೆಲ್ಲ ಅವತಾರ, ಲೇಲೆ, ವಿನೋದ, ಭೀಕರವಯ್ಯ?!
ಸುಮ್ಮನಿರೆ ಉಂಡಬಾನ, ಕುಡಿದ ನೀರು ಪಥ್ಯವಾಗದೇನಯ್ಯ?!
*

ಅಯ್ಯ ದುರುಳ ದುರ್‍ಯೋಧನ, ದುಶ್ಯಾಸನ, ಶಕುನಿ, ಕಂಸ, ಕೀಚಕ,
ರಾವಣ, ಕೊಂಡಿಮಂಚಣ್ಣ, ಮಲ್ಲಪ್ಪಶೆಟ್ಟಿ, ಮೀರ್‌ಸಾಧಿಕ್…
ಕುಂಭಕರ್ಣ, ಸೂರ್ಪನಖಿ, ಮಂಥೆರೆ, ಮಂಡೋದರಿ, ಅಹಲ್ಯೆರೆಲ್ಲ
ಅರಮನೆ, ಸೆರೆಮನೆಯೊಳಗಿಲ್ಲ!
ಮನೆ, ಮನಗಳಲ್ಲಿ, ರಕ್ತಾ ಬೀಜಾಸುರರಾಗಿ, ಮೃತ್ಯುಂಜಯರಾಗಿ
ವಿಜೃಂಭಿಸಿಹರಲ್ಲ?!
ನಿನ್ನ ಆಗಮನ, ನಿರ್ಗಮನ ಮಾತ್ರ ಎದ್ದು ಕಾಣುವುದು!
*

ಅಯ್ಯೋ ಕಗ್ಗತ್ತಲೆ ತುಂಬಿ ತುಳುಕಿ, ಹಗಲೇ ಕೊಲೆ, ಸುಲಿಗೆ, ದರೋಡೆ,
ಮಾನಭಂಗವೇ?? ಶಾಸಕರ ಕತ್ತೆ, ಕುದುರೆ ವ್ಯಾಪಾರವೇ…
ಕಾಲಪುರುಷನ ಹೆಸರಲಿ, ಸಾಲೆ, ಕುತ್ತೆ, ಗದ್ದುಗೆ ಹಿಡಿದು, ಗುದ್ದಾಟ
ನಡೆಸಿಹರಲ್ಲ?! ವಿಶ್ವಾಸ ಮತಕೆ ಷಡ್ಯಂತ್ರ ಬಳಸಿಹರಲ್ಲ…
ಉದ್ಧಾರ, ಪ್ರಗತಿ, ಸುಧಾರಣೆ, ಸಹಾಯ ಹಸ್ತ, ಬರೀ ಕನವರಿಕೆಗಳೇ ಆದವಲ್ಲಾ…
ಬುದ್ಧ, ಬಸವ, ಅಂಬೇಡ್ಕರ್‍, ಮದರ್‍ ತೆರೀಸಾರಂಥವ್ರಿನ್ನು ಬರಲಿಲ್ಲ ಯಾಕೆ??
*

ಈ ನಿನ್ನ ಆಗಮನಕೆ, ತಳಿರು ತೋರಣಕಟ್ಟಿ,
ರಾತ್ರಿಯೆಲ್ಲ ಕುಡಿದು, ಕುಣಿದು, ಕುಪ್ಪಳಿಸಿ,
ಸಿಡಿಮದ್ದು ಸಿಡಿಸುವುದೂ ವ್ಯರ್ಥ…
ಇದು ಹೀನ ಸಂಸ್ಕೃತಿಯಲ್ಲದೆ ಇನ್ನೇನು?
ನೀ ಬಂದು ಕಿಸುದು ಗುಡ್ಡೆ ಹಾಕಿದ್ದಾರೂ ಇನ್ನೇನು?!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...