Home / ಕವನ / ಕವಿತೆ / ಕಾಲಪುರುಷನ ಕುರಿತು

ಕಾಲಪುರುಷನ ಕುರಿತು

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು?
ಬಾರಯ್ಯ ಬಾ!! ಶಕಪುರುಷ…
ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?!
ಈ ನಿನ್ನ ಬರುವಿಕೆಯಲ್ಲಿ?!
ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ!
*

ಬರುವೆ! ಬಂದೇ ಬರುವೆ!!  ಸಂಕ್ರಮಣ ರಾಮ, ನೀ ಚೆನ್ನಿಗರಾಮನಲ್ಲವೇ?
ವರ್ಷ ವರ್ಷ… ಅದೆಂಥಾ ಹರ್ಷವಯ್ಯ ನಿನಗೆ??
ನೀ ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಹುಲಿ, ಸಿಂಹನೇರಿ
ಬರುವೆಯಲ್ಲಯ್ಯಾ?!
ನೀ ಸಾಮನ್ಯನೇನಯ್ಯ?! ಏನನೇರಿ ಬಂದರೂ, ಕುಸ್ತಿ ಒಗೆವೆನಲ್ಲಯ್ಯ?!
*

ನೀ ಬರುವ ಹಾದಿಲಿ: ಕೊಲೆಂಟು, ಸುಲಿಗೆವುಂಟು, ರಕ್ತರಂಜಿತ,
ವರ್ಣರಂಜಿತ, ವಿನಾ ಕಾರಣ ಅವಮಾನ, ಅಪಮಾನವುಂಟು!
ಯುದ್ಧ ಘೋಷಿತ, ಸುನಾಮಿ, ಲೈಲಾ, ಗುಡುಗು, ಸಿಡಿಲು,
ಅಬ್ಬಬ್ಬಾ… ವಿಮಾನ, ಅಗ್ನಿದುರಂತ, ತೈಲ ಸೋರಿಕೆ…
ಎನೆಲ್ಲ ಉಬ್ಬರವಿಳಿತ! ಬರೀ ವಿಭ್ರಮ ಭ್ರಮರಿ ವಿದ್ವುಂಸ ಕುಕೃತ್ಯಗಳೇನು?!
*

ದೇಶದಾ ಉದ್ದಗಲಕೂ ಏನೆಲ್ಲ ಲೇಲೆ, ಹಳವಂಡಗಳಯ್ಯ??
ಎಳೆ ಗರ್ಭಗಳ ಅರಾತುರಿ ಸೀಳಿದ ಖೂಳ ರಕ್ಕಸ ನೀಽ…
ಕಟ್ಟೆಯೊಡೆದು, ಸುದರ್ಶನ ಚಕ್ರವಿಡಿದು ಝೇಂಕರಿಸುತ್ತಾ
ರಾಹು ಮಂಡಲಗಳ ದಾಟಿ, ವೃತ್ತಾಕಾರದಲಿ ನೀ ಬಾರಯ್ಯ! ಬಾ…
*

ಎನು ನಿನ್ನ ಲೀಲೆಯೋ? ಮಾಯೆಯೋ ಜನನ… ಮರಣವೋ?
ನಾಳೆ ನಾಡಿದ್ದು ನಿನ್ನೆ ಮೊನ್ನೆಗಳ ಎಡತಾಕಿಸುತ್ತಾ
ಸ್ಥಾವರ ಜಂಗಮ, ಸಂಗಮಗಳ ಜಪಿ ಜಪಿಸುತ್ತಾ
ಕಂಪ್ಯೂಟರ್‍, ಟೀವಿ, ಇಂಟರ್‌ನೆಟ್, ಐಟಿ, ಬಿಟಿಗಳಲ್ಲಿ ನಿನ್ನ ಜಾಲವೋ…
*

ಸೆಲ್‌ಪೋನಿಂದಲೇ ಗದೆ ಬಿಟ್ಟು, ಬಾಣತೊಟ್ಟು, ಮಕ್ಕಳ್ಹೆರುವ
ಸಹಸ್ತ್ರ ಪುರುಷ ಬಾರಯ್ಯ! ಬಾ…! ನವ ಶತಮಾನದ ತೇಜಾಽ…
ಯೇನೆಲ್ಲ ಅವತಾರ, ಲೇಲೆ, ವಿನೋದ, ಭೀಕರವಯ್ಯ?!
ಸುಮ್ಮನಿರೆ ಉಂಡಬಾನ, ಕುಡಿದ ನೀರು ಪಥ್ಯವಾಗದೇನಯ್ಯ?!
*

ಅಯ್ಯ ದುರುಳ ದುರ್‍ಯೋಧನ, ದುಶ್ಯಾಸನ, ಶಕುನಿ, ಕಂಸ, ಕೀಚಕ,
ರಾವಣ, ಕೊಂಡಿಮಂಚಣ್ಣ, ಮಲ್ಲಪ್ಪಶೆಟ್ಟಿ, ಮೀರ್‌ಸಾಧಿಕ್…
ಕುಂಭಕರ್ಣ, ಸೂರ್ಪನಖಿ, ಮಂಥೆರೆ, ಮಂಡೋದರಿ, ಅಹಲ್ಯೆರೆಲ್ಲ
ಅರಮನೆ, ಸೆರೆಮನೆಯೊಳಗಿಲ್ಲ!
ಮನೆ, ಮನಗಳಲ್ಲಿ, ರಕ್ತಾ ಬೀಜಾಸುರರಾಗಿ, ಮೃತ್ಯುಂಜಯರಾಗಿ
ವಿಜೃಂಭಿಸಿಹರಲ್ಲ?!
ನಿನ್ನ ಆಗಮನ, ನಿರ್ಗಮನ ಮಾತ್ರ ಎದ್ದು ಕಾಣುವುದು!
*

ಅಯ್ಯೋ ಕಗ್ಗತ್ತಲೆ ತುಂಬಿ ತುಳುಕಿ, ಹಗಲೇ ಕೊಲೆ, ಸುಲಿಗೆ, ದರೋಡೆ,
ಮಾನಭಂಗವೇ?? ಶಾಸಕರ ಕತ್ತೆ, ಕುದುರೆ ವ್ಯಾಪಾರವೇ…
ಕಾಲಪುರುಷನ ಹೆಸರಲಿ, ಸಾಲೆ, ಕುತ್ತೆ, ಗದ್ದುಗೆ ಹಿಡಿದು, ಗುದ್ದಾಟ
ನಡೆಸಿಹರಲ್ಲ?! ವಿಶ್ವಾಸ ಮತಕೆ ಷಡ್ಯಂತ್ರ ಬಳಸಿಹರಲ್ಲ…
ಉದ್ಧಾರ, ಪ್ರಗತಿ, ಸುಧಾರಣೆ, ಸಹಾಯ ಹಸ್ತ, ಬರೀ ಕನವರಿಕೆಗಳೇ ಆದವಲ್ಲಾ…
ಬುದ್ಧ, ಬಸವ, ಅಂಬೇಡ್ಕರ್‍, ಮದರ್‍ ತೆರೀಸಾರಂಥವ್ರಿನ್ನು ಬರಲಿಲ್ಲ ಯಾಕೆ??
*

ಈ ನಿನ್ನ ಆಗಮನಕೆ, ತಳಿರು ತೋರಣಕಟ್ಟಿ,
ರಾತ್ರಿಯೆಲ್ಲ ಕುಡಿದು, ಕುಣಿದು, ಕುಪ್ಪಳಿಸಿ,
ಸಿಡಿಮದ್ದು ಸಿಡಿಸುವುದೂ ವ್ಯರ್ಥ…
ಇದು ಹೀನ ಸಂಸ್ಕೃತಿಯಲ್ಲದೆ ಇನ್ನೇನು?
ನೀ ಬಂದು ಕಿಸುದು ಗುಡ್ಡೆ ಹಾಕಿದ್ದಾರೂ ಇನ್ನೇನು?!
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...