Home / ಕವನ / ಕವಿತೆ / ಕಾಲಪುರುಷನ ಕುರಿತು

ಕಾಲಪುರುಷನ ಕುರಿತು

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು?
ಬಾರಯ್ಯ ಬಾ!! ಶಕಪುರುಷ…
ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?!
ಈ ನಿನ್ನ ಬರುವಿಕೆಯಲ್ಲಿ?!
ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ!
*

ಬರುವೆ! ಬಂದೇ ಬರುವೆ!!  ಸಂಕ್ರಮಣ ರಾಮ, ನೀ ಚೆನ್ನಿಗರಾಮನಲ್ಲವೇ?
ವರ್ಷ ವರ್ಷ… ಅದೆಂಥಾ ಹರ್ಷವಯ್ಯ ನಿನಗೆ??
ನೀ ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಹುಲಿ, ಸಿಂಹನೇರಿ
ಬರುವೆಯಲ್ಲಯ್ಯಾ?!
ನೀ ಸಾಮನ್ಯನೇನಯ್ಯ?! ಏನನೇರಿ ಬಂದರೂ, ಕುಸ್ತಿ ಒಗೆವೆನಲ್ಲಯ್ಯ?!
*

ನೀ ಬರುವ ಹಾದಿಲಿ: ಕೊಲೆಂಟು, ಸುಲಿಗೆವುಂಟು, ರಕ್ತರಂಜಿತ,
ವರ್ಣರಂಜಿತ, ವಿನಾ ಕಾರಣ ಅವಮಾನ, ಅಪಮಾನವುಂಟು!
ಯುದ್ಧ ಘೋಷಿತ, ಸುನಾಮಿ, ಲೈಲಾ, ಗುಡುಗು, ಸಿಡಿಲು,
ಅಬ್ಬಬ್ಬಾ… ವಿಮಾನ, ಅಗ್ನಿದುರಂತ, ತೈಲ ಸೋರಿಕೆ…
ಎನೆಲ್ಲ ಉಬ್ಬರವಿಳಿತ! ಬರೀ ವಿಭ್ರಮ ಭ್ರಮರಿ ವಿದ್ವುಂಸ ಕುಕೃತ್ಯಗಳೇನು?!
*

ದೇಶದಾ ಉದ್ದಗಲಕೂ ಏನೆಲ್ಲ ಲೇಲೆ, ಹಳವಂಡಗಳಯ್ಯ??
ಎಳೆ ಗರ್ಭಗಳ ಅರಾತುರಿ ಸೀಳಿದ ಖೂಳ ರಕ್ಕಸ ನೀಽ…
ಕಟ್ಟೆಯೊಡೆದು, ಸುದರ್ಶನ ಚಕ್ರವಿಡಿದು ಝೇಂಕರಿಸುತ್ತಾ
ರಾಹು ಮಂಡಲಗಳ ದಾಟಿ, ವೃತ್ತಾಕಾರದಲಿ ನೀ ಬಾರಯ್ಯ! ಬಾ…
*

ಎನು ನಿನ್ನ ಲೀಲೆಯೋ? ಮಾಯೆಯೋ ಜನನ… ಮರಣವೋ?
ನಾಳೆ ನಾಡಿದ್ದು ನಿನ್ನೆ ಮೊನ್ನೆಗಳ ಎಡತಾಕಿಸುತ್ತಾ
ಸ್ಥಾವರ ಜಂಗಮ, ಸಂಗಮಗಳ ಜಪಿ ಜಪಿಸುತ್ತಾ
ಕಂಪ್ಯೂಟರ್‍, ಟೀವಿ, ಇಂಟರ್‌ನೆಟ್, ಐಟಿ, ಬಿಟಿಗಳಲ್ಲಿ ನಿನ್ನ ಜಾಲವೋ…
*

ಸೆಲ್‌ಪೋನಿಂದಲೇ ಗದೆ ಬಿಟ್ಟು, ಬಾಣತೊಟ್ಟು, ಮಕ್ಕಳ್ಹೆರುವ
ಸಹಸ್ತ್ರ ಪುರುಷ ಬಾರಯ್ಯ! ಬಾ…! ನವ ಶತಮಾನದ ತೇಜಾಽ…
ಯೇನೆಲ್ಲ ಅವತಾರ, ಲೇಲೆ, ವಿನೋದ, ಭೀಕರವಯ್ಯ?!
ಸುಮ್ಮನಿರೆ ಉಂಡಬಾನ, ಕುಡಿದ ನೀರು ಪಥ್ಯವಾಗದೇನಯ್ಯ?!
*

ಅಯ್ಯ ದುರುಳ ದುರ್‍ಯೋಧನ, ದುಶ್ಯಾಸನ, ಶಕುನಿ, ಕಂಸ, ಕೀಚಕ,
ರಾವಣ, ಕೊಂಡಿಮಂಚಣ್ಣ, ಮಲ್ಲಪ್ಪಶೆಟ್ಟಿ, ಮೀರ್‌ಸಾಧಿಕ್…
ಕುಂಭಕರ್ಣ, ಸೂರ್ಪನಖಿ, ಮಂಥೆರೆ, ಮಂಡೋದರಿ, ಅಹಲ್ಯೆರೆಲ್ಲ
ಅರಮನೆ, ಸೆರೆಮನೆಯೊಳಗಿಲ್ಲ!
ಮನೆ, ಮನಗಳಲ್ಲಿ, ರಕ್ತಾ ಬೀಜಾಸುರರಾಗಿ, ಮೃತ್ಯುಂಜಯರಾಗಿ
ವಿಜೃಂಭಿಸಿಹರಲ್ಲ?!
ನಿನ್ನ ಆಗಮನ, ನಿರ್ಗಮನ ಮಾತ್ರ ಎದ್ದು ಕಾಣುವುದು!
*

ಅಯ್ಯೋ ಕಗ್ಗತ್ತಲೆ ತುಂಬಿ ತುಳುಕಿ, ಹಗಲೇ ಕೊಲೆ, ಸುಲಿಗೆ, ದರೋಡೆ,
ಮಾನಭಂಗವೇ?? ಶಾಸಕರ ಕತ್ತೆ, ಕುದುರೆ ವ್ಯಾಪಾರವೇ…
ಕಾಲಪುರುಷನ ಹೆಸರಲಿ, ಸಾಲೆ, ಕುತ್ತೆ, ಗದ್ದುಗೆ ಹಿಡಿದು, ಗುದ್ದಾಟ
ನಡೆಸಿಹರಲ್ಲ?! ವಿಶ್ವಾಸ ಮತಕೆ ಷಡ್ಯಂತ್ರ ಬಳಸಿಹರಲ್ಲ…
ಉದ್ಧಾರ, ಪ್ರಗತಿ, ಸುಧಾರಣೆ, ಸಹಾಯ ಹಸ್ತ, ಬರೀ ಕನವರಿಕೆಗಳೇ ಆದವಲ್ಲಾ…
ಬುದ್ಧ, ಬಸವ, ಅಂಬೇಡ್ಕರ್‍, ಮದರ್‍ ತೆರೀಸಾರಂಥವ್ರಿನ್ನು ಬರಲಿಲ್ಲ ಯಾಕೆ??
*

ಈ ನಿನ್ನ ಆಗಮನಕೆ, ತಳಿರು ತೋರಣಕಟ್ಟಿ,
ರಾತ್ರಿಯೆಲ್ಲ ಕುಡಿದು, ಕುಣಿದು, ಕುಪ್ಪಳಿಸಿ,
ಸಿಡಿಮದ್ದು ಸಿಡಿಸುವುದೂ ವ್ಯರ್ಥ…
ಇದು ಹೀನ ಸಂಸ್ಕೃತಿಯಲ್ಲದೆ ಇನ್ನೇನು?
ನೀ ಬಂದು ಕಿಸುದು ಗುಡ್ಡೆ ಹಾಕಿದ್ದಾರೂ ಇನ್ನೇನು?!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...